ದೀಪ

ತೌರಿಗೆ ಹೋದವಳು
ಬರಲು ತಡವಾದಲ್ಲಿ
ತಳಮಳ ಕಳವಳ ಹೇಳೋಕೆ ತೀರದು.

ಅಂಗಳದಿ ಪ್ರಿಯವಾದ ರಂಗೋಲಿ ನಗುವಿಲ್ಲ
ಹೂಬಳ್ಳಿ ಗಿಡಗಳಿಗೆ ನೀರಿಲ್ಲ
ದೇವರ ಮುಂದಿನ ದೀಪಿಲ್ಲ.

ಒಳಗೂ ಬಣ ಬಣ ಹೊರಗೂ ಬಣ ಬಣ
ಲಲ್ಲೆ ಹೊಡೆಯಲು ಲಲಿತೆ ಅವಳಿಲ್ಲ
ತಿನ್ನಲು, ಕುಡಿಯಲು ಸೊಗಸಿಲ್ಲ.

ಕಣ್ಣಿವೆ ಕಡಿದರು ನಿದ್ದಿಲ್ಲ
ಉದ್ದಾದ ರಾತ್ರಿಗೆ ಮದ್ದಿಲ್ಲ
ಸದ್ದಿಲ್ಲ, ಗದ್ದಿಲ್ಲ ಸುಂಯ್, ಸುಂಯ್ ಗುಡಿತಿದೆ ಮ್ಲಾನ
ಅಸಹನೀಯ ಮೌನ

ಎಲ್ಲಿದ್ಲೊ ಏನ್‌ಕಥೆಯೋ ಒಬ್ಬಳೇ ಬಂದಳು
ಎಲ್ಲವನು, ಎಲ್ಲರನು ಮರೆಸಿದಳು
ಘಳಿಗೆ ಬಿಟ್ಟಿರದಂತೆ ಮೋಡಿ ಮಾಡಿಹಳು

ತಡಮಾಡಿ ಬಂದುದಕೆ ದುಮ್ಮಾನ ತೋರಲು
ಬಿಮ್ಮನಿರ ಬೇಕೆಂದು ಯೋಜಿಸಿದೆ
ಪ್ರತಿಕ್ರಿಯೆ ತಿಳಿಯಲು ಬಯಸಿದೆ

ಅವುಚಿ ಕಂದನ ಎದೆಯಲ್ಲಿ
ಅಳುಕಿನ ಭಾವದಲಿ, ಅಸ್ಥಿರದ ಹೆಜ್ಜೆಯಲಿ
ಧಾವಿಸಿ ಬಂದಳು; ಕಂಡವಳೆ ಒಂಥರಹ ನಕ್ಕಳು

ಫಕ್ಕನೆ ಹೊತ್ತಿದವು ನನ್ನಲ್ಲಿ ಝಗಮಗಿಸುವ ದೀಪ
ಮರೆತೋಯ್ತು ಮಾಡಿದ್ದ ಶಪಥ
ಹಾರಿ ಮುತ್ತಿಡುವುದೊಂದೇ ಉಳಿಯಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನವಿ
Next post ಗೂಡು ಕಟ್ಟಿದ ಹಕ್ಕಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…