ಬಾರೇ… ಬಾರೇ….
ನನ್ನೊಲವ ಗೆದ್ದ ನೀರೆ|
ಬಾರೇ ಬಾರೇ
ನನ್ನ ಹೃದಯ ಕದ್ದ ನೀರೆ|
ನೀರೆ ನೀರೇ
ನೀ ಚೆಲುವಲಿ ಮಿಂದ ಅಪ್ಸರೆ||
ತೋರೆ ತೋರೇ
ನೀಕರುಣೆಯಾ ತೋರೇ|
ಒಲವಲಿ ನೀ ಬಂದು ನನ್ನನು ಸೇರೆ
ನೀನೇ ನನಗೀಗ
ಮನದಲ್ಲಿ ಮಿನುಗುವ ತಾರೆ||
ಸೆಳೆದಿರುವೆ ನೀ ನನ್ನನೇ
ಸೆರೆಹಿಡಿದಿರುವೆ ನಾ ನಿನ್ನನೇ|
ಬೇಕೆನಿಸುತಿದೆ ನಿನ್ನಾಸರೆ
ದಿನವಿಡಿ ನಿನ್ನದೇ ಉಪಾಸನೆ||
ತಾಳಲಾರೆ ಈ ವೇದನೆ
ಬರಿ ನಿನ್ನದೇ ಆಲಾಪನೆ
ಮಾಡುತಿರುವೆ ನಿವೇದನೆ
ನೀಡು ನೀ ನಿನ್ನ ಅನುಮೋದನೆ||
*****
ಕವಿ, ಸಾಹಿತ್ಯ ಕೃಷಿಕ, ವೃತ್ತಿಯಲ್ಲಿ ಸಾಪ್ಟ್ವೇರ್ ಇಂಜಿನೀಯರ್ ಆಗಿ
ಅಮೋಘ ಸಾಧನೆ ಮಾಡಿರುವ ಆನಂದ ಹೆಬ್ಬಾಳು ಎಂದು ಗುರುತಿಸಿಕೊಂಡಿರುವ ಇವರ ಹೆಸರು ಆನಂದಾಚಾರ್.ಟಿ. ಇವರ ಕಾವ್ಯನಾಮ "ಜಾನಕಿತನಯಾನಂದ". ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಅನೇಕ ಕವನಗಳನ್ನು ರಚಿಸಿ, ಸುಗಮಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಶ್ರೀಯುತ ಮೈಸೂರು ಅನಂತಸ್ವಾಮಿಯವರ ಸಲಹೆಯಂತೆ ಹೆಚ್ಚಿನ ವಿದ್ಯಾಭ್ಯಾಸಮಾಡಿ, ಜೀವನ ತರಂಗಗಳು, ಮಂಥನ, ಚಕ್ಷು ಹಾಗು ಅಕ್ಷಯ ಎಂಬ ಕವನ ಸಂಕಲನ ರಚಿಸಿದ್ದಾರೆ.