ರಾಷ್ಟ್ರಪಿತ

ನಿನ್ನ ಎದೆಗೆ ಗುಂಡು ಬಡಿದಾಗ
ಮಣ್ಣು ನಡುಗಿತು ಹಗಲಹೂ ಬಾಡಿತು
ಶಾಂತಿದೂತ ಪಾರಿವಾಳ ಗೂಡು ಸೇರಿತು.

ತಿಳಿವು ತುಂಬಿದ ಕಣ್ಣು ಒಲವು ತುಂಬಿದ ಹೃದಯ
ಛಲವನರಿಯದ ಬದುಕು ಸಾಕು ಇಷ್ಟೇ
ನೆಲವು ನಂದನವಾಗಲಿಕ್ಕೆ
ಮನುಕುಲದ ಇತಿಹಾಸ ರಕ್ತರಂಜಿತ.

ಸರಳತೆ ಸಾಕಾರವಾಯಿತು
ಮಮತೆ ಮೈದೋರಿತು
ಕಾಳಸರ್ಪದ ಹಗೆ ಪಳಗಿಸುವ ಸಲುಗೆ
ಹಾಲಾಹಲ ಕೋಲಾಹಲದ ನಡುವೆ
ಮಂದಹಾಸವು ಬೀರುತ ನಡೆದೆ.

ಬತ್ತಿದ ಮನಗಳಲ್ಲಿ ಅರಿವು ಚಿಮ್ಮುತ್ತ
ಶಾಂತಿ ಸಂದಾನ ಸಮರಸಕೆ ನಾಂದಿ
ಸಂಕೋಲೆಯ ಬಿಡುಗಡೆ ಗಂಟೆ ಮೊಳಗುತ್ತಿತ್ತು.

ನರನ ಮೃಗತ್ವ ಬಾಯಿ ತೆರೆದಿತ್ತು
ನಿನ್ನ ಬಲಿಗೆ ಮಾತೃ ಮನಗಳು ಮರುಗಿದವು
ಕರಳು ಬಳ್ಳಿಗಳು ಕೊರಗಿದವು
ಇದೆಂಥ ಬಲಿ… ಸಾವು… ಹತ್ಯೆ…
ಇನ್ನೆಷ್ಟು??
ಬಾನು… ಭೂಮಿ ಗುಡುಗಿತು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)
Next post ಬೆಟ್ಟಗಳ ನಡುವಲಿ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…