ಕಮಲ ಹುಟ್ಟಬೇಕು

ಬಾಳಲಿ ಕೆಸರೇ ತುಂಬಿಹುದೂ
ಕಮಲ ಹುಟ್ಟಬೇಕು
ಅಂಧಕಾರದಲಿ ಅಜ್ಞತೆ ತುಂಬಿದೆ
ಜ್ಞಾನ ತಾರೆ ಬೇಕು || ೧ ||

ಜೀವರಾಶಿಗಳ ದೂರ ಪಯಣದಲಿ
ಮನುಜ ಕೊನೆಗೆ ಬಂದ
ಕೋಟಿ ಜನುಮಗಳ ಸಮುದ್ರ ಮಥನದಿ
ಅಮ್ಮತವನ್ನೆ ತಂದ || ೨ ||

ವಿಷಯಸಾಗರದಿ ವಿಷದ ಭೋಗದಲಿ
ಜೀವ ಕೊಡುವ ಫಲವು
ಹುಟ್ಟು ಸಾವುಗಳ ಬಾಳ ಜೂಜಿನಲಿ
ಉಳಿಯುವಂಥ ಛಲವು || ೩ ||

ಪ್ರಾಣಿ ನೂರರೊಲು ಹುಟ್ಟುಗುಣಗಳ
ಸೃಷ್ಟಿವೃತ್ತ ಒಳಗೆ
ಕಟ್ಟು ಹಾಕಿ ಮಾನವತೆ ನವ್ಯತೆಯ
ವಸ್ತ್ರ ಮೇಲೆ ಹೊರಗೆ || ೪ ||

ಕಮಲ ಕೆಸರಿನಲೆ ಹುಟ್ಟಿ ಬಂದರೂ
ಕೆಸರೆ ಅಲ್ಲವಲ್ಲ
ದೇಹದಿಂದಲೆ ಆತ್ಮ ಬೆಳಗುವುದು
ದೇಹವಲ್ಲ ಎಲ್ಲಾ || ೫ ||

ಇಂಥ ಪದ್ಮವನು. ನೋಂತು ಯುಗಗಳಲಿ
ಭೂಮಿ ತಾಯಿ ತಾನು
ಎನಿತೊ ನೋವುಗಳ ಕಷ್ಟರಾಶಿಗಳ
ಉಂಡು ಪಡೆದಳದನು || ೬ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುದಾಕಿ
Next post ಹಿಂದೂಮುಸಲ್ಮಾನರ ಐಕ್ಯ – ೧

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…