ಜೀವನ ಸಾಗರ

ಜೀವನವೊಂದು ಭವ ಸಾಗರವು
ಈ ಭವ ಸಾಗರದಲಿ ದಾಟಿ ಹೋಗು
ಪರಮಾತ್ಮನ ನಾಮದಲಿ ಈಜಬೇಕು
ಮುಕ್ತಿ ದಡವನ್ನು ಸೇರಿ ಹೋಗು

ಪ್ರಾಣಾಯಾಮದಲಿ ಕೈ ಕಾಲು ಆಡಿಸು
ಆಗಾಗ ಧ್ಯಾನದಲಿ ಮುಳುಗಬೇಕು
ತನುವಿನ ವಿಷಯ ಕೆಸರು ತೊಳೆಯಬೇಕು
ಮನದಂಬರದಿಂದ ಶುದ್ಧ ಗೊಳಿಸಬೇಕು

ಸತ್ಯದ ವಾಣಿಯಿಂದ ಹುಟ್ಟು ಹಾಕು
ಪ್ರಾಮಾಣಿಕ ತಳ ಆಗಿರಲಿ ಗಾಢ
ಕಾಮಕಾಂಚನ ಬಿರುಗಾಳಿಯತ್ತ ಬೇಡ
ರಾಮನಾಮ ಆಳವಿಲ್ಲದತ್ತ ಜಾರಬೇಡ

ದುರಾಸೆ ಮೊಸಳೆಯತ್ತ ಹೋಗದಿರು
ಲೋಭ ತಿಮಿಂಗಿಲನತ್ತ ದುಡುಕದಿರು
ಆ ಶಾಂತ ನೀರಿನ ಸುಖ ನಂಬದಿರು
ಮುಂದೆ ಬರುವಸು ನೀರ ಸುಳಿಗೆ ನೀರಿದ ಒಡ್ಡದಿರು

ನಿನ್ನ ನಂಬಿದವರಿಗೆಲ್ಲ ಕೈ ನೀಡಿ ಸಾಗು
ಅವರಿಗೆಲ್ಲ ಎಚ್ಚರದಲ್ಲಿ ಇರಲು ಹೇಳು
ಸಾಗರವನ್ನು ದಾಟಿ ದಡ ಸೇರಿದರಾಯ್ತ
ಮಾಣಿಕ್ಯ ವಿಠಲನ ನಂಬಿ ಬಾಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೬
Next post ಓ ಭಾನು

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys