ಬನ್ನಿ ಯಾತ್ರಿಕರೇ ನೀವೆಲ್ಲಾ

ಬನ್ನಿ ಯಾತ್ರಿಕರೇ ನೀವೆಲ್ಲಾ
ಕೈ ಮುಗಿದು ಕರುನಾಡ
ಮಣ್ಣಲೆಜ್ಜೆಯಿಡುವಾಗ |
ಇದು ಶಾಂತಿಯ ತವರಿದು
ಸ್ನೇಹ ಕರುಣೆಯ ಬೀಡಿದು ||

ಸರ್‍ವಧರ್‍ಮ ಸಂಗಮದ ನಾಡಿದು
ಸಕಲ ಕುಲ ಮನುಜರ ಕಾಶಿಯಿದು
ಕೋಟೆ ಕೊತ್ತಲ ಗಿರಿಶಿಖರಗಳ
ರಾಜಧೀರಾಜರು ಕಟ್ಟಿದ ನಾಡಿದು ||

ತಾಯಿ ಶಾರದೆಯು ನೆಲಸಿಹ
ಪಾವನಮಣ್ಣಿನ ನಾಡಿದು|
ಭಕ್ತ ಕನಕನಿಗೊಲಿದು
ಶ್ರೀಕೃಷ್ಣ ತಿರುಗಿನಿಂತಿಹ ಮಣ್ಣಿದು|
ಕಾವೇರಿ ಕಪಿಲ ತುಂಗ ಭದ್ರೆ
ಪುಣ್ಯ ನದಿಗಳ ಬೀಡಿದು||

ವೀರ ಹನುಮನುದಿಸಿ
ಪಾವನ ಗೊಳಿಸಿಹ ನಾಡಿದು|
ನಾಡ ದೇವಿ ಚಾಮುಂಡಿ ಅವತರಿಸಿ
ದುಷ್ಟಸಂಹರಿಸಿದ ನಾಡಿದು|
ಹೆಚ್ಚು ಭಾರತ ರತ್ನಗಳುದಿಸಿದ ನಾಡಿದು|
ಗಂಧದ ಗುಡಿಯ ಚೆಂದದ ನಾಡಿದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳುವ ಮಗು
Next post ಹಿರಿಯ ಜೀವ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys