Home / ಕವನ / ಕವಿತೆ / ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು)

ಮೇಳ: ಸಿರಿ ಅಂತರಗಟ್ಟೆ ಮಾರಿ ಎನಿಸಿದವಳೆ
ನೆಲೆ ನಿಂತು ಜೀವಗಳ ಕಾದವಳೆ ||

ಕಂದಗಳ ಕಾದವಳೆ
ಜೀವಿನ ಮರದವಳೆ
ಕೇಳಿದ್ದ ಕೊಟ್ಟವಳೆ
ಬೇಡಿದ್ದ ಬಿಟ್ಟವಳೆ ||

ಸತ್ಯವ್ವ ಮುತ್ಯವ್ವ ಕರಿಕಾರಲರಮ್ಮ
ಬೇವ ತಿಂದು ಬೇವನುಟ್ಟಮ್ಮ
ಸಿಡುಬ ನುಂಗಿ ಕಂದಗಳ ಕಾದವಳೆ
ಪ್ಲೇಗಮ್ಮನನ್ನು ಬಿಡದೆ ನುಂಗಿದವಳೆ ||

ಜೋಗಿಯ ಪ್ರಸಂಗ

ಮೇಳ:     ತಾಯೆ ನೀ ಯಾರೆ
ಅಂತರ್‍ಗಟ್ಟೆ ಮಾರಿ ||

ಕೇಡು ಬಯಸಿದವಗೆ
ಕೇಡು ನೀಡಿದೆ ಕೊಡುಗೆ
ಒಳಿತು ಬಯಸಿದವಗೆ
ಕೊಟ್ಟೆ ಬಯಸಿದ ಹಾಗೆ ||

ನಿಂತಲ್ಲೆ ನಿಂತವಳೆ
ಕುಂತಲ್ಲೆ ಕುಂತವಳೆ
ಬ್ರಹ್ಮಾಂಡ ತಿಳಿದವಳೆ
ಸಕಲವಾ ನಡೆದವಳೆ

ರೂಪದೊಳು ರೂಪವಿಲ್ಲ
ಕಾಯದೊಳು ಕಾಯವಿಲ್ಲ
ಇಲ್ಲವೆಂದರೆ ಐದೀ
ಐದಿಯೆಂದರೆ ಇಲ್ಲ ||

ಹೆಬ್ಬೂರು ನಿಗರು ಶಿಖೆಯ ಗಣಂಗು ಪ್ರಸಂಗ

ಮೇಳ:    ಮಾಟಗಾತಿ ಮಾಯಗಾತಿ
ಏನೆ ನಿನ್ನ ಕೀರುತಿ ||

ಮಾಯಾವ ಗೆದ್ದವಳೆ
ಗೆಲುವನ್ನೆ ಹೊದ್ದವಳೆ
ಮೀಯ ಬಂದವರಿಗೆಲ್ಲ
ಹಿಂಗು ತಿನ್ನಿಸಿದವಳೆ ||

ಗರಿ ನಿರಿಗೆ ಸೆರಗ ತಾಯಿ
ಸೋಜಿಗವೆ ಮಹಾಮಾಯಿ
ಪಿಂಡಾಂಡ ಬ್ರಹ್ಮಾಂಡವೆಲ್ಲ
ನಿನ್ನ ಸೀರೆಯಾಯಿತಲ್ಲ ||

ತ್ರಿಮೂರ್ತಿಗಳ ತ್ರಿಶೂಲ ಮಾಡಿ
ದಿಕ್ಕು ದೆಸೆನೆಲ್ಲ ಪಟ್ಟಣ ಮಾಡಿ
ಅಂತರದ ನಿನ್ನ ಕಟ್ಟೆಯ ಒಳಗೆ
ಜೀವ ಕಾಯುವ ಕಾಯಕದೊಳಗೆ ||

ಮೇಳ:    ಕಿಲಗುಡವ ಹಸಿಗೂಸ
ನುಂಗೀದನಲ್ಲ
ಕೂಸಾದ ಅಮ್ಮನ್ನ
ನುಂಗೀದನಲ್ಲ ||

ಹೊಟ್ಟೇಲಿಂದ ತಾಯಿ
ಬಿಳಲಾದಳಲ್ಲ
ಬೆಳಬೆಳೆದು ಮಾಯಾವಿ
ಮರವಾದಳಲ್ಲ ||

ಕಂಚಿ ವೀರನ ಪ್ರಸಂಗ

ಮೇಳ:     ಕಂಚಿಯ ವೀರನೊಬ್ಬ
ಅಂತರಗಟ್ಟೆವ್ವನ ಸುದ್ದಿಕೇಳಿ
ಗೆಲ್ಲುತ್ತೇನಂತ ಬಂದಾನೆ
ತಂದನ್ನಾ ತಾನ ||

ವೀರಾನ ವೇಸ ಧರಿಸಿ
ಬರುತಾನೆ ಕಂಚಿ ಕಡಿಯಿಂದ
ತಂದನ್ನಾ ತಾನ ||

ಮೇಳ :    ಅವ್ವಾ ತಾಯೆ
ಅಂತರಗಟ್ಟೆವ್ವ ||

ಕಾಯಿ ಹಣ್ಣು ಮಾಡಿದವಳೆ
ಕಲ್ಲು ನೀರು ಮಾಡಿದವಳೆ
ಬೀಜ ವೃಕ್ಷ ಮಾಡಿದವಳೆ ||

ಮೂರು ಲೋಕ ಬ್ರಹ್ಮಾಂಡವನೆ
ಸೀರೆ ಮಾಡಿ ಸುತ್ತಿ ನೆರಿಗೇಲಿ
ನೆಲದ ಕಂದಗಳ ಕಾದವಳೆ ||

ತಂದನ್ನೊ ತಾನೊ
ತಾನಂದಾನೊ ತಾನೊ ||

ಬಾಳ ಹಸನು ಮಾಡಲು ಕುಂತು
ಕಂದಗಳಿಗೆ ಜೀವ ಹಿಡಿದು ಕುಂತು
ಜಗದ ಜುಟ್ಟ ನಡುಗಿಸಿದವಳೆ
ಬಂದ ಮಕ್ಕಳನ್ನೆಲ್ಲ ಕಾಪಾಡಿದವಳೆ ||

ಹಂಸದ ಮೇಲಿನ ಪದ

ಹುಡುಕಿ ಬಂದಾ ಹಂಸೆ
ಎತ್ತ ಹಾರಿತು ನಂಬಿಸಿ ||

ಸೆಳೆದಿತ್ತು ಕಣ್ಣಮಿಂಚ
ಹಾಕಿ ಪ್ರೀತಿಯ ಹೊಂಚ
ಕರೆದೊಯ್ಯಲು ಮುಗಿಲತ್ತ
ಕಾಣದೆ ಹೋಯಿತೆತ್ತ ||

ಅಮೃತವ ಕುಡಿದ ಹಂಸೆ
ಬಿಟ್ಟು ಮಾನವ ಹಿಂಸೆ
ನಲಿನಲಿದು ನರಕವ
ಮಾಡಿತಲ್ಲ ಸ್ವರ್ಗವ ||

ಏಕತಾರಿಯ ಕಾಯಿ
ಹಣ್ಣಾದಂತೆ ಕಾಯ
ತಂತಿ ನಾದದ ಇಂಪು
ತತ್ವ ಗ್ಯಾನದ ತಂಪು ||

*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...