ಬನ್ನಿ ಯಾತ್ರಿಕರೇ ನೀವೆಲ್ಲಾ

ಬನ್ನಿ ಯಾತ್ರಿಕರೇ ನೀವೆಲ್ಲಾ
ಕೈ ಮುಗಿದು ಕರುನಾಡ
ಮಣ್ಣಲೆಜ್ಜೆಯಿಡುವಾಗ |
ಇದು ಶಾಂತಿಯ ತವರಿದು
ಸ್ನೇಹ ಕರುಣೆಯ ಬೀಡಿದು ||

ಸರ್‍ವಧರ್‍ಮ ಸಂಗಮದ ನಾಡಿದು
ಸಕಲ ಕುಲ ಮನುಜರ ಕಾಶಿಯಿದು
ಕೋಟೆ ಕೊತ್ತಲ ಗಿರಿಶಿಖರಗಳ
ರಾಜಧೀರಾಜರು ಕಟ್ಟಿದ ನಾಡಿದು ||

ತಾಯಿ ಶಾರದೆಯು ನೆಲಸಿಹ
ಪಾವನಮಣ್ಣಿನ ನಾಡಿದು|
ಭಕ್ತ ಕನಕನಿಗೊಲಿದು
ಶ್ರೀಕೃಷ್ಣ ತಿರುಗಿನಿಂತಿಹ ಮಣ್ಣಿದು|
ಕಾವೇರಿ ಕಪಿಲ ತುಂಗ ಭದ್ರೆ
ಪುಣ್ಯ ನದಿಗಳ ಬೀಡಿದು||

ವೀರ ಹನುಮನುದಿಸಿ
ಪಾವನ ಗೊಳಿಸಿಹ ನಾಡಿದು|
ನಾಡ ದೇವಿ ಚಾಮುಂಡಿ ಅವತರಿಸಿ
ದುಷ್ಟಸಂಹರಿಸಿದ ನಾಡಿದು|
ಹೆಚ್ಚು ಭಾರತ ರತ್ನಗಳುದಿಸಿದ ನಾಡಿದು|
ಗಂಧದ ಗುಡಿಯ ಚೆಂದದ ನಾಡಿದು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಳುವ ಮಗು
Next post ಹಿರಿಯ ಜೀವ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…