Home / ಲೇಖನ / ಇತರೆ / ವಚನ ವಿಚಾರ – ಹುಡುಕಾಟ

ವಚನ ವಿಚಾರ – ಹುಡುಕಾಟ

ಅರಸಿ ಅರಸಿ ಹಾ ಹಾ ಎನುತಿದ್ದೆನು
ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು
ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು

ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು ಸಾಲುಗಳು ಅಕ್ಕನ ವಚನದಲ್ಲೂ ಬರಬಹುದಾದಂಥವು ಅನ್ನಿಸುತ್ತದೆ. ಗುಹೇಶ್ವರ ಅನ್ನುವುದರ ಬದಲಾಗಿ ಚನ್ನಮಲ್ಲಿಕಾರ್ಜುನ ಎಂದಿದ್ದರೆ ಅವಳ ವಚನವಲ್ಲ ಅನ್ನುವ ಧೈರ್ಯ ಯಾರಿಗೆ ಬಂದೀತು! ಹಾಗೆಂದರೆ ವಚನಗಳನ್ನು ಓದಿ ನಾವು ಕಲ್ಪಿಸಿಕೊಂಡ ಅಲ್ಲಮನ ಮಾತಿನ ರೀತಿಯದಲ್ಲ ಅನ್ನಿಸುತ್ತದೆ ಎಂದಷ್ಟೆ ಅರ್ಥ. ವಚನ ರಚನೆಯಾಗಿ ಮುನ್ನೂರು ವರ್ಷಗಳ ನಂತರದ ಹಸ್ತಪ್ರತಿಗಳಲ್ಲಿ ಸಿಗುವ ವಚನಗಳಲ್ಲಿ ಅಂಕಿತ ಬದಲಾಗಿಲ್ಲವೆಂದು ಹೇಳುವುದು ಹೇಗೆ! ಇದು ಇಂಥವರ ವಚನ ಅನ್ನುವುದು ಒಂದು ರೂಢಿಯಷ್ಟೆ, ಇನ್ನೇನೂ ಅಲ್ಲ. ವಚನಗಳು ಮನುಷ್ಯ ಮನಸ್ಸಿನ ಸಾಧ್ಯತೆಗಳ ಭಾಷಿಕ ರೂಪಗಳು. ಯಾರಾದರೂ ಹೇಳಿರಬೇಕಲ್ಲ ಅನ್ನುವುದಕ್ಕೆ ವಚನಕ್ಕೆ ಒಬ್ಬೊಬ್ಬ ವಚನಕಾರರನ್ನು ಕಲ್ಪಿಸಿಕೊಂಡು ಇವರ, ಅವರ ವಚನ ಎಂದು ವಾಗ್ವಾದ ಮಾಡುತ್ತಾ ವಚನಗಳನ್ನು ಮರೆತಿದ್ದೇವೆ.

ಇರಲಿ. ಮೇಲು ಮೇಲಿನ ತೋರಿಕೆಯನ್ನು ಮರೆತರೂ ಕೊನೆಯ ಸಾಲು ಕೂಡ ಅಕ್ಕ-ಅಲ್ಲಮ ಇವರಿಗೆ ಸಮಾನವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿದೆ. ಕಣ್ಣಮೊದಲಿನಲ್ಲಿ ಇರುವವನ್ನು, (ಮತ್ತೆ ಯಾರು, ನೋಡುತ್ತಿರುವವನೇ ಅಲ್ಲವೆ!) ಹೊರಗೆ ಹುಡುಕಿ, ಹಾಗೆ ಹುಡುಕಿ ದಣಿದೆ ಅನ್ನುತ್ತಿದೆ ಈ ಸಾಲು. ದಣಿದ ಪರಿಯನ್ನು ಮೊದಲೆರಡು ಸಾಲುಗಳು ಹೇಳುತ್ತಿವೆ.

ತಾನು ಹುಡುಕುತ್ತಿರುವುದು ತನ್ನೊಳಗೇ ಇರುವುದನ್ನು ಅನ್ನುವ ನಿಲುವು ಅಕ್ಕನದೂ ಹೌದು. ಆದ್ದರಿಂದಲೇ `ನೀನೇಕೆ ಮುಖದೋರೆ’ ಎಂದು ಅಕ್ಕ ಕೂಡ ಅಲವತ್ತುಕೊಳ್ಳುವುದುಂಟು. ಬರಿಯ ಅಕ್ಕ ಅಲ್ಲಮ ಮಾತ್ರವಲ್ಲ ನಾವು ಕೂಡ ನಮ್ಮೊಳಗೆ ಬಿಂಬಿತವಾದದ್ದನ್ನೆ ಹೊರಗೆ ಕಾಣಲು ಯತ್ನಿಸುತ್ತ ದಣಿಯುವವರಲ್ಲವೇ? ಹಾಗಾಗಿ ಇಂಥ ವಚನಗಳು ನಮ್ಮ ಮಾತುಗಳೂ ಆಗುತ್ತವೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...