ಓ ಭಾನು

ಓ ಭಾನು
ಓ ಹಕ್ಕಿ
ನೀಲಾಕಾಶದ ಚುಕ್ಕಿ
ಸೆರೆಯಾಗಿಹೆ ನಾನು ನಿನ್ನಲ್ಲಿ
ಬಾಳ ಕವನ ಹಂದರದಲ್ಲಿ

ಆ ಎಲೆ
ಈ ಹೂವು
ಎಲೆಮರೆಯಾಗಿ ನಾನು
ಮುಡಿದಾ ಮಲ್ಲಿಗೆ ಎಳೆಯಲ್ಲಿ
ಒಂದೊಂದಾಗಿ ಸೇರಿ ನಲಿಯೋಣ

ಆ ನೆನಪು
ಈ ಸೊಗಸು
ತಂಗಾಳಿಯಲಿ ತೇಲಿ
ಉಯ್ಯಾಲೆಯಂತಾಡಿ
ಚೈತ್ರದಂಗಳದಲ್ಲಿ ಸೇರಿದಾಡೋಣ

ಆ ಭಾನು
ಈ ಭೂಮಿ
ಅನಂತ ಅನಂತತೆಯಲ್ಲಿ
ಮೂಡಣದ ಇಳೆಯಲಿ
ಹಸಿರನುಟ್ಟ ಸೆರೆಯಲ್ಲಿ ಕುಣಿಯೋಣ

ಋತುಗಳಾಗಿ ನಾವು
ನೀಲಾಕಾಶದ ಚುಕ್ಕಿಯಲ್ಲಿ
ಸೆರೆಯಾಗಿ ಬಾಳ ಕವನದಾ
ಪ್ರೀತಿ ಸುಧೆಯಲಿ ಆನಂದ ಹೊಂದೋಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೀವನ ಸಾಗರ
Next post ನೆರಳು-ಬೆಳಕು

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…