ನೊಯ್ಯದಿರು ಮನವೇ

ನೊಯ್ಯದಿರು ಮನವೇ
ಯಾರೇ ತುಚ್ಯವಾಗಿ ಕಂಡರೂ|
ತಳಮಳಿಸದಿರು ಜೀವವೇ
ವಿಪರೀತ ಪೃಚ್ಚರ ಮಾತಿಗೆ||

ಅವಮಾನ ಮಾಡಲೆಂದೇ
ಕಾಯುವವರು ಕೆಲವರು|
ತಲ್ಲಣಿಸದಿರು ಜೀವವೇ
ಕಾಲವೇ ಉತ್ತರಿಸುವುದು ಮೆಲ್ಲಗೆ||

ನಿನ್ನ ಒಳಮನಸನೊಮ್ಮೆ ಕೇಳು
ಇದು ನಿನಗೆ ಸರಿಯೇ ಎಂದು|
ಸರಿಯಿಲ್ಲವೆಂದರೆ ಕ್ಷಮೆಯಾಚಿಸು
ತಿದ್ದಿ ಸರಿಪಡಿಸಿಕೊ ಇಂದೇ
ಮುಂದೆ ಮರುಕಳಿಸಬಾರದೆಂದು||

ತಾಳಿದವರು ಬಾಳಿಯಾರು
ಎಂಬ ಗಾದೆ ಮಾತಿನಂತೆ
ಸಹಿಸಿಕೋ ಎಲ್ಲವನೂ|
ಕಾಲ ಬರುವುದು ನಿನಗೆ,
ಅವರಂತೆ ನೀನೂ ನಡೆದರೆ
ವ್ಯತ್ಯಾಸವೇನಿಬ್ಬರಿಗೆ||

ಶಿಲ್ಪಿ ಉಳಿಯಿಂದ ಕಡೆದಷ್ಟು
ಬಲು ಸುಂದರ ಮೂರ್ತಿಯಾಗಿ
ಪೂಜೆಗೆ ರೂಪಗೂಳ್ಳುವೆ|
ಎಲ್ಲರಿಂದ ಗೌರವ ಸ್ವೀಕರಿಸುವೆ
ಸಹಿಸಿಕೊ ಜೀವವೇ ನೀ ಅಲ್ಲಿಯವರೆಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೂ ಬಿಡಲು ಕಾರಣ
Next post ಕಣ್ಣು ಮುಚ್ಚಾಲೆ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…