ತೊಡಕು

ತೋಡಿ

ಚೆಲುವು ಹಿರಿಯದೊ !-ಹೃದಯ-
ದೋಲವು ಹಿರಿಯದೊ….!
ಚೆಲುವಿನಲಿಯೆ ಒಲವು ಇಹುದೊ!
ಒಲವಿನಲಿಯೆ ಚೆಲುವು ಇಹುದೊ!
ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯ….!


ಇನಿಯನಗಲ ನೆನಸಿ ನೆನಸಿ
ಮನೆಯಲಿರಲು ಬೇಸರೆನಿಸಿ
ದಣಿದ ಮನವ ತಣಿಸಲೆಣಸಿ
ಬನಕೆ ಹೋಗಲೆನುತ ನಡೆದೆ.

ತಳಿರಿನೊಳುಪ ಕಂಡು ಕುಣಿದೆ,
ಅಲರ ನಗೆಯ ನೋಡಿ ನಲಿದೆ,
ಚೆಲುವ ಬನದೊಳಾಲೆದೆ-ಉಲಿದೆ,
ಅಳಲ ಕೆಲವು ಗಳಿಗೆಯುಳಿದೆ.

ಇರಲು ಇಂತು ಏತಕೇನೊ….!
ಬರತು ಹೋಯ್ತು ಬಗೆಯ ನಲಿವು;
ಕೊರತೆಯೇನೊ ಬೆರೆತ ತೆರದಿ
ತೋರಿತಾಗ ಬನದ ಚೆಲುವು.

ತಳಿರು ಕಣ್ಣ ಕುಣಿಸದಾಯ್ತು,
ಅಲರ ನಗೆಯು ತಣಿಸದಾಯ್ತು,
ಬನದ ಬೆಡಗದೆಲ್ಲಿ ಹೋಯ್ತೊ..!
ಮನೆಗೆ ಬಂದ ಹಾಗೆ ಮರಳಿ.

ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ…!


ಬಗೆದು ಬಗೆದು ನಲ್ಲನಗಲ
ದುಗುಡ ಮಿಗಲು-ಕಂಬನಿಗಳು
ಒಗೆಯುತಿರಲು-ಗಾನದಿಂದ
ಬಗೆಯು ಸೊಗಸಬಹುದೆ..? ಎಂದೆ.

ಕೊಳಲನೂದಿ ಅಳಲ ಮರೆತೆ,
ಉಲಿಯೆ ವೀಣೆಯದಕೆ ಬೆರತೆ,
ಮೆಲುಪು ಬಲಿದ ರಾಗದೋರಿ
ಕಳೆದೆ ಕಾಲ ಸೊಗವ ಸಾರಿ;

ಇದ್ದುದಿದ್ದ ಹಾಗೆ ಹೃದಯ
ಎದ್ದು ನಡೆಯಿತೆಲ್ಲಿಗೇನೊ!
ಬಿದ್ದು ಹೋಯ್ತು ಗಾನದಲ್ಲಿ
ಇದ್ದ ಸೊಬಗದೇತಕೇನೊ!

ಕೊಳಲ ಸವಿಯೆ ತಿಳಿಯದಾಯ್ತು,
ವೀಣೆಯುಲುಹು ಕಾಣದಾಯ್ತು,
ಚೆಲುವ ರಾಗದೆಳೆಯೆ ಹೋಯ್ತು,
ಮಲಗಿಬಿಟ್ಟೆ ಹಾಗೆ ಮರಳಿ.

ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ….
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಯ ಸಾಕಾಗುವುದಿಲ್ಲ
Next post ಬಂಧವಿಮೋಚನೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…