ಜೀವನ ಸಾಗರ

ಜೀವನವೊಂದು ಭವ ಸಾಗರವು
ಈ ಭವ ಸಾಗರದಲಿ ದಾಟಿ ಹೋಗು
ಪರಮಾತ್ಮನ ನಾಮದಲಿ ಈಜಬೇಕು
ಮುಕ್ತಿ ದಡವನ್ನು ಸೇರಿ ಹೋಗು

ಪ್ರಾಣಾಯಾಮದಲಿ ಕೈ ಕಾಲು ಆಡಿಸು
ಆಗಾಗ ಧ್ಯಾನದಲಿ ಮುಳುಗಬೇಕು
ತನುವಿನ ವಿಷಯ ಕೆಸರು ತೊಳೆಯಬೇಕು
ಮನದಂಬರದಿಂದ ಶುದ್ಧ ಗೊಳಿಸಬೇಕು

ಸತ್ಯದ ವಾಣಿಯಿಂದ ಹುಟ್ಟು ಹಾಕು
ಪ್ರಾಮಾಣಿಕ ತಳ ಆಗಿರಲಿ ಗಾಢ
ಕಾಮಕಾಂಚನ ಬಿರುಗಾಳಿಯತ್ತ ಬೇಡ
ರಾಮನಾಮ ಆಳವಿಲ್ಲದತ್ತ ಜಾರಬೇಡ

ದುರಾಸೆ ಮೊಸಳೆಯತ್ತ ಹೋಗದಿರು
ಲೋಭ ತಿಮಿಂಗಿಲನತ್ತ ದುಡುಕದಿರು
ಆ ಶಾಂತ ನೀರಿನ ಸುಖ ನಂಬದಿರು
ಮುಂದೆ ಬರುವಸು ನೀರ ಸುಳಿಗೆ ನೀರಿದ ಒಡ್ಡದಿರು

ನಿನ್ನ ನಂಬಿದವರಿಗೆಲ್ಲ ಕೈ ನೀಡಿ ಸಾಗು
ಅವರಿಗೆಲ್ಲ ಎಚ್ಚರದಲ್ಲಿ ಇರಲು ಹೇಳು
ಸಾಗರವನ್ನು ದಾಟಿ ದಡ ಸೇರಿದರಾಯ್ತ
ಮಾಣಿಕ್ಯ ವಿಠಲನ ನಂಬಿ ಬಾಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೬
Next post ಓ ಭಾನು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…