ಏನ ಕೊಡಲಿ

ಏನ ಕೊಡಲಿ ನಿನಗೇ ನಾ ತಂದೆ
ಏನನರ್ಪಿಸಿದರೆ ನಿನಗೇ ಪ್ರೀತಿಯೊ || ಪ ||

ಪೀಠವನರ್ಪಿಸಲೆ ಭೂಮಿಯೆ ಪೀಠ
ಗುಡಿಯನು ಕಟ್ಟಿಸಲೆ ಗಗನವೆ ದೇಗುಲ
ಜಲದಲಿ ತೊಳೆಯಲೆ ಸಾಗರ ನಿನ್ನದಯ್ಯ
ಹೂಗಳ ಮುಡಿಸಲೆ ವನವೆಲ್ಲ ನಿನ್ನದಯ್ಯ || ೧ ||

ದೀಪವ ಬೆಳಗಲೆ ರವಿತೇಜ ನಿನ್ನದಯ್ಯ
ಧೂಪವ ಹಾಕಲೆ ಮಲಯಜ ಬೀಸುವ
ಆರತಿ ಎತ್ತಲೆ ತಾರೆ ಬೆಳಗುತಿವೆ
ನೈವೇದ್ಯ ಅರ್ಪಿಸಲೆ ಅನ್ನ ನಿಮ್ಮಯ ದಾನ || ೨ ||

ವಿಶ್ವವ ತುಂಬಿದ ವಿಶ್ವೇಶ್ವರನೆ
ನನ್ನಲು ನೀನೇ ತುಂಬಿರುವಾಗ
ನನ್ನನೆ ನಿನ್ನಡಿಗೆ ಒಪ್ಪಿಸಿಕೊಳುವೆನು
ಸ್ವೀಕರಿಸಯ್ಯಾ ಪಾವನಗೊಳಿಸಿ || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ನಿಮ್ಮ ಮನೆಗಳಲ್ಲಿ
Next post ‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys