ಓ ಭಾನು

ಓ ಭಾನು
ಓ ಹಕ್ಕಿ
ನೀಲಾಕಾಶದ ಚುಕ್ಕಿ
ಸೆರೆಯಾಗಿಹೆ ನಾನು ನಿನ್ನಲ್ಲಿ
ಬಾಳ ಕವನ ಹಂದರದಲ್ಲಿ

ಆ ಎಲೆ
ಈ ಹೂವು
ಎಲೆಮರೆಯಾಗಿ ನಾನು
ಮುಡಿದಾ ಮಲ್ಲಿಗೆ ಎಳೆಯಲ್ಲಿ
ಒಂದೊಂದಾಗಿ ಸೇರಿ ನಲಿಯೋಣ

ಆ ನೆನಪು
ಈ ಸೊಗಸು
ತಂಗಾಳಿಯಲಿ ತೇಲಿ
ಉಯ್ಯಾಲೆಯಂತಾಡಿ
ಚೈತ್ರದಂಗಳದಲ್ಲಿ ಸೇರಿದಾಡೋಣ

ಆ ಭಾನು
ಈ ಭೂಮಿ
ಅನಂತ ಅನಂತತೆಯಲ್ಲಿ
ಮೂಡಣದ ಇಳೆಯಲಿ
ಹಸಿರನುಟ್ಟ ಸೆರೆಯಲ್ಲಿ ಕುಣಿಯೋಣ

ಋತುಗಳಾಗಿ ನಾವು
ನೀಲಾಕಾಶದ ಚುಕ್ಕಿಯಲ್ಲಿ
ಸೆರೆಯಾಗಿ ಬಾಳ ಕವನದಾ
ಪ್ರೀತಿ ಸುಧೆಯಲಿ ಆನಂದ ಹೊಂದೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಸಾಗರ
Next post ನೆರಳು-ಬೆಳಕು

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…