ನೆರೆಯವರು ನಕ್ಕರು

ನೆರೆಯವರು ನಕ್ಕರು:
“ಇವನಿಗೆ ಹುಚ್ಚು ಕಚ್ಚಿದೆ
ಮುಖದಲ್ಲಿ ದಿಗಿಲು ಬಿಚ್ಚಿದೆ
ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ
ಮೊಸರನ್ನದ ಬಲಿಕೊಟ್ಟರೆ
ಹೊಸದನಿ ಮಾಯುತ್ತದೆ.
ಇವನು
ಹೊಸಿಲು ದಾಟದಂತೆ ಕಾಯುತ್ತದೆ.”

ಅವರಿಗೇನು ಗೊತ್ತು
ಪ್ರತಿ ರಾತ್ರಿ
ಅಧೋಲೋಕಗಳ ಕದ ತೆರೆಯುತ್ತದೆ,
ಒಳಗಿನ ವಿಧವಿಧ ದೃಶ್ಯ
ಎದೆಯಾಳಕ್ಕಿಳಿಯುತ್ತದೆ.
ನೆಲ ಬಿರಿಯುತ್ತದೆ
ನಭ ಕೆನೆಯುತ್ತದೆ
ಅರ್ಥ ಸಿಗದ ಕೂಗು
ಆಕಾಶಕ್ಕೆ ಪುಟಿದು
ನಿದ್ದೆ ಎಚ್ಚರಗಳ ನಡುವೆ
ಗಡಿಯೆ ಮಾಸುತ್ತದೆ.
ಅರಿಯಬಾರದ ಸನ್ನೆ ಮುಗಿಲ ಮುಖದಲ್ಲಿ ಮೂಡಿ
ಒಳಗಿನ ಕನ್ನೆಗೆ ಫಕ್ಕನೆ
ಗುರುತು ಹತ್ತುತ್ತದೆ.

ಆಗ ಮುಗಿಲಿಗೆ ಮೃದಂಗದ ದನಿ
ಮಾತು ಮಣಿಹನಿ
ಕನ್ನೆಯ ಎದೆಯೋ
ಹೊನ್ನರಾಗದ ಗಣಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭ್ರಮಣ – ೧೫
Next post ಬೆಳೆಯಲಿ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys