ಕಂಡೇನೆ ಹೊಸತು ಕಂಡೇನೆ

ಕಂಡೇನ ಹೊಸತು ಕಂಡೇನೆ ನಾ
ಆಂಜೇನೆ ಬೆವತು ಓಡೇನೆ ||ಪಲ್ಲ||

ಟ್ಯೂಬ್ಲೈಟು ಒಡದೈತೆ ಪುಡಿಪುಡಿ ಆಗೈತೆ
ದೀಪಾವು ಆರಿಲ್ಲ ಬೆಳಗೇತೆ
ಬಲ್ಬೊಂದು ಬಿದೈತೆ ಫಡ್ಡೆಂದು ಹಾರೈತೆ
ಬಲ್ಬೀನ ದೀಪಾವು ಉಳದೇತೆ ||೧||

ಚಿಮಣೀಯ ಹಚ್ಚೇನೆ ಬಿರುಗಾಳಿ ಬೀಸೇತೆ
ಚಿಮಣೀಯು ಆರಿಲ್ಲ ಬೆಳಗೇತೆ
ಮೊಂಬತ್ತಿ ಹಚ್ಚೇನೆ ಫ್ಯಾನೀಗಿ ಹಿಡಿದೇನೆ
ಮೊಂಬತ್ತಿ ದೀಪಾವು ಉಳದೇತೆ ||೨||

ವಲಿಯಾಗ ಹಿಡಿಕೆಂಡ ಕೊಡನೀರು ಸುರುವೇನೆ
ನಿಗಿನಿಗಿ ನಿಗಿಕೆಂಡ ಉರದೇತೆ
ಹೊಸಹಣ್ಣು ಕಂಡೇನೆ ಗಸಗಸ ಹೆಚ್ಚೇನೆ
ಹೊಸಹಣ್ಣು ಇದ್ದಾಂಗ ಉಳದೀತೆ ||೩||

ಕೆಂಡಾವು ಯಾರವ್ವ ಕೊಡಪಾನ ಯಾರವ್ವ
ಒಡಪಾವ ಬಿಡಿಸವ್ವ ಜಾಣಮಲ್ಲಿ
ದೀಪಾವು ಯಾರವ್ವ ಬಿರುಗಾಳಿ ಯಾರವ್ವ
ಒಡಪಾವ ಒಡೆಯವ್ವ ಜಾಣಕಲ್ಲಿ ||೪||
*****
ಟ್ಯೂಬ್‍ಲೈಟು, ಬಲ್ಬು, ಚಿಮಣಿ, ಮೋಂಬತ್ತಿ, ವಲಿಗಳು ದೇಹದ ಸಂಕೇತ; ಅವುಗಳ ಜ್ಯೋತಿ ಆತ್ಮಜ್ಯೋತಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೮೦

ಸಣ್ಣ ಕತೆ

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ, ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…