ಮನವಿ

ಒಕ್ಕಲೆಬ್ಬಿಸದಿರಿ ನನ್ನ
ಈ ತುಂಡು ನೆಲವೆ
ನನಗೆ ಅನ್ನ ಚಿನ್ನ

ಅಗೋ…ಅದೇ
ನಾ ಕೈಯಾರೆ ಬೆಳೆದ
ನಿಂಬೆ ದಾಳಿಂಬೆ

ಹೇಗೆ ತೂಗಿದೆ ನೋಡಿ
ಚಾಚಿ ರೆಂಬೆ ಕೊಂಬೆ

ಇಗೋ… ಇದೇ
ಬಾಳೆ…. ಹೊಂಬಾಳೆ
ಇನ್ನೇನು ಹಣ್ಣಾಗಲಿದೆ ನಾಳೆ

ಇನ್ನೀ…. ಹಳ್ಳ
ಬಸಿದ ಬೆವರ
ತುಂಬಿ ಕೊಟ್ಟ ಗಂಗೆ

ಆ ಬೆಟ್ಟದ ತುದಿ
ಅದೇ ದೇವ ಸನ್ನಿಧಿ
ಹೊಳೆಯಿತಲ್ಲೇ….
ಬಾಳೆಂದಿತು ಇಲ್ಲೇ

ಈ ಕಾಡಿನಲ್ಲಿ ಇದರ ಹಾಡಿನಲ್ಲಿ
ಬೆರೆತು ನಾನೀಗ ಅಭಿನ್ನ
ಒಮ್ಮೆ ಯೋಚಿಸಿ
ಬೇರು ಕಿತ್ತೆಸೆಯುವ ಮುನ್ನ

ಒಕ್ಕಲೆಬ್ಬಿಸದಿರಿ ನನ್ನ
ಈ ತುಂಡು ನೆಲವೆ
ನನಗೆ ಅನ್ನ ಚಿನ್ನ

ಉಳಿದಿದೆ ತುಸುವೆ ತ್ರಾಣ
ಪಣಕ್ಕಿಟ್ಟೇನು ಪ್ರಾಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಕೆಟ್ ಸವಾರ
Next post ದೀಪ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys