ಜಗದಂಬೆ

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ
ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ ||

ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ
ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ ||

ಗರ್ಭದಿಂದ ಹೊರಬಂದು ಕೂಸು ತೆರಿತಾದೆ ಬಾಯಿ ಅಮ್ಮಾ
ನೋವು ಬೇವುಗಳ ಸಾವು ಕೊನೆಗೆ ತಾ ಕರೀತಾದೆ ಅಮ್ಮಾ || ೩ ||

ಹಡೆದ ತಾಯಿ ಹಾಲುಣಿಸಿ ಬೆಳೆಸಿ ಮುದ್ದನ್ನೆ ಹೊದಿಸುವಾಕಿ
ಕರುಳು ಕುಡಿಯ ಎಳೆ ಸೋಕದಂತೆ ಬೆಳೆಸೀಯಿ ಅನ್ನ ಹಾಕಿ|| ೪ ||

ವಿಶ್ವವನ್ನೆ ನೀ ಆಡಿಸುತ್ತ ಜೋಗುಳದ ಗಾನದಲ್ಲಿ
ಪ್ರೀತಿ ತೊಟ್ಟಿಲಲಿ ತೂಗುತಿರುವೆ ಹಗಲಿರುಳು ಜೋಕೆಯಲ್ಲಿ|| ೫ ||

ತಾಯಿ ತಾಯಿ ಎಲ್ಲೆಲ್ಲು ತಾಯಿ ಮರಗಿಡದಿ ತಾಯಿ ದೇವಿ
ಜೀವ ಜೀವ ಉಸಿರಾಡುವೆಲ್ಲ ತಾಯಿಯದೆ ಒಲುಮೆ ದೇವಿ|| ೬ ||

ನೀರು ನೆಲವು ಆ ಬಾನುಗಳನು ಜೀವಿಗಳು ತುಂಬ ಹರಡಿ
ಪ್ರಾಣದೆಲ್ಲ ನಲಿದಾಟ ಲೀಲೆ ತಾಯಮ್ಮ ಹಡೆದ ಮೋಡಿ|| ೭ ||

ಪಂಚ ಪ್ರಾಣ ನೀ ಪಂಚಭೂತಗಳ ಐದು ಮುಖವ ತಾಳಿ
ಪ್ರಾಣಿ ಪ್ರಾಣಿಗಳ ಸೃಪ್ಪಿಗೊಳಿಸಿ ಅನಂತ ರೂಪಗಳಲಿ|| ೮ ||

ಗಾಳಿಯಾಗಿ ಎದೆಯುಸಿರು ಉಸಿರು ಓಡಾಡೊ ಸೂತ್ರ ನೀನೆ
ನೀರು ರಕ್ತ ಹರಿಹರಿದು ರಸದ ಜೇಂಗಡಲ ಒಡಲು ನೀನೆ|| ೯ ||

ಬೆಂಕಿಯಾಗಿ ಉರಿ ಉರಿದು ಚೈತನ್ಯದಗ್ನಿ ನೀನೆ
ಮಣ್ಣಿನಲ್ಲಿ ಧಾತುಗಳ ಸತ್ವ ಬೇರಿಳಿವ ತತ್ವ ನೀನೆ|| ೧೦ ||

ಗಗನದಲ್ಲಿ ಬಯಲಾದ ಶೂನ್ಯ ತೆರೆ ಬಾಗಿಲಾಚೆ ನೀನು
ಸೊಗದ ರಾಣಿ ಸೃಪ್ಪಿಯಲಿ ಚೆಲುವು ದಿನದಿನವು ಹೊಸತು ನೀನು|| ೧೧ ||

ಅನ್ನ ಧಾನ್ಯಗಳ ಹೂವು ಹಣ್ಣುಗಳ ಮಡಿಲ ಸಸ್ಯರಾಶಿ
ಗಿರಿಯ ಸಾನುಗಳ ವನದ ಸೀಮೆಗಳ ಹಸಿರವುಡಿಗೆಯರಸಿ|| ೧೨ ||

ಸ್ವರಗಳಲ್ಲಿ ಸಾವಿರದ ಭೇದ ಓಂಕಾರ ನಾದ ಮೂಲ
ವರ್ಣಗಳಲಿ ಅಗಣಿತ ಭೇದ ನಿರ್ವರ್ಣ ವರ್ಣ ಮೂಲ || ೧೩ ||

ಹುಟ್ಟಿ ಸತ್ತು ಹುಟ್ಟಿರುವ ಕ್ಷರಗಳಲಿ ಅಕ್ಷರಾಂಬೆ ನೀನು
ಏಳು ಬೀಳು ಅಲೆ ಲೀಲೆ ಕೆಳಗೆ ಅವಿನಾಶಿ ಕಡಲು ನೀನು || ೧೪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಮಾಂಬಾರಾ
Next post ಹಿಂದೂಮುಸಲ್ಮಾನರ ಐಕ್ಯ – ೨

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…