ಸಂಸಾರವೆಂಬ ಸಾಗರದಲ್ಲಿ

ಸಂಸಾರವೆಂಬ ಸಾಗರದಲ್ಲಿ
ಸಮಾಧಾನಿಯಾಗಿರಬೇಕು|
ಸಾಗರದಲೆಯ ಎದುರಿಸಿ ದೋಣಿ
ಮುಂದೆ ಸಾಗುವ ಹಾಗೆ ಸಾಗುತ್ತಿರಬೇಕು||

ಸಂಸಾರದಾಳವ ನೆನೆದು
ಭಯವನು ಬೀಳದೆ
ಸಂಯಮದೊಳಿರಬೇಕು|
ಸಂಸಾರ ತೀರವ ಸೇರುವ ತವಕದಿ
ಸದಾ ಕುತೂಹಲದಿಂದಿರಬೇಕು||

ಕೈಲಾಗುವಷ್ಟು, ಹಾಸಿಗೆ ಇರುವಷ್ಟು
ಕಾಲುಚಾಚುವುದೇ ಉತ್ತಮ|
ದುಸ್ಸಾಹಸ, ದುರಾಲೋಚನೆ ಸಲ್ಲದು
ಸದ್ಬುದ್ಧಿ, ಸದಾಚಾರ, ಸಹೃದಯತೆ
ಎತ್ತರೆತ್ತರಕ್ಕೆ ಕರೆದೊಯ್ಯುವುದು||

ಏನೇ ಕಷ್ಟ ಬಂದರೂ
ಹರಿಯನು ನಂಬಲುಬೇಕು|
ಧೃಡ ಮನದಿ ಭಜಿಸೆ ಹರಿ ನಿನ್ನ
ಭಯದೂರ ಮಾಡುವನು|
ಈಜಿ ಈ ಸಂಸಾರ ದಡವನು
ಸೇರಲು ಧೈರ್‍ಯವ ನೀಡುವನು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪದವಾಗುವ ಪ್ರೀತಿ
Next post ಎದೆಯ ಹಾಡೆ!

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys