Home / ಬಾಲ ಚಿಲುಮೆ / ಕವಿತೆ / ಇಡ್ಲೀಯ ಗುಂಡಣ್ಣ

ಇಡ್ಲೀಯ ಗುಂಡಣ್ಣ

(ಮಕ್ಕಳ ಗೀತೆ)

ತಾಯಿ- ಇಡ್ಲೀಯ ಗುಂಡಣ್ಣಾ ಚಟ್ನೀಯ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮಗ- ಇಡ್ಲೀಯ ನಾನೊಲ್ಲೆ ಚಟ್ನೀಯ ಒಲ್ಲೊಲೆ
ಮಾಸ್ತರು ಬೈಬೈ ಬೈಯ್ತಾನಾ
ಆ ಸಾಲಿ ಯಾ ಸಾಲಿ ಹಳಸೀದ ಮಸಾಲಿ
ಮಾಸ್ತರು ಬಡಿಬಡಿ ಬಡಿತಾನಾ ||೧||

ತಾಯಿ- ದೋಸಿಯ ಗುಂಡಣ್ಣಾ ಚಕ್ಲೀಯ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮಗ- ದೋಸೀಯ ನಾನೊಲ್ಲೆ ಚಕ್ಲೀಯ ಒಲ್ಲೊಲ್ಲೆ
ಹುಡಗೋರು ಕಾಡ್ಕಾಡ ಕಾಡ್ತಾರಾ
ಕೂದಲ ಜಗತಾರ ಕುಂಡೀಯ ಚೂಟ್ತಾರ
ಹಿಡಿಮಣ್ಣು ಅಂಗ್ಯಾಗ ಹಾಕ್ತಾರಾ ||೨||

ತಾಯಿ- ಜೀಲೇಬಿ ಗುಂಡಣ್ಣಾ ಕಾರ್ದಾಣಿ ಚಲುವಣ್ಣಾ
ಹೋಗಣ್ಣಾ ಸುಬ್ಬಣ್ಣಾ ಸಾಲೀಗೆ ||ಪಲ್ಲ||

ಮುಗ- ಜಿಲೇಬಿ ನಾನೊಲ್ಲೆ ಕಾರ್ದಾಣಿ ಒಲ್ಲೋಲ್ಲೆ
ನನ್‌ಹೊಟ್ಟಿ ನೋಯ್‌ನೋಯ್ ನೋಯ್ತೈತೆ
ಎದಿಯಾಗ ಕಪ‌ಐತೆ ತಲಿಯಾಗ ಜ್ವರ‌ಐತೆ
ಕಾಲಾಗ ಮುಳ್‌ಮುಳ್ ನಟ್ಟೈತೆ ||೩||

ತಾಯಿ- ಉಂಡೀಯ ಗುಂಡಣ್ಣ ಪೇಡೇಯ ಚಲುವಣ್ಣ
ಬೇಡಣ್ಣ ಹೋಗ್ಬೇಡ ಸಾಲೀಗೆ ||ಪಲ್ಲ||

ತಾಯಿ- ಡಾಕ್ಟರ ಬರತಾನ ಚೂಜೀಯ ತರತಾನ
ಕುಂಡೀಗೆ ಕಾಲಿಗೆ ಚುಚತಾನ
ರಟ್ಟೀಗೆ ಹೊಟ್ಟೀಗೆ ಚಿಪ್ಪೀಗೆ ಚುರ್ರಂತ
ಕಾಸ್ಕಾಸಿ ಕಚ್ಚಂತ ಚುಚತಾನ ||೪||

ತಾಯಿ- ಬೋಂಡಾದ ಗುಂಡಣ್ಣ ಚೂಡಾದ ಚಲುವಣ್ಣ
ಹೋಗ್ಬ್ಯಾಡ ಹೋಗ್ಬ್ಯಾಡ ಸಾಲೀಗೆ ||ಪಲ್ಲ||

ಮಗ- ಅಯ್ಯಯ್ಯ ನಾನೊಲ್ಲೆ ಚೂಜೀಯ ಮರೆವೊಲ್ಲೆ
ಸಟ್ಟಂತ ಸಾಲೀಗೆ ಓಡ್ತೇನೆ
ಪುಸ್ತಕಾ ಹಿಡಿತೇನೆ ಪುರ್ರಂತ ಹಾರ್‍ತೇನೆ
ಮಾಸ್ತರ್‍ನ ಚಡಿಯೇಟು ತಿಂತೇನೆ ||೫||

ತಾಯಿ- ಇಡ್ಲಿಯ ಗುಂಡಣ್ಣ ಚೆಟ್ನಿಯ ಚಲುವಣ್ಣ
ಬಾಯ್‌ಬಾಯಿ ಗುಡ್‌ಬಾಯಿ ಸಾಲೀಗೆ ||ಪಲ್ಲ||

ಮಗ- ಬಾಯ್‌ಬಾಯಿ ಗುಡ್‌ಬಾಯಿ ಮಮ್ಮೀಗೆ||

ತಾಯಿ- ಬಾಯ್‌ಬಾಯಿ ಗುಡ್‌ಬಾಯಿ ಸಾಲೀಗೆ ||

ಮಗ- ಬಾಯ್‌ಬಾಯಿ ಗುಡ್‌ಬಾಯಿ ಮಮ್ಮಿಗೆ ||
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...