Home / ಕವನ / ಭಾವಗೀತೆ / ಕಟ್ಟುತ್ತಿರುವೆನು ಮಂದಿರವನ್ನು

ಕಟ್ಟುತ್ತಿರುವೆನು ಮಂದಿರವನ್ನು

ಕಟ್ಟುತ್ತಿರುವೆನು ಮಂದಿರವನ್ನು
ಎದೆಯ ಗೂಡಿನಲ್ಲಿ
ರಾಮ ರಹೀಮ ಕ್ರಿಸ್ತ ಅಲ್ಲಮ
ಎಲ್ಲರಿರುವರಲ್ಲಿ

ಆಂಜನೇಯನಿಗೂ ಏಸುಕ್ರಿಸ್ತನಿಗೂ
ಬಹಳ ನ್ಯಾಸ್ತವಿಲ್ಲಿ
ಬುದ್ಧ ನಾನಕ ಮಹಾವೀರರು
ಇವರ ಸ್ನೇಹದಲ್ಲಿ

ರಾಮ ಪವಡಿಸಿಹ ಮಸೀದಿಯಲ್ಲಿ
ಕ್ರಿಸ್ತನಾ ಕೋಣೆಯಲ್ಲಿ
ಇದಕೆ ಹೆಸರುಗಳು ಇಗರ್ಜಿ ಬಸದಿ
ನೂರು ಭಾಷೆಯಲ್ಲಿ

ಇಲ್ಲಿಯ ರಾಮ ನುಡಿವನು ಉರ್‍ದು
ಅಲ್ಲಾ ಸಂಸ್ಕೃತ ಬಲ್ಲ
ಕ್ರಿಸ್ತನಿಗೋ ತೆಲುಗೆಂದರೆ ಪ್ರೀತಿ
ಕನ್ನಡವಿಲ್ಲದೆ ಇಲ್ಲ

ಎಲ್ಲಾ ದೇವರು ಕ್ರಿಕೇಟಾಡುವರು
ಸೋಲು ಗೆಲುವು ಕ್ಷಣಿಕ
ಕಡೆಗೆ ಮಬ್ಬಲಿ ಒಂದೆ ಕ್ಲಬ್ಬಲಿ
ತೋರ್‍ವರೆಲ್ಲ ಪುಳಕ

ಅವನು ಹೇಳುವನು ಕಿರೀಟ ಭಾರ
ಇವನಿಗೊ ಟೋಪಿಯು ಭಾರ
ಎಲ್ಲರು ಹಾರೈಸಿಹರು ಕ್ರಿಸ್ತಗೆ
ಶಿಲುಬೆಯಿಂದ ಪರಿಹಾರ

ಜುಟ್ಟುಗಳಿದ್ದರೆ ಜುಟ್ಟೆಳೆದಾಟ
ಗಡ್ಡಗಳಿದ್ದರೆ ಮುಂಭಾರ
ದೇಹಕೆ ಭಾರ ಆ ಶಿವದಾರ
ಕಡಿಮೆಯಲ್ಲ ಜನಿವಾರ!

ಎಲ್ಲ ಚಾನಲಲಿ ಮತ ಮೌಢ್ಯಗಳು
ವಿಜ್ಞಾನಕೆ ಇದು ಥರವೇ
ಕಡೆಗೆ ನಮ್ಮನೂ ಎಳೆದು ತರುವಿರಿ
ನಿಮಗೆ ಇದು ಭೂಷಣವೇ

ಎದೆಯ ಗೂಡಿನಲಿ ರಾಮ ಅಳುವನು
ಪರಿವಾರದ ಜೊತೆಗೂಡಿ
ತಾಯಿಯ ಗರ್‍ಭವ ದಾಟಿದ ತಪ್ಪಿಗೆ
ಪ್ರಾಣಿಪಕ್ಷಿಗಳ ಕೂಡಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...