Home / ಕವನ / ಕವಿತೆ / ಧರ್‍ಮ ಮತ್ತು ಸೇಡು

ಧರ್‍ಮ ಮತ್ತು ಸೇಡು

ಯುಗ ಯುಗಗಳು ಕಳೆದರೂ
ನಾವು ಮಾಡಿದ್ದೇನು?
ನಾವು ಸಾಧಿಸಿದ್ದೇನು?

ಹುಟ್ಟು ಹಾಕಿದ್ದೇವೆ
ಎಲ್ಲೆಂದರಲ್ಲಿ ಭಯೋತ್ಪಾದನೆಯ
ಅಂಥ್ರಾಕ್ಸ್ ಮೃತ್ಯುಮಾರಿ
ಜೈವಿಕ ಬಾಂಬಿನ ಅಟ್ಟಹಾಸದಲಿ
ಶಸ್ತ್ರಾಸ್ತ್ರಗಳ ಪೌರುಷವೆಲ್ಲಿ?
ಅಂಥ್ರಾಕ್ಸ್ ಭೀತಿ ಪಸರಿಸಿದೆ ಸೋಂಕಿನಂತೆ
ಚಾಚುತಿದೆ ಕಾಲನ ಕೆನ್ನಾಲಿಗೆ
ಉಗ್ರರ ಅಟ್ಟಹಾಸ ನಿದ್ದೆಗೆಡಿಸಿ
ಬೆಚ್ಚಿ ಬೀಳಿಸುತಿದೆ
ಮಿನುಗುವ ಮುಂಚೆ ಕಮರಿಗೆ
ಹಾಡುವ ಮುನ್ನ ದನಿ ಬತ್ತಿದೆ
ಕವಿತೆ ಬರೆಯುವ ಕೈ ನಿಂತಿದೆ

ಧರ್‍ಮದ ಹೆಸರಿನಲಿ
ನಡೆಸಿದವನೊಬ್ಬ ದುಷ್ಕೃತ್ಯವ
ಇದರ ಸೇಡನು ತೀರಿಸುತಿಹನು
ಸಾಮ್ರಾಜ್ಯ ಶಾಹಿಯೊಬ್ಬ
ಇವರೀರ್‍ವರ
ಯುದ್ಧದ ಮಾರಣ ಹೋಮದಲಿ
ಜಗತ್ತು ಅನುಭವಿಸುತಿದೆ ನರಕಯಾತನೆ
ಬಟ್ಟ ಬಯಲಲಿ ತುತ್ತಿಗಾಗಿ
ಆಸೆಗಣ್ಣುಗಳು ನಿಂತಿವೆ ಕಾಯುತ್ತಾ
ಕನಲಿದ ಮುಗ್ಧ ಮಕ್ಕಳು
ರೋಧಿಸುವ ಹೆಂಗೆಳೆಯರು
ಹಣ್ಣು ಕಣ್ಣುಗಳ ಕಂಡ ಕಲ್ಲೆದೆಯು ಕರಗುತಿದೆ
ಅಲ್ಲಿನ ಜನರ ಪ್ರಾಣ ಸಂಕಟಕೆ
ಸ್ಪಂದಿಸುವವರ್‍ಯಾರು?

ಇದರ ನಡುವೆ ಕೋಮುವಾದ
ಅವರು-ಇವರನು ಅಲ್ಲಲ್ಲ!
ಅವರವರೇ ಕಾದಾಡಲು
ಹಚ್ಚಿಹರು ಕಿಚ್ಚನು

ಪ್ರಾಣ ತೆತ್ತದ್ದು ಗಿಡ ಮರ ಬಳ್ಳಿ
ಧಮನ ಮಾಡುವನೆಂದು ಹೇಳುವರು
ಪುನಃ ಹುಟ್ಟುಹಾಕುವರು
ಧರ್ಮದ ಸೋಗಿನಲಿ ಸೇಡು
ಇದರ ಹಿಂದೆ ಏನು ಅಡಗಿಹುದೋ
ಅಮಾಯಕರಿಗೇನು ತಿಳಿದೀತು
ಆದರೆ!
ನಾವು ಆಗೇವಿ
ಬೆತ್ತಲೆ ಮರದ್ಹಾಂಗ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...