ಅವ್ವಾ
ಅವರು
ಕತ್ತಿ ಮೊನೆ
ಕೊರಳಿಗೆ ಚುಚ್ಚಿ
ತಮಗೆ ಬೇಕೆನಿಸಿದ
ನುಡಿ ಅರುಹಲು
ಆಗ್ರಹಿಸುತ್ತಿದ್ದಾರೆ
ಇವರು
ನಾಲಿಗೆಗೇ
ಭರ್ಜಿ ನೆಟ್ಟು
ತಮಗೊಲ್ಲದ
ನುಡಿ ಅರಳದಂತೆ
ಕಡಿವಾಣ ಹಾಕಿದ್ದಾರೆ
ಅವ್ವಾ….
ಎಂದಿಗೂ
ನನ್ನ
ನುಡಿಗಳಲ್ಲಿ
ನನ್ನೊಳಗಿನ ನಾನು
ಜೀವಿಸಿಯೇ ಇಲ್ಲ…..
*****
ಅವ್ವಾ
ಅವರು
ಕತ್ತಿ ಮೊನೆ
ಕೊರಳಿಗೆ ಚುಚ್ಚಿ
ತಮಗೆ ಬೇಕೆನಿಸಿದ
ನುಡಿ ಅರುಹಲು
ಆಗ್ರಹಿಸುತ್ತಿದ್ದಾರೆ
ಇವರು
ನಾಲಿಗೆಗೇ
ಭರ್ಜಿ ನೆಟ್ಟು
ತಮಗೊಲ್ಲದ
ನುಡಿ ಅರಳದಂತೆ
ಕಡಿವಾಣ ಹಾಕಿದ್ದಾರೆ
ಅವ್ವಾ….
ಎಂದಿಗೂ
ನನ್ನ
ನುಡಿಗಳಲ್ಲಿ
ನನ್ನೊಳಗಿನ ನಾನು
ಜೀವಿಸಿಯೇ ಇಲ್ಲ…..
*****
ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…
ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…