ಕಮಲ ಹುಟ್ಟಬೇಕು

ಬಾಳಲಿ ಕೆಸರೇ ತುಂಬಿಹುದೂ
ಕಮಲ ಹುಟ್ಟಬೇಕು
ಅಂಧಕಾರದಲಿ ಅಜ್ಞತೆ ತುಂಬಿದೆ
ಜ್ಞಾನ ತಾರೆ ಬೇಕು || ೧ ||

ಜೀವರಾಶಿಗಳ ದೂರ ಪಯಣದಲಿ
ಮನುಜ ಕೊನೆಗೆ ಬಂದ
ಕೋಟಿ ಜನುಮಗಳ ಸಮುದ್ರ ಮಥನದಿ
ಅಮ್ಮತವನ್ನೆ ತಂದ || ೨ ||

ವಿಷಯಸಾಗರದಿ ವಿಷದ ಭೋಗದಲಿ
ಜೀವ ಕೊಡುವ ಫಲವು
ಹುಟ್ಟು ಸಾವುಗಳ ಬಾಳ ಜೂಜಿನಲಿ
ಉಳಿಯುವಂಥ ಛಲವು || ೩ ||

ಪ್ರಾಣಿ ನೂರರೊಲು ಹುಟ್ಟುಗುಣಗಳ
ಸೃಷ್ಟಿವೃತ್ತ ಒಳಗೆ
ಕಟ್ಟು ಹಾಕಿ ಮಾನವತೆ ನವ್ಯತೆಯ
ವಸ್ತ್ರ ಮೇಲೆ ಹೊರಗೆ || ೪ ||

ಕಮಲ ಕೆಸರಿನಲೆ ಹುಟ್ಟಿ ಬಂದರೂ
ಕೆಸರೆ ಅಲ್ಲವಲ್ಲ
ದೇಹದಿಂದಲೆ ಆತ್ಮ ಬೆಳಗುವುದು
ದೇಹವಲ್ಲ ಎಲ್ಲಾ || ೫ ||

ಇಂಥ ಪದ್ಮವನು. ನೋಂತು ಯುಗಗಳಲಿ
ಭೂಮಿ ತಾಯಿ ತಾನು
ಎನಿತೊ ನೋವುಗಳ ಕಷ್ಟರಾಶಿಗಳ
ಉಂಡು ಪಡೆದಳದನು || ೬ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುದಾಕಿ
Next post ಹಿಂದೂಮುಸಲ್ಮಾನರ ಐಕ್ಯ – ೧

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys