ಬೋಧಿವೃಕ್ಷದ ಬಂಧು

ಬುದ್ಧ ನೀ ಎದ್ದಾಗ
ಜಗವೆಲ್ಲ ಮಲಗಿತ್ತು
ಶಾಂತಚಿತ್ತದಿ ನಡೆದೆ
ಧೀರ ನಡಿಗೆಯಲಿ
ಕಾಮಕ್ರೋಧ ಮೋಹಗಳ ಧಿಕ್ಕರಿಸುತ

ಮಹಾ ಮಾನವ ನೀನಾಗುತ
ಕತ್ತಲಲಿ ನೀ ನಡೆದರೂ
ಪ್ರಕಾಶ ಚೆಲ್ಲುತ ಕತ್ತಲು ಓಡಿಸಿದಿ

ಅಂದು ಜಗದಳಲು ತಣಿಸಲು
ಕನವರಿಸುತ ಕಾಯುತ್ತಿತ್ತು ಜಗವು
ನಿನ್ನ ಬರುವಿಗಾಗಿ…

ವರ್ಣ ಪದ್ಧತಿಯ ಭಾರಕ್ಕೆ
ಬಳಲಿ ಬೆಂಡಾಗಿದ್ದ ಸಮಾಜ
ನಿನ್ನ ಸಮತೆ ಸರಳತೆಗೆ ಬಾಯಿ ತೆರೆದಿತ್ತು

ಮೌನ ಧ್ಯಾನಗಳ ಶಾಂತಮೂರ್ತಿಯಾಗಿ
ಜಗದ ಮನವ ಮೋಡಿ ಮಾಡಿ
ಶಾಂತಿ-ಅಹಿಂಸೆಗಳ ಹರಿಕಾರ ನೀನಾದಿ

ಬೋಧಿವೃಕ್ಷದ ನೆರಳು
ನೀನೆ ನೀನಾಗಿ ಮನುಕುಲಕೆ
ಬುದ್ಧಂ ಶರಣಂ ಗಚ್ಫಾಮಿ
ಶರಣಂ ಸಂಘಂ ಗಚ್ಫಾಮಿ ದಾರಿದೀಪವಾದೆ

ಬುದ್ಧನೆಂದರೆ ಎದ್ದವ
ಭವ ಭಾವಗಳ ಗೆದ್ದವ
ಕಾಲನುದರದೊಳಗೆ ಬೆಳೆದ ಕಮಲವದನ
ಬೋಧಿವೃಕ್ಷ ಬಂಧು, ಮರಳುಗಾಡಿನ ಸಿಂಧು

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇವಳು ಬಂದಾಗ
Next post ಕುರಿಮರಿ ಮತ್ತು ಕಟುಕ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys