ಒಳತೋಟಿ

‘ಇವಳ’ ತೆಕ್ಕೆಯಲ್ಲಿ
‘ಅವಳ’ ಕಲ್ಪಿಸಿ ಕೊಳ್ಳುತ್ತ
‘ಅವಳೆ’ ಎಂದು ಭ್ರಮಿಸಿ
ಸ್ಪಂದಿಸಿದಾಗ
‘ಇವಳಿಗೆ’ ‘ನನ್ನ ಮೇಲೆ ಎಷ್ಟೊಂದು ಮೋಹ’
ಅನ್ನಿಸಿ
ಸುಖಿಸಿದರೆ
ನನಗೆ ಪಾಪ! ಅನ್ನಿಸುತ್ತದೆ
ಸಮಾಧಾನ ತರುತ್ತದೆ!

ನನ್ನ ಒಳತೋಟಿ ಬಹಿರಂಗವಾಗಿಲ್ಲವಲ್ಲ ಅಂತ
‘ಇವಳಿಗೂ’
ಹಾಗೇ ಅನ್ನಿಸಿರಲಿಕ್ಕೂ ಸಾಕು
‘ಪಾತಕ’ ಅಂದರೆ
ಏನು ಮಾಡುವುದು?
ದೌರ್ಬಲ್ಯ,
ಸಜ್ಜನಿಕೆ ತೆರೆ ಹರಿದು ಕೊಂಡು
ಪುಸಕ್ಕನೆ ನುಸುಳಿ
ಎರ್ರಾ ಬಿರ್ರಿ ಕುಣಿಯ ತೊಡಗುತ್ತದೆ.
ನಿರುಪಾಯನಾಗಿದ್ದೇನೆ
‘ನೋಡ್ತಾ, ನೋಡ್ತಾ ಮನೆ ಹೆಂಡತಿ ಕುರುಡಿ’ ಅನ್ನೋ ಹಾಗಾಗಿದೆ.

ನನಗನ್ನಿಸ್ತಿದೆ
ಉಪಾಯವಾಗಿ
ಸ್ವಲ್ಪ ದಿನ ದೂರ ಉಳಿದರೆ!
ಅಡ್ಡಾಡಿ ಬಂದರೆ!
ಬೆಸುಗೆ ಬಲವಾಗ ಬಹುದೇನೋ?
ಉಹೂಂ! ಹೇಳೋಕಾಗಲ್ಲ
ಸುಳಿ, ಸೆಳೆವು ಮಧ್ಯೆ
ರಿಪೇರಿ ಘಟ್ಟ ದಾಟಲೂ ಬಹುದು.
ಆಘಾತಕ್ಕೀಡಾದರೂ ಆಶ್ಚರ್ಯವೇನಿಲ್ಲ.
ಪೇಚಿಗೆ ಸಿಕ್ಕಿಸಿ ಬಿಟ್ಟಿದೆ
ದಯವಿಟ್ಟು ಹೇಳಿ
ನಿಮ್ಮಲ್ಲಿ ಯಾರಿಗಾದರೂ
ಇಂತಹ ತೊಡಕು ಎದುರಾಗಿರ ಬಹುದು
ಏನು ಮಾಡಿದಿರಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು…
Next post ಕಟ್ಟುತ್ತಿರುವೆನು ಮಂದಿರವನ್ನು

ಸಣ್ಣ ಕತೆ

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…