ಸತ್ಯುಳ್ಳ ಸರದಾರ

ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ
ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ||

ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ
ಪತ್ಲಾಗ ಪದುಮಿಟ್ಟು ಓಡ್ತೀಯಾ
ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ
ಕೇರ್‍ಮಾಡಿ ಕೆರುಮಾಡಿ ಹಾರ್‍ತೀಯಾ ||೧||

ಪುಗಸೆಟ್ಟಿ ಸಿಕ್ಕಾಕಿ ಪುರಮಾಶಿ ಬಂದಾಕಿ
ಪಡಪೋಶಿ ಹುಚರಂಡಿ ಅಂತೀಯಾ
ಹುಚಬೋಳಿ ನಾನಲ್ಲ ಬಿಚಮಗ್ಗಿ ನಾನಲ್ಲ
ಎದಿಗುಂಡು ಒಳಗುಂಡು ನೋಡ್ತೀಯಾ ||೨||

ಖಾರ್‍ಬ್ಯಾಳಿ ಖಾರಲ್ಲಾ ಹುಳಪಲ್ಲೆ ಹುಳಿಯಲ್ಲ
ಹಪ್ಳಲ್ಲ ಚಟ್ನೆಲ್ಲಾ ಚೀಪ್ತೀಯಾ
ಕಾಡಾಕ ಕಪಡೆಲ್ಲ ಬಡಿಯಾಕ ದಪಡೆಲ್ಲ
ಕಟ್ಟಂತ ಕುಂಡೀಯ ಚೂಟ್ತೀಯಾ ||೩||

ಚೋಳಲ್ಲ ಹಾವಲ್ಲ ಮುಂಚೀಯ ಹಲ್ಲೆಲ್ಲ
ಚದುರಂಗ ಚಿಕ್ಕೀಯ ಚಲುನೋಡ
ಮುದಿಕೆಲ್ಲ ತದಿಕೆಲ್ಲ ತಟ್ಟೆಲ್ಲ ಬುಟ್ಟೆಲ್ಲ
ಆತೂಮ ರಾಣೀಯ ರುಚಿನೋಡ ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂದರ್ಶನ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೫

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys