ಮರೀಚಿಕೆ

ಯಾತ್ರಿಕರು ಓಯಸಿಸ್ಸೆಂದು
ಭ್ರಮಿಸುವರು ಮರು ಭೂಮಿಯಲಿ
ಬಾಯಾರಿಕೆಯ ತೃಷೆ ನೀಗಿಸಲು
ಹೋಗುವರು ನೀರೆಂದು ಭಾವಿಸಿ

ಸಮೀಪಿಸಿದಂತೆ
ಕಂಡ ನೀರು ಮಾಯ
ಈ ಸೋಜಿಗಕೆ ಬೀಳುವರು ಬೇಸ್ತು

ಮಾಯವಾದ ನೀರು
ಕಾಣುವುದು ಮುಂದೆಲ್ಲೋ ದೂರದಲಿ

ಪುನಃ ಸಾಗಿದರೆ ಗಾಳಿ ಪದರಲಿ
ಉಂಟಾದ ಪ್ರತಿಬಿಂಬ ಕಂಡಿತಲ್ಲಿ
ನೀರಿನ ಪದರಲಿ ಉಂಟಾದ
ಪ್ರತಿಬಿಂಬವೆಂದು ಊಹಿಸಿ
ನಿಜವನರಿಯದೇ ಮೋಸ ಹೋದರಲ್ಲಿ

ಸಮತಟ್ಟು ಮಾಡಿದ ಹೆದ್ದಾರಿಯಲಿ
ಸಂಭವಿಸುವುದುಂಟು ಈ ವಿದ್ಯಮಾನ
ಇದಕೆ ‘ಬಿಸಿಲ್ಗುದರೆ’ ‘ಮೃಗಜಲ’
ಎಂಬ ಸುಂದರ ಹೆಸರುಗಳುಂಟು

ಗಾಳಿ ಬೆಳಕಿನ ಚೆಲ್ಲಾಟ
ಬಿಸಿಲ ದಗೆಯಲಿ
ಕುತೂಹಲಕಾರಿ ಜನನ
ಈ ವಿಚಿತ್ರ ಬೆರಗಿಗೆ ಬೆಳಕಿನ
ಸಂಪೂರ್ಣ ಆಂತರಿಕ ಪ್ರತಿಫಲನ ಕಾರಣವು

ಇದುವೇ ಬೆಳಕಿನ ಆಟ ನಿಸರ್ಗದಲಿ
ಏನೆಲ್ಲಾ ಅಚ್ಚರಿಗಳುಂಟು
ಸೋಲಾರೆಂಬ ಕಣಜದಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಲ
Next post ಜುಡಾಸ್

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…