Home / ಬಾಲ ಚಿಲುಮೆ / ಕವಿತೆ / ಇಡ್ಲೀಯ ಗುಂಡಣ್ಣ

ಇಡ್ಲೀಯ ಗುಂಡಣ್ಣ

(ಮಕ್ಕಳ ಗೀತೆ)

ತಾಯಿ- ಇಡ್ಲೀಯ ಗುಂಡಣ್ಣಾ ಚಟ್ನೀಯ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮಗ- ಇಡ್ಲೀಯ ನಾನೊಲ್ಲೆ ಚಟ್ನೀಯ ಒಲ್ಲೊಲೆ
ಮಾಸ್ತರು ಬೈಬೈ ಬೈಯ್ತಾನಾ
ಆ ಸಾಲಿ ಯಾ ಸಾಲಿ ಹಳಸೀದ ಮಸಾಲಿ
ಮಾಸ್ತರು ಬಡಿಬಡಿ ಬಡಿತಾನಾ ||೧||

ತಾಯಿ- ದೋಸಿಯ ಗುಂಡಣ್ಣಾ ಚಕ್ಲೀಯ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮಗ- ದೋಸೀಯ ನಾನೊಲ್ಲೆ ಚಕ್ಲೀಯ ಒಲ್ಲೊಲ್ಲೆ
ಹುಡಗೋರು ಕಾಡ್ಕಾಡ ಕಾಡ್ತಾರಾ
ಕೂದಲ ಜಗತಾರ ಕುಂಡೀಯ ಚೂಟ್ತಾರ
ಹಿಡಿಮಣ್ಣು ಅಂಗ್ಯಾಗ ಹಾಕ್ತಾರಾ ||೨||

ತಾಯಿ- ಜೀಲೇಬಿ ಗುಂಡಣ್ಣಾ ಕಾರ್ದಾಣಿ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮುಗ- ಜಿಲೇಬಿ ನಾನೊಲ್ಲೆ ಕಾರ್ದಾಣಿ ಒಲ್ಲೋಲ್ಲೆ
ನನ್‌ಹೊಟ್ಟಿ ನೋಯ್‌ನೋಯ್ ನೋಯ್ತೈತೆ
ಎದಿಯಾಗ ಕಪ‌ಐತೆ ತಲಿಯಾಗ ಜ್ವರ‌ಐತೆ
ಕಾಲಾಗ ಮುಳ್‌ಮುಳ್ ನಟ್ಟೈತೆ ||೩||

ತಾಯಿ- ಉಂಡೀಯ ಗುಂಡಣ್ಣ ಪೇಡೇಯ ಚಲುವಣ್ಣ
ಬೇಡಣ್ಣ ಹೋಗ್ಬೇಡ ಸಾಲೀಗೆ ||ಪಲ್ಲ||

ತಾಯಿ- ಡಾಕ್ಟರ ಬರತಾನ ಚೂಜೀಯ ತರತಾನ
ಕುಂಡೀಗೆ ಕಾಲಿಗೆ ಚುಚತಾನ
ರಟ್ಟೀಗೆ ಹೊಟ್ಟೀಗೆ ಚಿಪ್ಪೀಗೆ ಚುರ್ರಂತ
ಕಾಸ್ಕಾಸಿ ಕಚ್ಚಂತ ಚುಚತಾನ ||೪||

ತಾಯಿ- ಬೋಂಡಾದ ಗುಂಡಣ್ಣ ಚೂಡಾದ ಚಲುವಣ್ಣ
ಹೋಗ್ಬ್ಯಾಡ ಹೋಗ್ಬ್ಯಾಡ ಸಾಲೀಗೆ ||ಪಲ್ಲ||

ಮಗ- ಅಯ್ಯಯ್ಯ ನಾನೊಲ್ಲೆ ಚೂಜೀಯ ಮರೆವೊಲ್ಲೆ
ಸಟ್ಟಂತ ಸಾಲೀಗೆ ಓಡ್ತೇನೆ
ಪುಸ್ತಕಾ ಹಿಡಿತೇನೆ ಪುರ್ರಂತ ಹಾರ್‍ತೇನೆ
ಮಾಸ್ತರ್‍ನ ಚಡಿಯೇಟು ತಿಂತೇನೆ ||೫||

ತಾಯಿ- ಇಡ್ಲಿಯ ಗುಂಡಣ್ಣ ಚೆಟ್ನಿಯ ಚಲುವಣ್ಣ
ಬಾಯ್‌ಬಾಯಿ ಗುಡ್‌ಬಾಯಿ ಸಾಲೀಗೆ ||ಪಲ್ಲ||

ಮಗ- ಬಾಯ್‌ಬಾಯಿ ಗುಡ್‌ಬಾಯಿ ಮಮ್ಮೀಗೆ||

ತಾಯಿ- ಬಾಯ್‌ಬಾಯಿ ಗುಡ್‌ಬಾಯಿ ಸಾಲೀಗೆ ||

ಮಗ- ಬಾಯ್‌ಬಾಯಿ ಗುಡ್‌ಬಾಯಿ ಮಮ್ಮಿಗೆ ||
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...