ಬರೆಯಬೇಕು ಚಿತ್ತಾರ
ಅಂಗಳಕ್ಕೊಂದು ಶೃಂಗಾರ
ಕಸಕಡ್ಡಿ ಕಲ್ಲು ಮಣ್ಣು
ಗುಡಿಸಿ ತೊಳೆದು ಬಳಿದು
ನೆಲವಾಗಬೇಕು ಬಂಗಾರ
ಬರೆಯಬೇಕು ಚಿತ್ತಾರ
ಚಿತ್ತಾರವಾಗಬೇಕು ಸುಂದರ
ಉದ್ದ ಗೆರೆಗಳಾದರೆ ಲೇಸು
ಅಡ್ಡ ಗೆರೆಗಳಾದರೆ ಸಲೀಸು
ಸಣ್ಣ ಚುಕ್ಕಿ ದೊಡ್ಡ ಚುಕ್ಕಿ
ಕೂಡಿ ಬರೆಯಬೇಕು
ವಕ್ರವಾದರೆ ವಕ್ರ
ನೇರವಾದರೆ ನೇರ
ರಂಗೋಲಿ ಬರೆವ ಕೈ
ಮಿಗಿಲಾಗಿ ಮನಸ್ಸು
ತಿಳಿಯಾಗಿ ಪರಿಶುದ್ಧವಾಗಿ
ಆಗಷ್ಟೇ ಚಿತ್ತಾರಕ್ಕೊಂದು ಜೀವ
ಅನನ್ಯತೆಯ ಭಾವ
ಚಿತ್ತಾರವೇನು ಶಾಶ್ವತವಲ್ಲ
ಕಾಲ್ತುಳಿತಕ್ಕೆ ಬಿರುಗಾಳಿ ಮಳೆಗೆ
ನೊಂದು ನಲುಗಬಹುದು
ಮಳೆಯ ಆರ್ಭಟಕೆ
ಕೊಚ್ಚಿ ಹೋಗಲು ಬಹುದು
ಅದೃಷ್ಟ ಆಯಸ್ಸಿದ್ದರೆ
ಸೂರ್ಯ ಅಸ್ತಮಿಸುವರೆಗೂ
ಚಂದ್ರ ತಾರೆಗಳ ಅಂದ
ಸವಿಯಲೂ ಬಹುದು
ಬರೆಯುವುದಷ್ಟೇ ನಮ್ಮ ಕರ್ಮ
ಚಿತ್ತಾರದ ಅಳಿವು ಉಳಿವು
ಮೇಲಿನವನ ಧರ್ಮ
*****
Related Post
ಸಣ್ಣ ಕತೆ
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ಆಮಿಷ
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…