Home / ಕವನ / ಕವಿತೆ / ಜಗದಂಬೆ

ಜಗದಂಬೆ

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ
ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ ||

ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ
ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ ||

ಗರ್ಭದಿಂದ ಹೊರಬಂದು ಕೂಸು ತೆರಿತಾದೆ ಬಾಯಿ ಅಮ್ಮಾ
ನೋವು ಬೇವುಗಳ ಸಾವು ಕೊನೆಗೆ ತಾ ಕರೀತಾದೆ ಅಮ್ಮಾ || ೩ ||

ಹಡೆದ ತಾಯಿ ಹಾಲುಣಿಸಿ ಬೆಳೆಸಿ ಮುದ್ದನ್ನೆ ಹೊದಿಸುವಾಕಿ
ಕರುಳು ಕುಡಿಯ ಎಳೆ ಸೋಕದಂತೆ ಬೆಳೆಸೀಯಿ ಅನ್ನ ಹಾಕಿ|| ೪ ||

ವಿಶ್ವವನ್ನೆ ನೀ ಆಡಿಸುತ್ತ ಜೋಗುಳದ ಗಾನದಲ್ಲಿ
ಪ್ರೀತಿ ತೊಟ್ಟಿಲಲಿ ತೂಗುತಿರುವೆ ಹಗಲಿರುಳು ಜೋಕೆಯಲ್ಲಿ|| ೫ ||

ತಾಯಿ ತಾಯಿ ಎಲ್ಲೆಲ್ಲು ತಾಯಿ ಮರಗಿಡದಿ ತಾಯಿ ದೇವಿ
ಜೀವ ಜೀವ ಉಸಿರಾಡುವೆಲ್ಲ ತಾಯಿಯದೆ ಒಲುಮೆ ದೇವಿ|| ೬ ||

ನೀರು ನೆಲವು ಆ ಬಾನುಗಳನು ಜೀವಿಗಳು ತುಂಬ ಹರಡಿ
ಪ್ರಾಣದೆಲ್ಲ ನಲಿದಾಟ ಲೀಲೆ ತಾಯಮ್ಮ ಹಡೆದ ಮೋಡಿ|| ೭ ||

ಪಂಚ ಪ್ರಾಣ ನೀ ಪಂಚಭೂತಗಳ ಐದು ಮುಖವ ತಾಳಿ
ಪ್ರಾಣಿ ಪ್ರಾಣಿಗಳ ಸೃಪ್ಪಿಗೊಳಿಸಿ ಅನಂತ ರೂಪಗಳಲಿ|| ೮ ||

ಗಾಳಿಯಾಗಿ ಎದೆಯುಸಿರು ಉಸಿರು ಓಡಾಡೊ ಸೂತ್ರ ನೀನೆ
ನೀರು ರಕ್ತ ಹರಿಹರಿದು ರಸದ ಜೇಂಗಡಲ ಒಡಲು ನೀನೆ|| ೯ ||

ಬೆಂಕಿಯಾಗಿ ಉರಿ ಉರಿದು ಚೈತನ್ಯದಗ್ನಿ ನೀನೆ
ಮಣ್ಣಿನಲ್ಲಿ ಧಾತುಗಳ ಸತ್ವ ಬೇರಿಳಿವ ತತ್ವ ನೀನೆ|| ೧೦ ||

ಗಗನದಲ್ಲಿ ಬಯಲಾದ ಶೂನ್ಯ ತೆರೆ ಬಾಗಿಲಾಚೆ ನೀನು
ಸೊಗದ ರಾಣಿ ಸೃಪ್ಪಿಯಲಿ ಚೆಲುವು ದಿನದಿನವು ಹೊಸತು ನೀನು|| ೧೧ ||

ಅನ್ನ ಧಾನ್ಯಗಳ ಹೂವು ಹಣ್ಣುಗಳ ಮಡಿಲ ಸಸ್ಯರಾಶಿ
ಗಿರಿಯ ಸಾನುಗಳ ವನದ ಸೀಮೆಗಳ ಹಸಿರವುಡಿಗೆಯರಸಿ|| ೧೨ ||

ಸ್ವರಗಳಲ್ಲಿ ಸಾವಿರದ ಭೇದ ಓಂಕಾರ ನಾದ ಮೂಲ
ವರ್ಣಗಳಲಿ ಅಗಣಿತ ಭೇದ ನಿರ್ವರ್ಣ ವರ್ಣ ಮೂಲ || ೧೩ ||

ಹುಟ್ಟಿ ಸತ್ತು ಹುಟ್ಟಿರುವ ಕ್ಷರಗಳಲಿ ಅಕ್ಷರಾಂಬೆ ನೀನು
ಏಳು ಬೀಳು ಅಲೆ ಲೀಲೆ ಕೆಳಗೆ ಅವಿನಾಶಿ ಕಡಲು ನೀನು || ೧೪ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...