ಮನವಿ

ಒಕ್ಕಲೆಬ್ಬಿಸದಿರಿ ನನ್ನ
ಈ ತುಂಡು ನೆಲವೆ
ನನಗೆ ಅನ್ನ ಚಿನ್ನ

ಅಗೋ…ಅದೇ
ನಾ ಕೈಯಾರೆ ಬೆಳೆದ
ನಿಂಬೆ ದಾಳಿಂಬೆ

ಹೇಗೆ ತೂಗಿದೆ ನೋಡಿ
ಚಾಚಿ ರೆಂಬೆ ಕೊಂಬೆ

ಇಗೋ… ಇದೇ
ಬಾಳೆ…. ಹೊಂಬಾಳೆ
ಇನ್ನೇನು ಹಣ್ಣಾಗಲಿದೆ ನಾಳೆ

ಇನ್ನೀ…. ಹಳ್ಳ
ಬಸಿದ ಬೆವರ
ತುಂಬಿ ಕೊಟ್ಟ ಗಂಗೆ

ಆ ಬೆಟ್ಟದ ತುದಿ
ಅದೇ ದೇವ ಸನ್ನಿಧಿ
ಹೊಳೆಯಿತಲ್ಲೇ….
ಬಾಳೆಂದಿತು ಇಲ್ಲೇ

ಈ ಕಾಡಿನಲ್ಲಿ ಇದರ ಹಾಡಿನಲ್ಲಿ
ಬೆರೆತು ನಾನೀಗ ಅಭಿನ್ನ
ಒಮ್ಮೆ ಯೋಚಿಸಿ
ಬೇರು ಕಿತ್ತೆಸೆಯುವ ಮುನ್ನ

ಒಕ್ಕಲೆಬ್ಬಿಸದಿರಿ ನನ್ನ
ಈ ತುಂಡು ನೆಲವೆ
ನನಗೆ ಅನ್ನ ಚಿನ್ನ

ಉಳಿದಿದೆ ತುಸುವೆ ತ್ರಾಣ
ಪಣಕ್ಕಿಟ್ಟೇನು ಪ್ರಾಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಕೆಟ್ ಸವಾರ
Next post ದೀಪ

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…