ದೀಪ

ತೌರಿಗೆ ಹೋದವಳು
ಬರಲು ತಡವಾದಲ್ಲಿ
ತಳಮಳ ಕಳವಳ ಹೇಳೋಕೆ ತೀರದು.

ಅಂಗಳದಿ ಪ್ರಿಯವಾದ ರಂಗೋಲಿ ನಗುವಿಲ್ಲ
ಹೂಬಳ್ಳಿ ಗಿಡಗಳಿಗೆ ನೀರಿಲ್ಲ
ದೇವರ ಮುಂದಿನ ದೀಪಿಲ್ಲ.

ಒಳಗೂ ಬಣ ಬಣ ಹೊರಗೂ ಬಣ ಬಣ
ಲಲ್ಲೆ ಹೊಡೆಯಲು ಲಲಿತೆ ಅವಳಿಲ್ಲ
ತಿನ್ನಲು, ಕುಡಿಯಲು ಸೊಗಸಿಲ್ಲ.

ಕಣ್ಣಿವೆ ಕಡಿದರು ನಿದ್ದಿಲ್ಲ
ಉದ್ದಾದ ರಾತ್ರಿಗೆ ಮದ್ದಿಲ್ಲ
ಸದ್ದಿಲ್ಲ, ಗದ್ದಿಲ್ಲ ಸುಂಯ್, ಸುಂಯ್ ಗುಡಿತಿದೆ ಮ್ಲಾನ
ಅಸಹನೀಯ ಮೌನ

ಎಲ್ಲಿದ್ಲೊ ಏನ್‌ಕಥೆಯೋ ಒಬ್ಬಳೇ ಬಂದಳು
ಎಲ್ಲವನು, ಎಲ್ಲರನು ಮರೆಸಿದಳು
ಘಳಿಗೆ ಬಿಟ್ಟಿರದಂತೆ ಮೋಡಿ ಮಾಡಿಹಳು

ತಡಮಾಡಿ ಬಂದುದಕೆ ದುಮ್ಮಾನ ತೋರಲು
ಬಿಮ್ಮನಿರ ಬೇಕೆಂದು ಯೋಜಿಸಿದೆ
ಪ್ರತಿಕ್ರಿಯೆ ತಿಳಿಯಲು ಬಯಸಿದೆ

ಅವುಚಿ ಕಂದನ ಎದೆಯಲ್ಲಿ
ಅಳುಕಿನ ಭಾವದಲಿ, ಅಸ್ಥಿರದ ಹೆಜ್ಜೆಯಲಿ
ಧಾವಿಸಿ ಬಂದಳು; ಕಂಡವಳೆ ಒಂಥರಹ ನಕ್ಕಳು

ಫಕ್ಕನೆ ಹೊತ್ತಿದವು ನನ್ನಲ್ಲಿ ಝಗಮಗಿಸುವ ದೀಪ
ಮರೆತೋಯ್ತು ಮಾಡಿದ್ದ ಶಪಥ
ಹಾರಿ ಮುತ್ತಿಡುವುದೊಂದೇ ಉಳಿಯಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನವಿ
Next post ಗೂಡು ಕಟ್ಟಿದ ಹಕ್ಕಿ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys