ಸಮಯ ಸಾಕಾಗುವುದಿಲ್ಲ

ಸಮಯ ಸಾಕಾಗುವುದಿಲ್ಲ
ಎನ್ನುವುದೊಂದು ನೆಪ ಅಷ್ಟೇನೇ|
ತನ್ನೆಲ್ಲಾ ಇಷ್ಟಾರ್ಥಳಿಗಾಗಿ
ಸಮಯ ಸರಿಹೊಂದಿಸಿಕೊಳ್ಳುವ ನಾವು|
ಬೇರೆಲ್ಲಾದರಲ್ಲಿ ಮುಂದು
ಬೇಡವೆನಿಸಿರುವುದಕೆ ಈ ಸೋಗು||

ದೇವಸ್ಥಾನದ ಮಹಾಮಂಗಳಾರತಿ
ಸಮಯಕ್ಕೆ ಸರಿಯಾಗಿ ಹೋಗಲು
ಸಮಯ ಸಾಕಾಗದು|
ಆದರೆ ಸಿನೆಮಾಕ್ಕೆ ಹೋಗಲು
ಎನ್ನೆಲ್ಲಾ ತಯಾರಿ ನಡೆಸಿ
ಅರ್ಧಗಂಟೆ ಮುಂಚೆನೇ ಹಾಜರು|
ವಿಮಾನ ಪ್ರಯಾಣಕ್ಕೆಂದು
ಹೊರಟರೆ ಎರಡು ಗಂಟೆ ಮೊದಲು|
ಯಾರದಾದರು ಮದುವೆಗೆ
ಹೋಗಬೇಕೆಂದರೆ ಅರ್ಧ ದಿನ ಮೊದಲು
ಮಧುಮಗನ ನಾವೇ ಹೋಗಿ ತಯಾರಿ ಮಾಡಲು||

ಮಕ್ಕಳಿಗೆ ಓದಿಕೋ ಎಂದರೆ
ಕೈಕಾಲು ನೋವು, ಹೊಟ್ಟೆ ಹಸಿವು
ಸಮಯವು ತುಂಬಾ ಕಡಿಮೆ|
ಅದೇ ಆಟ‌ಆಡು ಎಂದರೆ ಸಾಕು
ಸಮಯದ ಪರಿವೇ ಇರುವುದಿಲ್ಲ|
ಬೇರೆಯವರದೇನಾದರು ಪುಕ್ಕಟೆ
ಸಾಲ ಪಡೆದರೆ ಹಿಂದಿರುಗಿಸಲು ಬೇಜಾರು
ನಿನ್ನದೇನಾದರೂ ಇತರರಿಗೆ ಸಾಲ
ನೀಡಿದರೆ ಆವರನು ಪದೇಪದೇ ಪೀಡಿಸುವುದು||

ವಠಾರದವರ ತಿಥಿ ಊಟಕೆ
ನಾವೇ ಮೊದಲು
ಭಕ್ಷ ಭೋಜನದ ರುಚಿ ನೋಡಲು|
ಚುನಾವಣೆ ಬಂತೆಂದರೆ ತಾನೇ ಮೊದಲು
ರಾಜಕಾರಣಿಗಳ ಕೈ ಕುಲುಕಲು|
ಕ್ರಿಕೇಟ್ ಇರುವದಿನ ಕೆಲಸಕೆ
ರಜಾ ಬೀಳುತ್ತೆ ಮ್ಯಾಚ್ ನೋಡಲು||

ಹೆಂಗಳೆಯರಿಗಂತೂ ಸಮಯ
ಸಾಕಾಗುವುದಿಲ್ಲ, ಎಲ್ಲಾ
ಧಾರಾವಾಹಿಗಳ ನೋಡಲು|
ರಸ್ತೆ ಅಪಘಾತವಾದರೂ ಅಲ್ಲಿಯೂ ಮೊದಲು
ಊರಲ್ಲೇನಾದರು ಅವಘಡ
ಸಂಭವಿಸಿದರೂ ತಾನೇ ಮೊದಮೊದಲು|
ಬಿಟ್ಟಿ ಯಾವುದಾದರೂ ಸರಿ, ಅದಕೆಲ್ಲಾ
ಅಂಜಿಕೆ ಮುಜುಗರವೇನಿಲ್ಲ
ಎಲ್ಲದಕೂ ಮೊದಮೊದಲು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋರಾಟ
Next post ತೊಡಕು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…