ಪದವಾಗುವ ಪ್ರೀತಿ

ಕಾಡುತ್ತಿವೆ ರಾತ್ರಿಗಳು
ಹಗಲು ಕಟ್ಟಿದ ಇರುಳ ಕೋಟೆ
ಒಳಗೆ ಒಂದೇ ಸಮ ಕತ್ತಿವರಸೆ
ಪ್ರಾಣ ಹೋಗದ ಸಾವುಗಳು
ಸದ್ದು ಮಾಡದ ನೋವುಗಳ.

ಕತ್ತಲ ಸೋನೆ ಚರಿತ್ರೆಯಲ್ಲಿ
ತೋಯ್ದ ಮೆದುಳ ನೆಲದಲ್ಲಿ
ಮನಸ್ಸಿನ ಬೀಜ ಬಿರಿದು
ತಿಕ್ಕಾಟವಾಗುತ್ತಲೇ ತೆಕ್ಕೆಯಾಗುವ ರೀತಿ
ಪರದಾಡುತ್ತಲೇ ಪದವಾಗುವ ಪ್ರೀತಿ!

ಉರಿವ ಒಲೆ ಮೇಲೆ ತಲೆ ಬಾಣಲೆ
ಕೊತ ಕೊತ ಕುದಿಯಲ್ಲಿ ಎದ್ದು ಬಿದ್ದೇಳುವ ಎದೆ
ಹೆಚ್ಚಾದರೆ ಸೀದ ವಾಸನೆ ಕಚ್ಚುತ್ತದೆ
ಕಮ್ಮಿಯಾದರೆ ಅರೆ ಬರೆ ಹಸಿ-
ವು ಹೆಚ್ಚುತ್ತದೆ.

ಈ ವೈಪರೀತ್ಯದ ಉರಿ ಗಾಯ ಕಾಣುವುದಿಲ್ಲ
ಮೋಡ ಮುಚ್ಚಿದ ಬೆಳಕು ನೋವು ನಿಲ್ಲುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ
Next post ಸಂಸಾರವೆಂಬ ಸಾಗರದಲ್ಲಿ

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…