ರಾಷ್ಟ್ರಪಿತ

ನಿನ್ನ ಎದೆಗೆ ಗುಂಡು ಬಡಿದಾಗ
ಮಣ್ಣು ನಡುಗಿತು ಹಗಲಹೂ ಬಾಡಿತು
ಶಾಂತಿದೂತ ಪಾರಿವಾಳ ಗೂಡು ಸೇರಿತು.

ತಿಳಿವು ತುಂಬಿದ ಕಣ್ಣು ಒಲವು ತುಂಬಿದ ಹೃದಯ
ಛಲವನರಿಯದ ಬದುಕು ಸಾಕು ಇಷ್ಟೇ
ನೆಲವು ನಂದನವಾಗಲಿಕ್ಕೆ
ಮನುಕುಲದ ಇತಿಹಾಸ ರಕ್ತರಂಜಿತ.

ಸರಳತೆ ಸಾಕಾರವಾಯಿತು
ಮಮತೆ ಮೈದೋರಿತು
ಕಾಳಸರ್ಪದ ಹಗೆ ಪಳಗಿಸುವ ಸಲುಗೆ
ಹಾಲಾಹಲ ಕೋಲಾಹಲದ ನಡುವೆ
ಮಂದಹಾಸವು ಬೀರುತ ನಡೆದೆ.

ಬತ್ತಿದ ಮನಗಳಲ್ಲಿ ಅರಿವು ಚಿಮ್ಮುತ್ತ
ಶಾಂತಿ ಸಂದಾನ ಸಮರಸಕೆ ನಾಂದಿ
ಸಂಕೋಲೆಯ ಬಿಡುಗಡೆ ಗಂಟೆ ಮೊಳಗುತ್ತಿತ್ತು.

ನರನ ಮೃಗತ್ವ ಬಾಯಿ ತೆರೆದಿತ್ತು
ನಿನ್ನ ಬಲಿಗೆ ಮಾತೃ ಮನಗಳು ಮರುಗಿದವು
ಕರಳು ಬಳ್ಳಿಗಳು ಕೊರಗಿದವು
ಇದೆಂಥ ಬಲಿ… ಸಾವು… ಹತ್ಯೆ…
ಇನ್ನೆಷ್ಟು??
ಬಾನು… ಭೂಮಿ ಗುಡುಗಿತು.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)
Next post ಬೆಟ್ಟಗಳ ನಡುವಲಿ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…