ಪ್ರಕೃತಿ

ರಾತ್ರಿ ಬೆಳಕು ಮಳೆ ಬಿಸಿಲು ನೆಳಲು
ನಾನೆಂದೂ ಬಿಟ್ಟುಕೊಟ್ಟವಳೇ ಅಲ್ಲ:
ಯಾಕೆಂದರೆ ಅದು ನನ್ನ ಬಿಟ್ಟಿಲ್ಲ
ತನ್ನ ಋತುಮಾನದಲ್ಲಿ ನನ್ನನ್ನಾಳಕ್ಕಿಳಿಸಿ
ಎತ್ತರಕ್ಕೇರಿಸುವ ಪ್ರಕೃತಿಯೇ ನಾನಿರುವಾಗ
ಯಾವುದಕ್ಕೂ ಕೊಸರಿಕೊಂಡಿಲ್ಲ
ಪಕ್ಷಿಯಾಗಿ ಚಿಲಿಪಿಲಿಗುಡುವ
ಹಸಿರು ಹೊಲಗದ್ದೆಗಳ ನಡುವೆ ಹೂವಾಗುವ
ಮುಸ್ಸಂಜೆಯ ಗೋವುಗಳ ತುಳಿತಕ್ಕೆ ಧೂಳಾಗುವ
ಬೆಳಗಿನಲಿ ಮಂಜಾಗುವ
ಮೋಡಾಗಿ ಮಳೆಯಾಗುವ
ಮಳೆಯಾಗಿ ಧುಮ್ಮಿಕ್ಕುವ
ಹಿಮಕರಗಿ ಪ್ರಪಾತದಾಳದಲ್ಲಿ
ಮುನ್ನುಗ್ಗುವ ಸಂಭ್ರಮ –
ಅಂತೆಯೇ ಮಗು ನೀನು ಕೂಡಾ
ನನ್ನ ತೋಟದಲ್ಲಿ
ಮಲ್ಲಿಗೆ, ಸಂಪಿಗೆ, ಗುಲಾಬಿಯಾಗು
ನನ್ನದೆಯಾಂತರಾಳದೊಳಗೆ ಕಾಮನಬಿಲ್ಲಾಗು
ನನ್ನ ಮೋಡಿನ ಮೊದಲು ಮಳೆಯ
ಹನಿಯಾಗು, ಮಣ್ಣಿನ ಕಂಪಾಗು
ನನ್ನಂತರಂಗದ ಗೂಡಿನ ಗಿಳಿಯಾಗಿ
ಹೊರಬಂದು ಯಾವುದನ್ನೂ ಬಿಟ್ಟುಕೊಡದೇ
ಎಲ್ಲದರೊಳಗೊಂದಾಗಿ ಆಕಾಶಕ್ಕೇರು
ಯಾಕೆಂದರೆ ಅದು ನಮ್ಮ ಬಿಟ್ಟಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿಯ ಕಣ್ಣು ತೆರೆಯುತಿತ್ತು
Next post ಲಿಂಗಮ್ಮನ ವಚನಗಳು – ೨೧

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys