Home / ಕವನ / ಕವಿತೆ / ನೆರಳು-ಬೆಳಕು

ನೆರಳು-ಬೆಳಕು

ಮನಸ್ಸು ಮೈ ಹೊರೆ ಎನಿಸಿದಾಗ
ನಿನ್ನೆಡೆಗೆ ಹೊರಳುತ್ತೇನೆ. ಈ ವೇಳೆಯಲಿ
ಸಾಕಷ್ಟು ಹೇಳುವದಿದೆ. ಅನಿಸಿಕೆಗಳು
ನಿವೇದನೆಗಳಾಗಿ, ಸಾವಿನಾಚೆಯ ಬೆಳಕು.
ಈ ಬದುಕು ದುಡಿಮೆಗೆ ಸಿಗದ ಮಜೂರಿ,
ನೊಂದಣಿಗೆ ಸಿಗದ ದಿನದ ಜೀಕುಗಳು,
ಕಂಡದ್ದು ಕಂಡಂತೆ ಹೇಳುವ ಕನ್ನಡಿಗೂ
ನೂರಾರು ಚೂರುಗಳು.

ಲೋಕದ ಪ್ರಶ್ನೆಗಳಿಗೆ ತನಿಖೆಗಳು ಉಂಟು.
ನಿನ್ನ ತನಿಖೆಗಳಿಗೆ ಪ್ರಶ್ನೆಗಳಿಲ್ಲ. ಮಣಿಯ
ಸರದಲ್ಲಿ ಚಿಮ್ಮುವ ಬೆಳಕ ಕಾಂತಿಯ ಬಣ್ಣಗಳ
ಪ್ರತಿಫಲಿಸಿದ ಕಾಮನ ಬಿಲ್ಲು. ತರ ತರದ ದಿಗಂತ
ಆಕಾಶದ ಅಂಗಳದಲಿ ಪದರ ಬಿಚ್ಚಿ ಹರಡಿದ
ಚಿಕ್ಕಿಗಳು, ನನ್ನಲ್ಲಿಗೆ ಇಲ್ಲ ಸುಖ-ದುಃಖಗಳ
ಸರಮಾಲೆ, ನಿನ್ನ ಇಚ್ಛೆಯಂತೆ ನಾನೀಗ ಉರಿಯುವ
ಕಿಡಿಯ ನಿಗಿ ನಿಗಿ ಕೆಂಡ.

ಬೆಳಕಿನಾಚೆಯ ಬೆಳಕು, ಮಳೆ, ಮೋಡ, ನಿಖರ
ಕಣ್ಣುಗಳ ಕಾಂತಿ, ಚೆಲ್ಲುವ ನೆರಳಲಿ ಮತ್ತೆ
ಕಿಡಿಯ ಕಿರಣಗಳು ಅಡಗಿಕೊಂಡು ಉನ್ನತ್ತ ಕಾವ್ಯ
ಸಣ್ಣ ಪುಟ್ಟ ಎಟುಕುವ ವಿಸ್ಮಯಗಳ ಲೋಕ.
ಏಕಾಂತದಲಿ ದ್ರವೀಕರಿಸಿ ನದಿ ಹರಿದ ಮನುಕುಲ
ಕರೆದು ನಿಟ್ಟುಸಿರು ಬಿಟ್ಟೆ, ಕಣ್ಣು ಮಿಟುಕಿಸಿ
ಕರೆವ ಕೊರಳ ತುಂಬ, ನೀನು ಧ್ವನಿಯಾಗಿ
ಕೇಳಿಸಲೇ ಇಲ್ಲ ನಾನೀಗ ಚಿರವಿರಹಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...