ಕೃಪಾಶಂಕರ

ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ
ಮಂತ್ರಿ ಪದ ಬರಲಿಲ್ಲ
ಜನಮತಗಳಿಸಿ
ನಿನ್ನ ಮರ್ಯಾದೆ ಉಳಿಸಿದರೂ
ಪದ ಪಡೆಯುವ ಆಸೆ ಭರವಸೆ ಇದ್ದರೂ
ಮೇಲಿನವರು ಕಡೆಗಣಿಸಿದರು.
ಇದು ನಿನಗೆ ಸಂದ
ಎಣಿಸದೆಯೆ ಬಂದ
ಬಹುಮಾನ!
ಅಹವಾಲು ತಲುಪಲಿಲ್ಲ
ಒಲೈಕೆ- ಫಲಿಸಲಿಲ್ಲ
ಗೈದ ಕುಕೃತಿ – ಅನಧಿಕೃತ
ತಿರುಗಿದ ಬಾಣವಾಯಿತು-
ಇಡು ಶಂಕರನಲ್ಲಿ ನಂಬಿಕೆ
ಮುಂದೊಂದು ದಿನ
ಮನೆಮಂತ್ರಿಯಾಗುವೆ ಪುನಃ
ಶಂಕರ ನಿನ್ನ ಕೃಪಾಕಟಾಕ್ಷದ
ಅಡಿಯಲ್ಲಿ
ನಾನು ಬಂಜೆಯಾದೆ-
ಏಕಾಯಿತು ಹೀಗೆ-ಹೀನಾಯ ತಗಾದೆ
ನಾನು ತಿಳಿಯದಾದೆ.
ಧರ್ಮದಾರುಣವಾಯಿತು
ಕರ್ಮಕಾರಣವಾಯಿತು
ಯುಗ ಯುಗದಲ್ಲಿಯೂ
ಧರ್ಮರಕ್ಷಣೆಗೆ ಸಂಭವಿಸುವೆನೆಂದು
ಇತ್ತ ಆಶ್ವಾಸನೆ ಎಲ್ಲಿ ಹೋಯಿತು
ಮಠಪೀಟ ಧನ ದಾಹದಿಂದ
ನೀನು ಮೇಲೇಳಲಿಲ್ಲ
ಎಲ್ಲರಂತಲ್ಲ ನೀನೆಂದು
ಜಗದೊಡೆಯ ಬಲ್ಲಹನೆಂದು
ಚರಣಧೂಳಿಯನು ಹಣೆಗೆ ಹಚ್ಚಿಯಾಯಿತು
ನೀನು ಮೇಲೇಳಲಿಲ್ಲ – ಮಾನಹಾನಿಗಳ ಡಾವಪೇಚಿನಲ್ಲಿ
ಮನುವಾಗಿಯೆ ಉಳಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾ ತಾಯೆ ಬಾ
Next post ಇಂಥ ವೇಗದೋಟದಲ್ಲಿ ನೋಟ ಸಾಧ್ಯವಾ?

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…