ಸತ್ಯುಳ್ಳ ಸರದಾರ

ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ
ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ||

ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ
ಪತ್ಲಾಗ ಪದುಮಿಟ್ಟು ಓಡ್ತೀಯಾ
ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ
ಕೇರ್‍ಮಾಡಿ ಕೆರುಮಾಡಿ ಹಾರ್‍ತೀಯಾ ||೧||

ಪುಗಸೆಟ್ಟಿ ಸಿಕ್ಕಾಕಿ ಪುರಮಾಶಿ ಬಂದಾಕಿ
ಪಡಪೋಶಿ ಹುಚರಂಡಿ ಅಂತೀಯಾ
ಹುಚಬೋಳಿ ನಾನಲ್ಲ ಬಿಚಮಗ್ಗಿ ನಾನಲ್ಲ
ಎದಿಗುಂಡು ಒಳಗುಂಡು ನೋಡ್ತೀಯಾ ||೨||

ಖಾರ್‍ಬ್ಯಾಳಿ ಖಾರಲ್ಲಾ ಹುಳಪಲ್ಲೆ ಹುಳಿಯಲ್ಲ
ಹಪ್ಳಲ್ಲ ಚಟ್ನೆಲ್ಲಾ ಚೀಪ್ತೀಯಾ
ಕಾಡಾಕ ಕಪಡೆಲ್ಲ ಬಡಿಯಾಕ ದಪಡೆಲ್ಲ
ಕಟ್ಟಂತ ಕುಂಡೀಯ ಚೂಟ್ತೀಯಾ ||೩||

ಚೋಳಲ್ಲ ಹಾವಲ್ಲ ಮುಂಚೀಯ ಹಲ್ಲೆಲ್ಲ
ಚದುರಂಗ ಚಿಕ್ಕೀಯ ಚಲುನೋಡ
ಮುದಿಕೆಲ್ಲ ತದಿಕೆಲ್ಲ ತಟ್ಟೆಲ್ಲ ಬುಟ್ಟೆಲ್ಲ
ಆತೂಮ ರಾಣೀಯ ರುಚಿನೋಡ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂದರ್ಶನ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೫

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೊಡ್ಡ ಬೋರೇಗೌಡರು

    ಪ್ರಕರಣ ೭ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…