Home / ಕವನ / ಕವಿತೆ / ಸೋಽಽಽ

ಸೋಽಽಽ

[ಸೋಬಾನ ಪದ]

ಸೋ ಅನ್ನೆ ಸೋವಣ್ಣೆ ಸೋಮಶೇಖರ ಕಣ್ಣೆ
ಸೋಮರಾಯನ ಹೆಣ್ಣೆ ಸೋಬಾನ ಸೋ ||ಸೋಽಽ ||ಪಲ್ಲ||

ಗಂಡುಳ್ಳ ಗರತೇರು ಗಿಣಿಗಡಕ ಜೋಗ್ತೇರು
ನುಸಿಗಡಕ ನಾಗ್ತೇರು ಕೂಡ್ಯಾರ ಸೋ
ಪಿರಿಪಿಸ್ಸ್ ಮಾತ್ನ್ಯಾಗ ಮಾತೀನ ತೂತ್ನ್ಯಾಗ
ಪುಸ್ಸಂತ ಪೋಣ್ಸ್ಯಾರ ಪಿಸಿನೂಲ ಸೋ ||ಸೋಽಽ ||೧||

ಪುಗ್ಗೇದ ವಾಸ್ನೆಂಗ ಪುರಪುಸ್ಸ ಹೂಸ್ನಂಗ
ಗುಸಣಾರ ಮಸಣಾರ ಮಸದಾರ ಸೋ
ಕಚ್ಹೆರಕ ಬಾಯಾಗ ನೆಗ್ಗೇಡಿ ಕಿವಿಯಾಗ
ಚಿಪ್ಪಾಡಿ ಒತ್ತೊತ್ತಿ ತುಂಬ್ಯಾರ ಸೋ ||ಸೋಽಽ ||೨||

ಬುಸರ್ಬುಳ್ಳ ಬುಸಣೇರು ದುಗ್ಗಾಣಿ ರಾಣೇರು
ವಗ್ಗರಣಿ ಎದಿಗುಂಡ ಕಾಸ್ಯಾರ ಸೋ
ಸೀಕರ್‍ಣಿ ಸೋಗ್ನ್ಯಾಗ ಮೂಗಿನ ಕೊಕ್ಣ್ಯಾಗ
ಕೆಳಕಂಡಿ ಬೆಳಕಂಡಿ ಇಣಿಕ್ಯಾರ ಸೋ ||ಸೋಽಽ ||೩||

ಹುಚನಾಯಿ ಗಂಡಗ ಹುಚರೊಟ್ಟಿ ತಿನಿಸ್ಯಾರ
ಬಿಚಮಗ್ಗಿ ಜಡಿಮಗ್ಗಿ ಕಟ್ಯಾರ ಸೋ
ಹಗಲಾಗ ಹಳೆಗಂಡ ಇರುಳಾಗ ಹೊಸಗಂಡ
ಆ ಗಂಡ ಈ ಗಂಡ ಜೋಗಂಡ ಸೋ ||ಸೋಽಽ ||೪||

ಕಂಬ್ಳ್ಯಾಗ ಕರೆಹೆಗ್ಣ ಸೀರ್‍ಯಾಗ ನರಿಲಗ್ನ
ಗೊಂಗ್ಡ್ಯಾಗ ಹೆಂಡಾವ ಕುಡದಾರ ಸೋ
ಪಂಚಗೆಣತ್ಯಾರ್ಕೂಡಿ ಮಠದಯ್ಗ ಬಸರಾಗಿ
ಗಂಡರನ ಕೌದ್ಯಾಗ ಕೊಂದಾರ ಸೋ ||ಸೋಽಽ ||೫||
*****
ಗರತೇರು=ಆತ್ಮರು: ಪಂಚಗೆಣತಿಯರು = ಪಂಚೇಂದ್ರಿಯ; ಗಂಡ= ಭೌತಿಕ ಭೋಗ; ಹೊಸಗಂಡ-ಭಗವಂತ; ಮಠದಯ್ಯ=ಭಗವಂತ; ಹೆಂಡ=ಭಗವಂತನ ನೆನಪು; ಗಂಡರು=ಕಾಮ, ಕ್ರೋಧ, ಲೋಭ ಮುಂ. ಕೌದಿ=ದೇಹದ ಕತ್ತಲೆ (Physical lgnorance)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...