ಓ ಭಾನು

ಓ ಭಾನು
ಓ ಹಕ್ಕಿ
ನೀಲಾಕಾಶದ ಚುಕ್ಕಿ
ಸೆರೆಯಾಗಿಹೆ ನಾನು ನಿನ್ನಲ್ಲಿ
ಬಾಳ ಕವನ ಹಂದರದಲ್ಲಿ

ಆ ಎಲೆ
ಈ ಹೂವು
ಎಲೆಮರೆಯಾಗಿ ನಾನು
ಮುಡಿದಾ ಮಲ್ಲಿಗೆ ಎಳೆಯಲ್ಲಿ
ಒಂದೊಂದಾಗಿ ಸೇರಿ ನಲಿಯೋಣ

ಆ ನೆನಪು
ಈ ಸೊಗಸು
ತಂಗಾಳಿಯಲಿ ತೇಲಿ
ಉಯ್ಯಾಲೆಯಂತಾಡಿ
ಚೈತ್ರದಂಗಳದಲ್ಲಿ ಸೇರಿದಾಡೋಣ

ಆ ಭಾನು
ಈ ಭೂಮಿ
ಅನಂತ ಅನಂತತೆಯಲ್ಲಿ
ಮೂಡಣದ ಇಳೆಯಲಿ
ಹಸಿರನುಟ್ಟ ಸೆರೆಯಲ್ಲಿ ಕುಣಿಯೋಣ

ಋತುಗಳಾಗಿ ನಾವು
ನೀಲಾಕಾಶದ ಚುಕ್ಕಿಯಲ್ಲಿ
ಸೆರೆಯಾಗಿ ಬಾಳ ಕವನದಾ
ಪ್ರೀತಿ ಸುಧೆಯಲಿ ಆನಂದ ಹೊಂದೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಸಾಗರ
Next post ನೆರಳು-ಬೆಳಕು

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…