ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ
ಮಂತ್ರಿ ಪದ ಬರಲಿಲ್ಲ
ಜನಮತಗಳಿಸಿ
ನಿನ್ನ ಮರ್ಯಾದೆ ಉಳಿಸಿದರೂ
ಪದ ಪಡೆಯುವ ಆಸೆ ಭರವಸೆ ಇದ್ದರೂ
ಮೇಲಿನವರು ಕಡೆಗಣಿಸಿದರು.
ಇದು ನಿನಗೆ ಸಂದ
ಎಣಿಸದೆಯೆ ಬಂದ
ಬಹುಮಾನ!
ಅಹವಾಲು ತಲುಪಲಿಲ್ಲ
ಒಲೈಕೆ- ಫಲಿಸಲಿಲ್ಲ
ಗೈದ ಕುಕೃತಿ – ಅನಧಿಕೃತ
ತಿರುಗಿದ ಬಾಣವಾಯಿತು-
ಇಡು ಶಂಕರನಲ್ಲಿ ನಂಬಿಕೆ
ಮುಂದೊಂದು ದಿನ
ಮನೆಮಂತ್ರಿಯಾಗುವೆ ಪುನಃ
ಶಂಕರ ನಿನ್ನ ಕೃಪಾಕಟಾಕ್ಷದ
ಅಡಿಯಲ್ಲಿ
ನಾನು ಬಂಜೆಯಾದೆ-
ಏಕಾಯಿತು ಹೀಗೆ-ಹೀನಾಯ ತಗಾದೆ
ನಾನು ತಿಳಿಯದಾದೆ.
ಧರ್ಮದಾರುಣವಾಯಿತು
ಕರ್ಮಕಾರಣವಾಯಿತು
ಯುಗ ಯುಗದಲ್ಲಿಯೂ
ಧರ್ಮರಕ್ಷಣೆಗೆ ಸಂಭವಿಸುವೆನೆಂದು
ಇತ್ತ ಆಶ್ವಾಸನೆ ಎಲ್ಲಿ ಹೋಯಿತು
ಮಠಪೀಟ ಧನ ದಾಹದಿಂದ
ನೀನು ಮೇಲೇಳಲಿಲ್ಲ
ಎಲ್ಲರಂತಲ್ಲ ನೀನೆಂದು
ಜಗದೊಡೆಯ ಬಲ್ಲಹನೆಂದು
ಚರಣಧೂಳಿಯನು ಹಣೆಗೆ ಹಚ್ಚಿಯಾಯಿತು
ನೀನು ಮೇಲೇಳಲಿಲ್ಲ – ಮಾನಹಾನಿಗಳ ಡಾವಪೇಚಿನಲ್ಲಿ
ಮನುವಾಗಿಯೆ ಉಳಿದೆ.
*****
Related Post
ಸಣ್ಣ ಕತೆ
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಕೂನನ ಮಗಳು ಕೆಂಚಿಯೂ….
ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…
-
ಏಕಾಂತದ ಆಲಾಪ
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…