Home / ಕವನ / ಕವಿತೆ / ಬೇಸರವೇತಕೋ ಮನವೇ

ಬೇಸರವೇತಕೋ ಮನವೇ

ನೇಸರದಾ ತಂಪಲ್ಲಿ ಈಶನಿಹನೋ
ಬೇಸರವೇತಕೋ ಮನವೇ

ಈಶ ಮಹೇಶ ಪ್ರಭು ಮಲ್ಲೇಶ
ಈಶ ಲಿಂಗೇಶ ಸರ್ವೇಶನವನು
ಬೇಸರವೇತಕೋ ಮನವೇ

ಸತಿ ಶಕ್ತಿಯು ಸಸ್ಯ ಶ್ಯಾಮಲೆ
ಜೀವ ಕೋಟಿಗೆ ಉಸಿರಾಗಿಹಳು
ಬೇಸರವೇತಕೋ ಮನವೇ

ರೆಂಬೆಕೊಂಬೆಗಳಲ್ಲಿ ಹಸಿರು ಎಲೆ
ಬಣ್ಣ ಚಿತ್ತಾರ ನಾದ ಇಂಚರದಲಿ
ಈಶನು ಬೇಸರವೇತಕೋ ಮನವೇ

ಸುಯ್‌ಗುಟ್ಟುವ ತಂಗಾಳಿ ಧರೆ ಆಗಸ
ಕಲ್ಲು ಮಣ್ಣು ಬಂಡೆ ದಡದದಲ್ಲಿಹನು
ಬೇಸರವೇತಕೋ ಮನವೇ

ಧರ್ಮ ಕರ್ಮ ಮರ್ಮ ಭೇದಗಳಲ್ಲಿ
ಸುಳ್ಳು ಮೋಸ ಕಪಟ ವಂಚನೆ ಮೋಹದಲ್ಲಿಹನೊ
ಎಚ್ಚರ! ಬೇಸರವೇತಕೋ ಮನವೇ

ನ್ಯಾಯ ಅನ್ಯಾಯಗಳ ಬೆಲೆಯ ಕಟ್ಟಿ ಹಿಡಿದು
ನೋಡುವಾತನು ಜನ್ಮ ಚಕ್ರದಾತ ಮುಕ್ಕಣನೂ
ಬೇಸರವೇತಕೋ ಮನವೇ

ವೇಷಭೂಷಣ ಜಂಗಮ ಸಂಗಮ ಉಂಬಲಿಂಗ
ಮಹೇಂದ್ರನೂ ಮಸಣವಾಸಿ ರುದ್ರನಿವನು
ಬೇಸರವೇತಕೋ ಮನವೇ

ದಾನ ಮಾನಿಯೂ ಅನ್ನದಾತ ಯೋಗಿಯು
ಭಾಗಿಯಾಗಿ ಮೌನದಲ್ಲಿ ಅವನು
ಬೇಸರವೇತಕೋ ಮನವೇ

ಶಿಷ್ಟನಾಗಿ ವಿಶಿಷ್ಟ ಜ್ಞಾನಿಯಾಗೋ
ಬೇಸರವೆಂದರೆ ಅರ್ಥವಿಲ್ಲ ಕಾಯಕ
ಸಿದ್ದಿ ಮಾಯಕ ಭವಭಾವ ಸಿದ್ದ ನೀನು
ಸರ್ವಾಂತರ್ಯಾಮಿ ಅವನ ಕಾಣಬೇಕು ಮನುಜ

ಬೇಸರವಿಲ್ಲದ ನೇಸರ ತಂಪಲ್ಲಿ
ವಿಹರಿಸು ಚೈತನ್ಯ ತುಂಬಿ
ನೇಸರನ ಗೆಲುವಿನ ಹಾದಿಯಲಿ
ನಡೆಯಬೇಕು ಮನುಜ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...