ಬೆಟ್ಟಗಳ ನಡುವಲಿ

ಮಲೆನಾಡಿನ ಸಿರಿಸೊಬಗಲಿ…
ಬೆಟ್ಟಗಳ ಏಕಾಂತದ ನಡುವಲಿ
ಸುತ್ತಲಿನ ಗ್ರಾಮಗಳಿಗೆ…
ಬಹು ದೂರವಾಗಿತ್ತು ಆ ಊರು

ಸರಕಾರ ಮನ್ನಣೆಯಲಿ
ಶಾಲೆಯೊಂದು ನಡೆದಿತ್ತು
ತಾಯಿ, ಗಡಿಗಳೆಂಬ ದ್ವಿಭಾಷಾ
ಶಿಕ್ಷಕರನು ಹೊಂದಿತ್ತು
ಮಾತುಗಾರನ ಹೊಗೆ ಉಗಳುವರ
ಮೊಗಶಾಲೆಯಾಗಿ ಕಲಿಸುವ ಶಾಲೆಯಿತ್ತು

ಶಾಲೆ ಮಕ್ಕಳನು
ಕಳಿಸದ ಗ್ರಾಮದ ಜನರು
ದಿನವಿಡಿ ಸುರಾಧೀನರಾಗಿರುತ್ತಿದ್ದರು
ಶಾಲೆಗೆ ಕಳಿಸಿದರೆ ನಮಗೇನಾಗಿತೆನ್ನುತ
ದನ ಸೆಗಣಿ ಕಲೆ ಹಾಕಿಸುವ
ಗುರಿಯಲಿ ಮಾತ್ರ ಮುನ್ನಡೆಯುತ್ತಿದ್ದರು

ಪರಿಸರ ಸಂಘ ದೋಷದಿ
ಮರೆತರು ಶಿಕ್ಷಕರು ಶಿಕ್ಷಣದ
ಮೂಲ ಧ್ಯೇಯೋದ್ದೇಶ ಗುರಿಗಳನು
ಕರ್ತವ್ಯ ಕತ್ತು ಹಿಸುಕುತಲಿವರು
ಹೆಮ್ಮೆಯಲಿ ಎದೆಯುಬ್ಬಿಸಿ ಇರುತಿಹರು

ಮೇಲಧಿಕಾರಿಯ ಮುದ್ದು ಮುಖವು
ವರ್ಷಕ್ಕೊಮ್ಮೆ ನೋಡಲು ಸಿಗುವದು
ಮೂರು ಅಂಕಿಯ ಖಡಕ ನೋಟೊಂದು
ಕಾಣದಂತೆ ಜೀಬಿಗೆ ಹಾಕಿದರೆ ಸಾಕು
ಆಡುವೆವು ಹರ್ಷದಲಿ ವರ್ಷವಿಡಿ
ಎನ್ನುವ ಶಿಕ್ಷಣ ಚೋರರಿಗೆ
ಶಿಕ್ಷೆ… ನಿಸರ್ಗ… ನೀಡಿತೇ!….

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಷ್ಟ್ರಪಿತ
Next post ಮಣ್ಣು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

cheap jordans|wholesale air max|wholesale jordans|wholesale jewelry|wholesale jerseys