Home / ಕವನ / ಕವಿತೆ / ಜಗದಂಬೆ

ಜಗದಂಬೆ

ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ
ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ ||

ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ
ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ ||

ಗರ್ಭದಿಂದ ಹೊರಬಂದು ಕೂಸು ತೆರಿತಾದೆ ಬಾಯಿ ಅಮ್ಮಾ
ನೋವು ಬೇವುಗಳ ಸಾವು ಕೊನೆಗೆ ತಾ ಕರೀತಾದೆ ಅಮ್ಮಾ || ೩ ||

ಹಡೆದ ತಾಯಿ ಹಾಲುಣಿಸಿ ಬೆಳೆಸಿ ಮುದ್ದನ್ನೆ ಹೊದಿಸುವಾಕಿ
ಕರುಳು ಕುಡಿಯ ಎಳೆ ಸೋಕದಂತೆ ಬೆಳೆಸೀಯಿ ಅನ್ನ ಹಾಕಿ|| ೪ ||

ವಿಶ್ವವನ್ನೆ ನೀ ಆಡಿಸುತ್ತ ಜೋಗುಳದ ಗಾನದಲ್ಲಿ
ಪ್ರೀತಿ ತೊಟ್ಟಿಲಲಿ ತೂಗುತಿರುವೆ ಹಗಲಿರುಳು ಜೋಕೆಯಲ್ಲಿ|| ೫ ||

ತಾಯಿ ತಾಯಿ ಎಲ್ಲೆಲ್ಲು ತಾಯಿ ಮರಗಿಡದಿ ತಾಯಿ ದೇವಿ
ಜೀವ ಜೀವ ಉಸಿರಾಡುವೆಲ್ಲ ತಾಯಿಯದೆ ಒಲುಮೆ ದೇವಿ|| ೬ ||

ನೀರು ನೆಲವು ಆ ಬಾನುಗಳನು ಜೀವಿಗಳು ತುಂಬ ಹರಡಿ
ಪ್ರಾಣದೆಲ್ಲ ನಲಿದಾಟ ಲೀಲೆ ತಾಯಮ್ಮ ಹಡೆದ ಮೋಡಿ|| ೭ ||

ಪಂಚ ಪ್ರಾಣ ನೀ ಪಂಚಭೂತಗಳ ಐದು ಮುಖವ ತಾಳಿ
ಪ್ರಾಣಿ ಪ್ರಾಣಿಗಳ ಸೃಪ್ಪಿಗೊಳಿಸಿ ಅನಂತ ರೂಪಗಳಲಿ|| ೮ ||

ಗಾಳಿಯಾಗಿ ಎದೆಯುಸಿರು ಉಸಿರು ಓಡಾಡೊ ಸೂತ್ರ ನೀನೆ
ನೀರು ರಕ್ತ ಹರಿಹರಿದು ರಸದ ಜೇಂಗಡಲ ಒಡಲು ನೀನೆ|| ೯ ||

ಬೆಂಕಿಯಾಗಿ ಉರಿ ಉರಿದು ಚೈತನ್ಯದಗ್ನಿ ನೀನೆ
ಮಣ್ಣಿನಲ್ಲಿ ಧಾತುಗಳ ಸತ್ವ ಬೇರಿಳಿವ ತತ್ವ ನೀನೆ|| ೧೦ ||

ಗಗನದಲ್ಲಿ ಬಯಲಾದ ಶೂನ್ಯ ತೆರೆ ಬಾಗಿಲಾಚೆ ನೀನು
ಸೊಗದ ರಾಣಿ ಸೃಪ್ಪಿಯಲಿ ಚೆಲುವು ದಿನದಿನವು ಹೊಸತು ನೀನು|| ೧೧ ||

ಅನ್ನ ಧಾನ್ಯಗಳ ಹೂವು ಹಣ್ಣುಗಳ ಮಡಿಲ ಸಸ್ಯರಾಶಿ
ಗಿರಿಯ ಸಾನುಗಳ ವನದ ಸೀಮೆಗಳ ಹಸಿರವುಡಿಗೆಯರಸಿ|| ೧೨ ||

ಸ್ವರಗಳಲ್ಲಿ ಸಾವಿರದ ಭೇದ ಓಂಕಾರ ನಾದ ಮೂಲ
ವರ್ಣಗಳಲಿ ಅಗಣಿತ ಭೇದ ನಿರ್ವರ್ಣ ವರ್ಣ ಮೂಲ || ೧೩ ||

ಹುಟ್ಟಿ ಸತ್ತು ಹುಟ್ಟಿರುವ ಕ್ಷರಗಳಲಿ ಅಕ್ಷರಾಂಬೆ ನೀನು
ಏಳು ಬೀಳು ಅಲೆ ಲೀಲೆ ಕೆಳಗೆ ಅವಿನಾಶಿ ಕಡಲು ನೀನು || ೧೪ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...