ಏನ ಕೊಡಲಿ

ಏನ ಕೊಡಲಿ ನಿನಗೇ ನಾ ತಂದೆ
ಏನನರ್ಪಿಸಿದರೆ ನಿನಗೇ ಪ್ರೀತಿಯೊ || ಪ ||

ಪೀಠವನರ್ಪಿಸಲೆ ಭೂಮಿಯೆ ಪೀಠ
ಗುಡಿಯನು ಕಟ್ಟಿಸಲೆ ಗಗನವೆ ದೇಗುಲ
ಜಲದಲಿ ತೊಳೆಯಲೆ ಸಾಗರ ನಿನ್ನದಯ್ಯ
ಹೂಗಳ ಮುಡಿಸಲೆ ವನವೆಲ್ಲ ನಿನ್ನದಯ್ಯ || ೧ ||

ದೀಪವ ಬೆಳಗಲೆ ರವಿತೇಜ ನಿನ್ನದಯ್ಯ
ಧೂಪವ ಹಾಕಲೆ ಮಲಯಜ ಬೀಸುವ
ಆರತಿ ಎತ್ತಲೆ ತಾರೆ ಬೆಳಗುತಿವೆ
ನೈವೇದ್ಯ ಅರ್ಪಿಸಲೆ ಅನ್ನ ನಿಮ್ಮಯ ದಾನ || ೨ ||

ವಿಶ್ವವ ತುಂಬಿದ ವಿಶ್ವೇಶ್ವರನೆ
ನನ್ನಲು ನೀನೇ ತುಂಬಿರುವಾಗ
ನನ್ನನೆ ನಿನ್ನಡಿಗೆ ಒಪ್ಪಿಸಿಕೊಳುವೆನು
ಸ್ವೀಕರಿಸಯ್ಯಾ ಪಾವನಗೊಳಿಸಿ || ೩ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ನಿಮ್ಮ ಮನೆಗಳಲ್ಲಿ
Next post ‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…