ಜೀವನ ಸಾಗರ

ಜೀವನವೊಂದು ಭವ ಸಾಗರವು
ಈ ಭವ ಸಾಗರದಲಿ ದಾಟಿ ಹೋಗು
ಪರಮಾತ್ಮನ ನಾಮದಲಿ ಈಜಬೇಕು
ಮುಕ್ತಿ ದಡವನ್ನು ಸೇರಿ ಹೋಗು

ಪ್ರಾಣಾಯಾಮದಲಿ ಕೈ ಕಾಲು ಆಡಿಸು
ಆಗಾಗ ಧ್ಯಾನದಲಿ ಮುಳುಗಬೇಕು
ತನುವಿನ ವಿಷಯ ಕೆಸರು ತೊಳೆಯಬೇಕು
ಮನದಂಬರದಿಂದ ಶುದ್ಧ ಗೊಳಿಸಬೇಕು

ಸತ್ಯದ ವಾಣಿಯಿಂದ ಹುಟ್ಟು ಹಾಕು
ಪ್ರಾಮಾಣಿಕ ತಳ ಆಗಿರಲಿ ಗಾಢ
ಕಾಮಕಾಂಚನ ಬಿರುಗಾಳಿಯತ್ತ ಬೇಡ
ರಾಮನಾಮ ಆಳವಿಲ್ಲದತ್ತ ಜಾರಬೇಡ

ದುರಾಸೆ ಮೊಸಳೆಯತ್ತ ಹೋಗದಿರು
ಲೋಭ ತಿಮಿಂಗಿಲನತ್ತ ದುಡುಕದಿರು
ಆ ಶಾಂತ ನೀರಿನ ಸುಖ ನಂಬದಿರು
ಮುಂದೆ ಬರುವಸು ನೀರ ಸುಳಿಗೆ ನೀರಿದ ಒಡ್ಡದಿರು

ನಿನ್ನ ನಂಬಿದವರಿಗೆಲ್ಲ ಕೈ ನೀಡಿ ಸಾಗು
ಅವರಿಗೆಲ್ಲ ಎಚ್ಚರದಲ್ಲಿ ಇರಲು ಹೇಳು
ಸಾಗರವನ್ನು ದಾಟಿ ದಡ ಸೇರಿದರಾಯ್ತ
ಮಾಣಿಕ್ಯ ವಿಠಲನ ನಂಬಿ ಬಾಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೬
Next post ಓ ಭಾನು

ಸಣ್ಣ ಕತೆ

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…