ನೀ ನಡೆವ ದಾರಿ

ಚಲನೆಯ ಗತಿಯಲ್ಲಿ ನಿನ್ನ ನಾದ
ಹೂವುಗಳ ಅರಳಿಸಿ ಗಂಧ ತೀಡಿ,
ತೊಟ್ಟಿಲ ಜೀಕಿ ನಡೆದ ದಾರಿ ತುಂಬ,
ಎಚ್ಚರದ ಹೆಜ್ಜೆಗಳು. ನದಿಯಲ್ಲಿ
ನಾವಿಕನ ಹುಟ್ಟಿ ದೀರ್‍ಘ ಅಲೆಗಳು.

ಕಾಲಬೆರಳ ಸಂದಿಯಲಿ ಹುಲ್ಲುಗರಿ
ಚಿತ್ತಾರವ ಅರಳಿಸಿ, ಹಿಮ ಮಣಿಯ
ತಂಪು ಹರಡಿ ತಿಳಿಗಾಳಿ ಸುಳಿದು,
ಮಲ್ಲಿಗೆ ಜಾಜಿ ಪರಿಮಳ ಗೆಜ್ಜೆಗಳ
ನಾದ ಅರಳಿದ ಮುಂಜಾನೆ ಸೂರ್‍ಯ.

ನೀಲ ಬಾನತುಂಬ ಬೆಳ್ಳಕ್ಕಿ ರಾಶಿ ಹಿಂಡು,
ಮೋಡದ ಅಲೆಗಳ ಸಂಚಾರ,
ಚೆಂದದ ಹರಣಿಯಂತೆ ಕಣ್ಣರಳಿಸಿ,
ಸಾಗುವ ಪುಟ್ಟ ಬಾಲೆ ಅಮ್ಮನ ಸೆರಗಿನ
ವಾಸನೆ ಹರಡಿ, ಹೃದಯ ತುಂಬ ಶಿವನರ್‍ತನ.

ಒಂದು ದಿನ ಹಗುರಾಗಿ ಪೂರ್‍ತಿ ಮಾಡಿದ
ಸೂರ್ಯನ ಬೆಳ್ಳಿಯ ಹೊಂಬಣ್ಣದ ಕಿರಣಗಳು,
ಸಂಜೆ ದೇವರ ಮನೆಯಲಿ ನೀಲಾಂಜನ ಮಿಣಿ
ಮಿಣಿಯಾಗಿ, ನೀ ಪಡೆಯುವ ಪ್ರೀತಿ ಹಾಡಾಗಿ,
ಅನ್ನ ಅರಳಿದೆ ಘಮ ಘಮ ಸಮಯದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಸರವೇತಕೋ ಮನವೇ
Next post ಬಡಭಾರತಿಗೆ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys