ಬೇಸರವೇತಕೋ ಮನವೇ

ನೇಸರದಾ ತಂಪಲ್ಲಿ ಈಶನಿಹನೋ
ಬೇಸರವೇತಕೋ ಮನವೇ

ಈಶ ಮಹೇಶ ಪ್ರಭು ಮಲ್ಲೇಶ
ಈಶ ಲಿಂಗೇಶ ಸರ್ವೇಶನವನು
ಬೇಸರವೇತಕೋ ಮನವೇ

ಸತಿ ಶಕ್ತಿಯು ಸಸ್ಯ ಶ್ಯಾಮಲೆ
ಜೀವ ಕೋಟಿಗೆ ಉಸಿರಾಗಿಹಳು
ಬೇಸರವೇತಕೋ ಮನವೇ

ರೆಂಬೆಕೊಂಬೆಗಳಲ್ಲಿ ಹಸಿರು ಎಲೆ
ಬಣ್ಣ ಚಿತ್ತಾರ ನಾದ ಇಂಚರದಲಿ
ಈಶನು ಬೇಸರವೇತಕೋ ಮನವೇ

ಸುಯ್‌ಗುಟ್ಟುವ ತಂಗಾಳಿ ಧರೆ ಆಗಸ
ಕಲ್ಲು ಮಣ್ಣು ಬಂಡೆ ದಡದದಲ್ಲಿಹನು
ಬೇಸರವೇತಕೋ ಮನವೇ

ಧರ್ಮ ಕರ್ಮ ಮರ್ಮ ಭೇದಗಳಲ್ಲಿ
ಸುಳ್ಳು ಮೋಸ ಕಪಟ ವಂಚನೆ ಮೋಹದಲ್ಲಿಹನೊ
ಎಚ್ಚರ! ಬೇಸರವೇತಕೋ ಮನವೇ

ನ್ಯಾಯ ಅನ್ಯಾಯಗಳ ಬೆಲೆಯ ಕಟ್ಟಿ ಹಿಡಿದು
ನೋಡುವಾತನು ಜನ್ಮ ಚಕ್ರದಾತ ಮುಕ್ಕಣನೂ
ಬೇಸರವೇತಕೋ ಮನವೇ

ವೇಷಭೂಷಣ ಜಂಗಮ ಸಂಗಮ ಉಂಬಲಿಂಗ
ಮಹೇಂದ್ರನೂ ಮಸಣವಾಸಿ ರುದ್ರನಿವನು
ಬೇಸರವೇತಕೋ ಮನವೇ

ದಾನ ಮಾನಿಯೂ ಅನ್ನದಾತ ಯೋಗಿಯು
ಭಾಗಿಯಾಗಿ ಮೌನದಲ್ಲಿ ಅವನು
ಬೇಸರವೇತಕೋ ಮನವೇ

ಶಿಷ್ಟನಾಗಿ ವಿಶಿಷ್ಟ ಜ್ಞಾನಿಯಾಗೋ
ಬೇಸರವೆಂದರೆ ಅರ್ಥವಿಲ್ಲ ಕಾಯಕ
ಸಿದ್ದಿ ಮಾಯಕ ಭವಭಾವ ಸಿದ್ದ ನೀನು
ಸರ್ವಾಂತರ್ಯಾಮಿ ಅವನ ಕಾಣಬೇಕು ಮನುಜ

ಬೇಸರವಿಲ್ಲದ ನೇಸರ ತಂಪಲ್ಲಿ
ವಿಹರಿಸು ಚೈತನ್ಯ ತುಂಬಿ
ನೇಸರನ ಗೆಲುವಿನ ಹಾದಿಯಲಿ
ನಡೆಯಬೇಕು ಮನುಜ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮ ದರ್ಪಣ
Next post ನೀ ನಡೆವ ದಾರಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…