ಬೇಸರವೇತಕೋ ಮನವೇ

ನೇಸರದಾ ತಂಪಲ್ಲಿ ಈಶನಿಹನೋ
ಬೇಸರವೇತಕೋ ಮನವೇ

ಈಶ ಮಹೇಶ ಪ್ರಭು ಮಲ್ಲೇಶ
ಈಶ ಲಿಂಗೇಶ ಸರ್ವೇಶನವನು
ಬೇಸರವೇತಕೋ ಮನವೇ

ಸತಿ ಶಕ್ತಿಯು ಸಸ್ಯ ಶ್ಯಾಮಲೆ
ಜೀವ ಕೋಟಿಗೆ ಉಸಿರಾಗಿಹಳು
ಬೇಸರವೇತಕೋ ಮನವೇ

ರೆಂಬೆಕೊಂಬೆಗಳಲ್ಲಿ ಹಸಿರು ಎಲೆ
ಬಣ್ಣ ಚಿತ್ತಾರ ನಾದ ಇಂಚರದಲಿ
ಈಶನು ಬೇಸರವೇತಕೋ ಮನವೇ

ಸುಯ್‌ಗುಟ್ಟುವ ತಂಗಾಳಿ ಧರೆ ಆಗಸ
ಕಲ್ಲು ಮಣ್ಣು ಬಂಡೆ ದಡದದಲ್ಲಿಹನು
ಬೇಸರವೇತಕೋ ಮನವೇ

ಧರ್ಮ ಕರ್ಮ ಮರ್ಮ ಭೇದಗಳಲ್ಲಿ
ಸುಳ್ಳು ಮೋಸ ಕಪಟ ವಂಚನೆ ಮೋಹದಲ್ಲಿಹನೊ
ಎಚ್ಚರ! ಬೇಸರವೇತಕೋ ಮನವೇ

ನ್ಯಾಯ ಅನ್ಯಾಯಗಳ ಬೆಲೆಯ ಕಟ್ಟಿ ಹಿಡಿದು
ನೋಡುವಾತನು ಜನ್ಮ ಚಕ್ರದಾತ ಮುಕ್ಕಣನೂ
ಬೇಸರವೇತಕೋ ಮನವೇ

ವೇಷಭೂಷಣ ಜಂಗಮ ಸಂಗಮ ಉಂಬಲಿಂಗ
ಮಹೇಂದ್ರನೂ ಮಸಣವಾಸಿ ರುದ್ರನಿವನು
ಬೇಸರವೇತಕೋ ಮನವೇ

ದಾನ ಮಾನಿಯೂ ಅನ್ನದಾತ ಯೋಗಿಯು
ಭಾಗಿಯಾಗಿ ಮೌನದಲ್ಲಿ ಅವನು
ಬೇಸರವೇತಕೋ ಮನವೇ

ಶಿಷ್ಟನಾಗಿ ವಿಶಿಷ್ಟ ಜ್ಞಾನಿಯಾಗೋ
ಬೇಸರವೆಂದರೆ ಅರ್ಥವಿಲ್ಲ ಕಾಯಕ
ಸಿದ್ದಿ ಮಾಯಕ ಭವಭಾವ ಸಿದ್ದ ನೀನು
ಸರ್ವಾಂತರ್ಯಾಮಿ ಅವನ ಕಾಣಬೇಕು ಮನುಜ

ಬೇಸರವಿಲ್ಲದ ನೇಸರ ತಂಪಲ್ಲಿ
ವಿಹರಿಸು ಚೈತನ್ಯ ತುಂಬಿ
ನೇಸರನ ಗೆಲುವಿನ ಹಾದಿಯಲಿ
ನಡೆಯಬೇಕು ಮನುಜ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆತ್ಮ ದರ್ಪಣ
Next post ನೀ ನಡೆವ ದಾರಿ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…