ದೀಪ

ತೌರಿಗೆ ಹೋದವಳು
ಬರಲು ತಡವಾದಲ್ಲಿ
ತಳಮಳ ಕಳವಳ ಹೇಳೋಕೆ ತೀರದು.

ಅಂಗಳದಿ ಪ್ರಿಯವಾದ ರಂಗೋಲಿ ನಗುವಿಲ್ಲ
ಹೂಬಳ್ಳಿ ಗಿಡಗಳಿಗೆ ನೀರಿಲ್ಲ
ದೇವರ ಮುಂದಿನ ದೀಪಿಲ್ಲ.

ಒಳಗೂ ಬಣ ಬಣ ಹೊರಗೂ ಬಣ ಬಣ
ಲಲ್ಲೆ ಹೊಡೆಯಲು ಲಲಿತೆ ಅವಳಿಲ್ಲ
ತಿನ್ನಲು, ಕುಡಿಯಲು ಸೊಗಸಿಲ್ಲ.

ಕಣ್ಣಿವೆ ಕಡಿದರು ನಿದ್ದಿಲ್ಲ
ಉದ್ದಾದ ರಾತ್ರಿಗೆ ಮದ್ದಿಲ್ಲ
ಸದ್ದಿಲ್ಲ, ಗದ್ದಿಲ್ಲ ಸುಂಯ್, ಸುಂಯ್ ಗುಡಿತಿದೆ ಮ್ಲಾನ
ಅಸಹನೀಯ ಮೌನ

ಎಲ್ಲಿದ್ಲೊ ಏನ್‌ಕಥೆಯೋ ಒಬ್ಬಳೇ ಬಂದಳು
ಎಲ್ಲವನು, ಎಲ್ಲರನು ಮರೆಸಿದಳು
ಘಳಿಗೆ ಬಿಟ್ಟಿರದಂತೆ ಮೋಡಿ ಮಾಡಿಹಳು

ತಡಮಾಡಿ ಬಂದುದಕೆ ದುಮ್ಮಾನ ತೋರಲು
ಬಿಮ್ಮನಿರ ಬೇಕೆಂದು ಯೋಜಿಸಿದೆ
ಪ್ರತಿಕ್ರಿಯೆ ತಿಳಿಯಲು ಬಯಸಿದೆ

ಅವುಚಿ ಕಂದನ ಎದೆಯಲ್ಲಿ
ಅಳುಕಿನ ಭಾವದಲಿ, ಅಸ್ಥಿರದ ಹೆಜ್ಜೆಯಲಿ
ಧಾವಿಸಿ ಬಂದಳು; ಕಂಡವಳೆ ಒಂಥರಹ ನಕ್ಕಳು

ಫಕ್ಕನೆ ಹೊತ್ತಿದವು ನನ್ನಲ್ಲಿ ಝಗಮಗಿಸುವ ದೀಪ
ಮರೆತೋಯ್ತು ಮಾಡಿದ್ದ ಶಪಥ
ಹಾರಿ ಮುತ್ತಿಡುವುದೊಂದೇ ಉಳಿಯಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನವಿ
Next post ಗೂಡು ಕಟ್ಟಿದ ಹಕ್ಕಿ

ಸಣ್ಣ ಕತೆ

  • ಕುಟೀರವಾಣಿ

    ಪೀಠಿಕೆ ನನ್ನ ಬಡಗುಡಿಸಲ ಹೆಸರು "ಆನಂದಕುಟೀರ". ಒಂದು ದಿನ ನಡುಮಧ್ಯಾಹ್ನ. ಕುಟೀರದೊಳಗೆ ಮುರುಕು ಕಿಟಿಕಿಯ ಹತ್ತಿರ ಕುಳಿತು, ಹೊರಗಿನ ಪ್ರಸಂಚವನು ನೋಡುತಿದ್ದೆ. ಮನಸು ಬೇಸರದಿಂದ ತುಂಬಿ ಹೋಗಿತ್ತು.… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…