ಅಂಗಳಕ್ಕೊಂದು ಚಿತ್ತಾರ

ಬರೆಯಬೇಕು ಚಿತ್ತಾರ
ಅಂಗಳಕ್ಕೊಂದು ಶೃಂಗಾರ
ಕಸಕಡ್ಡಿ ಕಲ್ಲು ಮಣ್ಣು
ಗುಡಿಸಿ ತೊಳೆದು ಬಳಿದು
ನೆಲವಾಗಬೇಕು ಬಂಗಾರ
ಬರೆಯಬೇಕು ಚಿತ್ತಾರ
ಚಿತ್ತಾರವಾಗಬೇಕು ಸುಂದರ
ಉದ್ದ ಗೆರೆಗಳಾದರೆ ಲೇಸು
ಅಡ್ಡ ಗೆರೆಗಳಾದರೆ ಸಲೀಸು
ಸಣ್ಣ ಚುಕ್ಕಿ ದೊಡ್ಡ ಚುಕ್ಕಿ
ಕೂಡಿ ಬರೆಯಬೇಕು
ವಕ್ರವಾದರೆ ವಕ್ರ
ನೇರವಾದರೆ ನೇರ
ರಂಗೋಲಿ ಬರೆವ ಕೈ
ಮಿಗಿಲಾಗಿ ಮನಸ್ಸು
ತಿಳಿಯಾಗಿ ಪರಿಶುದ್ಧವಾಗಿ
ಆಗಷ್ಟೇ ಚಿತ್ತಾರಕ್ಕೊಂದು ಜೀವ
ಅನನ್ಯತೆಯ ಭಾವ
ಚಿತ್ತಾರವೇನು ಶಾಶ್ವತವಲ್ಲ
ಕಾಲ್ತುಳಿತಕ್ಕೆ ಬಿರುಗಾಳಿ ಮಳೆಗೆ
ನೊಂದು ನಲುಗಬಹುದು
ಮಳೆಯ ಆರ್ಭಟಕೆ
ಕೊಚ್ಚಿ ಹೋಗಲು ಬಹುದು
ಅದೃಷ್ಟ ಆಯಸ್ಸಿದ್ದರೆ
ಸೂರ್ಯ ಅಸ್ತಮಿಸುವರೆಗೂ
ಚಂದ್ರ ತಾರೆಗಳ ಅಂದ
ಸವಿಯಲೂ ಬಹುದು
ಬರೆಯುವುದಷ್ಟೇ ನಮ್ಮ ಕರ್ಮ
ಚಿತ್ತಾರದ ಅಳಿವು ಉಳಿವು
ಮೇಲಿನವನ ಧರ್ಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಹುಡುಕಾಟ
Next post ನೀನೆ ಉಪ್ಪು ಬ್ಯಾಳಿಯು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…