ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ
ನೆಲೆ ನಿಂತು ಜೀವಗಳ ಕಾದವಳೆ ||

ಕಂದಗಳ ಕಾದವಳೆ
ಜೀವಿನ ಮರದವಳೆ
ಕೇಳಿದ್ದ ಕೊಟ್ಟವಳೆ
ಬೇಡಿದ್ದ ಬಿಟ್ಟವಳೆ ||

ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ
ಬೇವ ತಿಂದು ಬೇವನುಟ್ಟಮ್ಮ
ಸಿಡುಬ ನುಂಗಿ ಕಂದಗಳ ಕಾದವಳೆ
ಪ್ಲೇಗಮ್ಮನನ್ನು ಬಿಡದೆ ನುಂಗಿದವಳೆ ||

ಜೋಗಿಯ ಪ್ರಸಂಗ

ಮೇಳ:     ತಾಯೆ ನೀ ಯಾರೆ
ಅಂತರ್‍ಗಟ್ಟೆ ಮಾರಿ ||

ಕೇಡು ಬಯಸಿದವಗೆ
ಕೇಡು ನೀಡಿದೆ ಕೊಡುಗೆ
ಒಳಿತು ಬಯಸಿದವಗೆ
ಕೊಟ್ಟೆ ಬಯಸಿದ ಹಾಗೆ ||

ನಿಂತಲ್ಲೆ ನಿಂತವಳೆ
ಕುಂತಲ್ಲೆ ಕುಂತವಳೆ
ಬ್ರಹ್ಮಾಂಡ ತಿಳಿದವಳೆ
ಸಕಲವಾ ನಡೆದವಳೆ

ರೂಪದೊಳು ರೂಪವಿಲ್ಲ
ಕಾಯದೊಳು ಕಾಯವಿಲ್ಲ
ಇಲ್ಲವೆಂದರೆ ಐದೀ
ಐದಿಯೆಂದರೆ ಇಲ್ಲ ||

ಹೆಬ್ಬೂರು ನಿಗರು ಶಿಖೆಯ ಗಣಂಗು ಪ್ರಸಂಗ

ಮೇಳ:    ಮಾಟಗಾತಿ ಮಾಯಗಾತಿ
ಏನೆ ನಿನ್ನ ಕೀರುತಿ ||

ಮಾಯಾವ ಗೆದ್ದವಳೆ
ಗೆಲುವನ್ನೆ ಹೊದ್ದವಳೆ
ಮೀಯ ಬಂದವರಿಗೆಲ್ಲ
ಹಿಂಗು ತಿನ್ನಿಸಿದವಳೆ ||

ಗರಿ ನಿರಿಗೆ ಸೆರಗ ತಾಯಿ
ಸೋಜಿಗವೆ ಮಹಾಮಾಯಿ
ಪಿಂಡಾಂಡ ಬ್ರಹ್ಮಾಂಡವೆಲ್ಲ
ನಿನ್ನ ಸೀರೆಯಾಯಿತಲ್ಲ ||

ತ್ರಿಮೂರ್ತಿಗಳ ತ್ರಿಶೂಲ ಮಾಡಿ
ದಿಕ್ಕು ದೆಸೆನೆಲ್ಲ ಪಟ್ಟಣ ಮಾಡಿ
ಅಂತರದ ನಿನ್ನ ಕಟ್ಟೆಯ ಒಳಗೆ
ಜೀವ ಕಾಯುವ ಕಾಯಕದೊಳಗೆ ||

ಮೇಳ:    ಕಿಲಗುಡವ ಹಸಿಗೂಸ
ನುಂಗೀದನಲ್ಲ
ಕೂಸಾದ ಅಮ್ಮನ್ನ
ನುಂಗೀದನಲ್ಲ ||

ಹೊಟ್ಟೇಲಿಂದ ತಾಯಿ
ಬಿಳಲಾದಳಲ್ಲ
ಬೆಳಬೆಳೆದು ಮಾಯಾವಿ
ಮರವಾದಳಲ್ಲ ||

ಕಂಚಿ ವೀರನ ಪ್ರಸಂಗ

ಮೇಳ:     ಕಂಚಿಯ ವೀರನೊಬ್ಬ
ಅಂತರಗಟ್ಟೆವ್ವನ ಸುದ್ದಿಕೇಳಿ
ಗೆಲ್ಲುತ್ತೇನಂತ ಬಂದಾನೆ
ತಂದನ್ನಾ ತಾನ ||

ವೀರಾನ ವೇಸ ಧರಿಸಿ
ಬರುತಾನೆ ಕಂಚಿ ಕಡಿಯಿಂದ
ತಂದನ್ನಾ ತಾನ ||

ಮೇಳ :    ಅವ್ವಾ ತಾಯೆ
ಅಂತರಗಟ್ಟೆವ್ವ ||

ಕಾಯಿ ಹಣ್ಣು ಮಾಡಿದವಳೆ
ಕಲ್ಲು ನೀರು ಮಾಡಿದವಳೆ
ಬೀಜ ವೃಕ್ಷ ಮಾಡಿದವಳೆ ||

ಮೂರು ಲೋಕ ಬ್ರಹ್ಮಾಂಡವನೆ
ಸೀರೆ ಮಾಡಿ ಸುತ್ತಿ ನೆರಿಗೇಲಿ
ನೆಲದ ಕಂದಗಳ ಕಾದವಳೆ ||

ತಂದನ್ನೊ ತಾನೊ
ತಾನಂದಾನೊ ತಾನೊ ||

ಬಾಳ ಹಸನು ಮಾಡಲು ಕುಂತು
ಕಂದಗಳಿಗೆ ಜೀವ ಹಿಡಿದು ಕುಂತು
ಜಗದ ಜುಟ್ಟ ನಡುಗಿಸಿದವಳೆ
ಬಂದ ಮಕ್ಕಳನ್ನೆಲ್ಲ ಕಾಪಾಡಿದವಳೆ ||

ಹಂಸದ ಮೇಲಿನ ಪದ

ಹುಡುಕಿ ಬಂದಾ ಹಂಸೆ
ಎತ್ತ ಹಾರಿತು ನಂಬಿಸಿ ||

ಸೆಳೆದಿತ್ತು ಕಣ್ಣಮಿಂಚ
ಹಾಕಿ ಪ್ರೀತಿಯ ಹೊಂಚ
ಕರೆದೊಯ್ಯಲು ಮುಗಿಲತ್ತ
ಕಾಣದೆ ಹೋಯಿತೆತ್ತ ||

ಅಮೃತವ ಕುಡಿದ ಹಂಸೆ
ಬಿಟ್ಟು ಮಾನವ ಹಿಂಸೆ
ನಲಿನಲಿದು ನರಕವ
ಮಾಡಿತಲ್ಲ ಸ್ವರ್ಗವ ||

ಏಕತಾರಿಯ ಕಾಯಿ
ಹಣ್ಣಾದಂತೆ ಕಾಯ
ತಂತಿ ನಾದದ ಇಂಪು
ತತ್ವ ಗ್ಯಾನದ ತಂಪು ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಜನದ ಹಾಡು
Next post ರಾಷ್ಟ್ರಪಿತ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys