ಕಟ್ಟುತ್ತಿರುವೆನು ಮಂದಿರವನ್ನು

ಕಟ್ಟುತ್ತಿರುವೆನು ಮಂದಿರವನ್ನು
ಎದೆಯ ಗೂಡಿನಲ್ಲಿ
ರಾಮ ರಹೀಮ ಕ್ರಿಸ್ತ ಅಲ್ಲಮ
ಎಲ್ಲರಿರುವರಲ್ಲಿ

ಆಂಜನೇಯನಿಗೂ ಏಸುಕ್ರಿಸ್ತನಿಗೂ
ಬಹಳ ನ್ಯಾಸ್ತವಿಲ್ಲಿ
ಬುದ್ಧ ನಾನಕ ಮಹಾವೀರರು
ಇವರ ಸ್ನೇಹದಲ್ಲಿ

ರಾಮ ಪವಡಿಸಿಹ ಮಸೀದಿಯಲ್ಲಿ
ಕ್ರಿಸ್ತನಾ ಕೋಣೆಯಲ್ಲಿ
ಇದಕೆ ಹೆಸರುಗಳು ಇಗರ್ಜಿ ಬಸದಿ
ನೂರು ಭಾಷೆಯಲ್ಲಿ

ಇಲ್ಲಿಯ ರಾಮ ನುಡಿವನು ಉರ್‍ದು
ಅಲ್ಲಾ ಸಂಸ್ಕೃತ ಬಲ್ಲ
ಕ್ರಿಸ್ತನಿಗೋ ತೆಲುಗೆಂದರೆ ಪ್ರೀತಿ
ಕನ್ನಡವಿಲ್ಲದೆ ಇಲ್ಲ

ಎಲ್ಲಾ ದೇವರು ಕ್ರಿಕೇಟಾಡುವರು
ಸೋಲು ಗೆಲುವು ಕ್ಷಣಿಕ
ಕಡೆಗೆ ಮಬ್ಬಲಿ ಒಂದೆ ಕ್ಲಬ್ಬಲಿ
ತೋರ್‍ವರೆಲ್ಲ ಪುಳಕ

ಅವನು ಹೇಳುವನು ಕಿರೀಟ ಭಾರ
ಇವನಿಗೊ ಟೋಪಿಯು ಭಾರ
ಎಲ್ಲರು ಹಾರೈಸಿಹರು ಕ್ರಿಸ್ತಗೆ
ಶಿಲುಬೆಯಿಂದ ಪರಿಹಾರ

ಜುಟ್ಟುಗಳಿದ್ದರೆ ಜುಟ್ಟೆಳೆದಾಟ
ಗಡ್ಡಗಳಿದ್ದರೆ ಮುಂಭಾರ
ದೇಹಕೆ ಭಾರ ಆ ಶಿವದಾರ
ಕಡಿಮೆಯಲ್ಲ ಜನಿವಾರ!

ಎಲ್ಲ ಚಾನಲಲಿ ಮತ ಮೌಢ್ಯಗಳು
ವಿಜ್ಞಾನಕೆ ಇದು ಥರವೇ
ಕಡೆಗೆ ನಮ್ಮನೂ ಎಳೆದು ತರುವಿರಿ
ನಿಮಗೆ ಇದು ಭೂಷಣವೇ

ಎದೆಯ ಗೂಡಿನಲಿ ರಾಮ ಅಳುವನು
ಪರಿವಾರದ ಜೊತೆಗೂಡಿ
ತಾಯಿಯ ಗರ್‍ಭವ ದಾಟಿದ ತಪ್ಪಿಗೆ
ಪ್ರಾಣಿಪಕ್ಷಿಗಳ ಕೂಡಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಳತೋಟಿ
Next post ಲ್ಯಾಪ್ ಟಾಪ್

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…