ನೀನಿರುವೆ ಎಲ್ಲೋ

ನೀನಿರುವೆ ಎಲ್ಲೋ|
ಸುಂದರ ಶಿಲ್ಪಕಲೆಯ ಗುಡಿಯಲೋ
ಈ ವನರಾಶಿ ಪ್ರಕೃತಿಯ ಮಡಿಲಲೋ|
ಶ್ರೀಮಂತರ ಸುಪ್ಪತ್ತಿಗೆಯಲೋ
ಬಟ್ಟೆ ಪೀತಾಂಬರವಿರದ
ಹರಕು ಬಟ್ಟೆಯನುಟ್ಟ
ಮುರುಕು ಮನೆಯ ತಿರುಕನಲೋ||

ಜಗಜಗಿಸುವ ವಜ್ರಖಚಿತ ಮುತ್ತುರತ್ನ
ಮುಕುಟ ಧರಿಸಿದವನಾಗಿಯೋ
ಮಣಿ ಕಂಠಮಾಲ ಚಿನ್ನದ
ಪಾದುಕೆ, ಬೆತ್ತದಾರಿಣಿಯಾಗಿಯೋ|
ಕೌಪೀನದಾರಿ, ತುಳಸೀಮಾಲಾ, ಶ್ರೀಗಂಧ
ಚೆಂದನ ಲೇಪಿತ ವಟು ಬ್ರಾಹ್ಮಣನಲ್ಲಿಯೋ||

ಲೋಕದ ಹಸಿವನೀಗಿಸೆ
ದುಡಿವ ರೈತನ ಬೆವರಹನಿಯಲ್ಲಿಯೋ|
ಚೆಂದದಾಕಳ ಕರುವ ಜಿಂಕೆಯ
ಕಣ್ಣೆಸಳ ಕಾಂತಿಯಲ್ಲಿಯೋ|
ಹೆತ್ತಮಗುವಿಗಾಗಿ ಜೀವನ ತೇಯ್ದು
ಪ್ರೀತಿಯ ಸುರಿಸುವ ತಾಯಿ ಮಮತೆಯಲ್ಲಿಯೋ|
ಕತ್ತಲೆ ತೊಳೆದು ಅಜ್ಞಾನವ
ಹೊಡೆದೋಡಿಸುವ ಜ್ಞಾನ ಜ್ಯೋತಿಯಲ್ಲಿಯೋ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹನಿ ಕತೆ
Next post ದೇಹ ಆತ್ಮ ಭಾವ

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…