Home / ಕವನ / ಕವಿತೆ / ತೊಡಕು

ತೊಡಕು

ತೋಡಿ

ಚೆಲುವು ಹಿರಿಯದೊ !-ಹೃದಯ-
ದೋಲವು ಹಿರಿಯದೊ….!
ಚೆಲುವಿನಲಿಯೆ ಒಲವು ಇಹುದೊ!
ಒಲವಿನಲಿಯೆ ಚೆಲುವು ಇಹುದೊ!
ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯ….!


ಇನಿಯನಗಲ ನೆನಸಿ ನೆನಸಿ
ಮನೆಯಲಿರಲು ಬೇಸರೆನಿಸಿ
ದಣಿದ ಮನವ ತಣಿಸಲೆಣಸಿ
ಬನಕೆ ಹೋಗಲೆನುತ ನಡೆದೆ.

ತಳಿರಿನೊಳುಪ ಕಂಡು ಕುಣಿದೆ,
ಅಲರ ನಗೆಯ ನೋಡಿ ನಲಿದೆ,
ಚೆಲುವ ಬನದೊಳಾಲೆದೆ-ಉಲಿದೆ,
ಅಳಲ ಕೆಲವು ಗಳಿಗೆಯುಳಿದೆ.

ಇರಲು ಇಂತು ಏತಕೇನೊ….!
ಬರತು ಹೋಯ್ತು ಬಗೆಯ ನಲಿವು;
ಕೊರತೆಯೇನೊ ಬೆರೆತ ತೆರದಿ
ತೋರಿತಾಗ ಬನದ ಚೆಲುವು.

ತಳಿರು ಕಣ್ಣ ಕುಣಿಸದಾಯ್ತು,
ಅಲರ ನಗೆಯು ತಣಿಸದಾಯ್ತು,
ಬನದ ಬೆಡಗದೆಲ್ಲಿ ಹೋಯ್ತೊ..!
ಮನೆಗೆ ಬಂದ ಹಾಗೆ ಮರಳಿ.

ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ…!


ಬಗೆದು ಬಗೆದು ನಲ್ಲನಗಲ
ದುಗುಡ ಮಿಗಲು-ಕಂಬನಿಗಳು
ಒಗೆಯುತಿರಲು-ಗಾನದಿಂದ
ಬಗೆಯು ಸೊಗಸಬಹುದೆ..? ಎಂದೆ.

ಕೊಳಲನೂದಿ ಅಳಲ ಮರೆತೆ,
ಉಲಿಯೆ ವೀಣೆಯದಕೆ ಬೆರತೆ,
ಮೆಲುಪು ಬಲಿದ ರಾಗದೋರಿ
ಕಳೆದೆ ಕಾಲ ಸೊಗವ ಸಾರಿ;

ಇದ್ದುದಿದ್ದ ಹಾಗೆ ಹೃದಯ
ಎದ್ದು ನಡೆಯಿತೆಲ್ಲಿಗೇನೊ!
ಬಿದ್ದು ಹೋಯ್ತು ಗಾನದಲ್ಲಿ
ಇದ್ದ ಸೊಬಗದೇತಕೇನೊ!

ಕೊಳಲ ಸವಿಯೆ ತಿಳಿಯದಾಯ್ತು,
ವೀಣೆಯುಲುಹು ಕಾಣದಾಯ್ತು,
ಚೆಲುವ ರಾಗದೆಳೆಯೆ ಹೋಯ್ತು,
ಮಲಗಿಬಿಟ್ಟೆ ಹಾಗೆ ಮರಳಿ.

ಚೆಲುವು ಹಿರಿಯದೋ!-ಹೃದಯ-
ದೊಲವು ಹಿರಿಯದೋ….
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...