ನೀ ನಡೆವ ದಾರಿ

ಚಲನೆಯ ಗತಿಯಲ್ಲಿ ನಿನ್ನ ನಾದ
ಹೂವುಗಳ ಅರಳಿಸಿ ಗಂಧ ತೀಡಿ,
ತೊಟ್ಟಿಲ ಜೀಕಿ ನಡೆದ ದಾರಿ ತುಂಬ,
ಎಚ್ಚರದ ಹೆಜ್ಜೆಗಳು. ನದಿಯಲ್ಲಿ
ನಾವಿಕನ ಹುಟ್ಟಿ ದೀರ್‍ಘ ಅಲೆಗಳು.

ಕಾಲಬೆರಳ ಸಂದಿಯಲಿ ಹುಲ್ಲುಗರಿ
ಚಿತ್ತಾರವ ಅರಳಿಸಿ, ಹಿಮ ಮಣಿಯ
ತಂಪು ಹರಡಿ ತಿಳಿಗಾಳಿ ಸುಳಿದು,
ಮಲ್ಲಿಗೆ ಜಾಜಿ ಪರಿಮಳ ಗೆಜ್ಜೆಗಳ
ನಾದ ಅರಳಿದ ಮುಂಜಾನೆ ಸೂರ್‍ಯ.

ನೀಲ ಬಾನತುಂಬ ಬೆಳ್ಳಕ್ಕಿ ರಾಶಿ ಹಿಂಡು,
ಮೋಡದ ಅಲೆಗಳ ಸಂಚಾರ,
ಚೆಂದದ ಹರಣಿಯಂತೆ ಕಣ್ಣರಳಿಸಿ,
ಸಾಗುವ ಪುಟ್ಟ ಬಾಲೆ ಅಮ್ಮನ ಸೆರಗಿನ
ವಾಸನೆ ಹರಡಿ, ಹೃದಯ ತುಂಬ ಶಿವನರ್‍ತನ.

ಒಂದು ದಿನ ಹಗುರಾಗಿ ಪೂರ್‍ತಿ ಮಾಡಿದ
ಸೂರ್ಯನ ಬೆಳ್ಳಿಯ ಹೊಂಬಣ್ಣದ ಕಿರಣಗಳು,
ಸಂಜೆ ದೇವರ ಮನೆಯಲಿ ನೀಲಾಂಜನ ಮಿಣಿ
ಮಿಣಿಯಾಗಿ, ನೀ ಪಡೆಯುವ ಪ್ರೀತಿ ಹಾಡಾಗಿ,
ಅನ್ನ ಅರಳಿದೆ ಘಮ ಘಮ ಸಮಯದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇಸರವೇತಕೋ ಮನವೇ
Next post ಬಡಭಾರತಿಗೆ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…