ನೊಯ್ಯದಿರು ಮನವೇ

ನೊಯ್ಯದಿರು ಮನವೇ
ಯಾರೇ ತುಚ್ಯವಾಗಿ ಕಂಡರೂ|
ತಳಮಳಿಸದಿರು ಜೀವವೇ
ವಿಪರೀತ ಪೃಚ್ಚರ ಮಾತಿಗೆ||

ಅವಮಾನ ಮಾಡಲೆಂದೇ
ಕಾಯುವವರು ಕೆಲವರು|
ತಲ್ಲಣಿಸದಿರು ಜೀವವೇ
ಕಾಲವೇ ಉತ್ತರಿಸುವುದು ಮೆಲ್ಲಗೆ||

ನಿನ್ನ ಒಳಮನಸನೊಮ್ಮೆ ಕೇಳು
ಇದು ನಿನಗೆ ಸರಿಯೇ ಎಂದು|
ಸರಿಯಿಲ್ಲವೆಂದರೆ ಕ್ಷಮೆಯಾಚಿಸು
ತಿದ್ದಿ ಸರಿಪಡಿಸಿಕೊ ಇಂದೇ
ಮುಂದೆ ಮರುಕಳಿಸಬಾರದೆಂದು||

ತಾಳಿದವರು ಬಾಳಿಯಾರು
ಎಂಬ ಗಾದೆ ಮಾತಿನಂತೆ
ಸಹಿಸಿಕೋ ಎಲ್ಲವನೂ|
ಕಾಲ ಬರುವುದು ನಿನಗೆ,
ಅವರಂತೆ ನೀನೂ ನಡೆದರೆ
ವ್ಯತ್ಯಾಸವೇನಿಬ್ಬರಿಗೆ||

ಶಿಲ್ಪಿ ಉಳಿಯಿಂದ ಕಡೆದಷ್ಟು
ಬಲು ಸುಂದರ ಮೂರ್ತಿಯಾಗಿ
ಪೂಜೆಗೆ ರೂಪಗೂಳ್ಳುವೆ|
ಎಲ್ಲರಿಂದ ಗೌರವ ಸ್ವೀಕರಿಸುವೆ
ಸಹಿಸಿಕೊ ಜೀವವೇ ನೀ ಅಲ್ಲಿಯವರೆಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೂ ಬಿಡಲು ಕಾರಣ
Next post ಕಣ್ಣು ಮುಚ್ಚಾಲೆ

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…