Home / ಕವನ / ಕವಿತೆ / ಬೇಸರವೇತಕೋ ಮನವೇ

ಬೇಸರವೇತಕೋ ಮನವೇ

ನೇಸರದಾ ತಂಪಲ್ಲಿ ಈಶನಿಹನೋ
ಬೇಸರವೇತಕೋ ಮನವೇ

ಈಶ ಮಹೇಶ ಪ್ರಭು ಮಲ್ಲೇಶ
ಈಶ ಲಿಂಗೇಶ ಸರ್ವೇಶನವನು
ಬೇಸರವೇತಕೋ ಮನವೇ

ಸತಿ ಶಕ್ತಿಯು ಸಸ್ಯ ಶ್ಯಾಮಲೆ
ಜೀವ ಕೋಟಿಗೆ ಉಸಿರಾಗಿಹಳು
ಬೇಸರವೇತಕೋ ಮನವೇ

ರೆಂಬೆಕೊಂಬೆಗಳಲ್ಲಿ ಹಸಿರು ಎಲೆ
ಬಣ್ಣ ಚಿತ್ತಾರ ನಾದ ಇಂಚರದಲಿ
ಈಶನು ಬೇಸರವೇತಕೋ ಮನವೇ

ಸುಯ್‌ಗುಟ್ಟುವ ತಂಗಾಳಿ ಧರೆ ಆಗಸ
ಕಲ್ಲು ಮಣ್ಣು ಬಂಡೆ ದಡದದಲ್ಲಿಹನು
ಬೇಸರವೇತಕೋ ಮನವೇ

ಧರ್ಮ ಕರ್ಮ ಮರ್ಮ ಭೇದಗಳಲ್ಲಿ
ಸುಳ್ಳು ಮೋಸ ಕಪಟ ವಂಚನೆ ಮೋಹದಲ್ಲಿಹನೊ
ಎಚ್ಚರ! ಬೇಸರವೇತಕೋ ಮನವೇ

ನ್ಯಾಯ ಅನ್ಯಾಯಗಳ ಬೆಲೆಯ ಕಟ್ಟಿ ಹಿಡಿದು
ನೋಡುವಾತನು ಜನ್ಮ ಚಕ್ರದಾತ ಮುಕ್ಕಣನೂ
ಬೇಸರವೇತಕೋ ಮನವೇ

ವೇಷಭೂಷಣ ಜಂಗಮ ಸಂಗಮ ಉಂಬಲಿಂಗ
ಮಹೇಂದ್ರನೂ ಮಸಣವಾಸಿ ರುದ್ರನಿವನು
ಬೇಸರವೇತಕೋ ಮನವೇ

ದಾನ ಮಾನಿಯೂ ಅನ್ನದಾತ ಯೋಗಿಯು
ಭಾಗಿಯಾಗಿ ಮೌನದಲ್ಲಿ ಅವನು
ಬೇಸರವೇತಕೋ ಮನವೇ

ಶಿಷ್ಟನಾಗಿ ವಿಶಿಷ್ಟ ಜ್ಞಾನಿಯಾಗೋ
ಬೇಸರವೆಂದರೆ ಅರ್ಥವಿಲ್ಲ ಕಾಯಕ
ಸಿದ್ದಿ ಮಾಯಕ ಭವಭಾವ ಸಿದ್ದ ನೀನು
ಸರ್ವಾಂತರ್ಯಾಮಿ ಅವನ ಕಾಣಬೇಕು ಮನುಜ

ಬೇಸರವಿಲ್ಲದ ನೇಸರ ತಂಪಲ್ಲಿ
ವಿಹರಿಸು ಚೈತನ್ಯ ತುಂಬಿ
ನೇಸರನ ಗೆಲುವಿನ ಹಾದಿಯಲಿ
ನಡೆಯಬೇಕು ಮನುಜ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...