ನೊಯ್ಯದಿರು ಮನವೇ

ನೊಯ್ಯದಿರು ಮನವೇ
ಯಾರೇ ತುಚ್ಯವಾಗಿ ಕಂಡರೂ|
ತಳಮಳಿಸದಿರು ಜೀವವೇ
ವಿಪರೀತ ಪೃಚ್ಚರ ಮಾತಿಗೆ||

ಅವಮಾನ ಮಾಡಲೆಂದೇ
ಕಾಯುವವರು ಕೆಲವರು|
ತಲ್ಲಣಿಸದಿರು ಜೀವವೇ
ಕಾಲವೇ ಉತ್ತರಿಸುವುದು ಮೆಲ್ಲಗೆ||

ನಿನ್ನ ಒಳಮನಸನೊಮ್ಮೆ ಕೇಳು
ಇದು ನಿನಗೆ ಸರಿಯೇ ಎಂದು|
ಸರಿಯಿಲ್ಲವೆಂದರೆ ಕ್ಷಮೆಯಾಚಿಸು
ತಿದ್ದಿ ಸರಿಪಡಿಸಿಕೊ ಇಂದೇ
ಮುಂದೆ ಮರುಕಳಿಸಬಾರದೆಂದು||

ತಾಳಿದವರು ಬಾಳಿಯಾರು
ಎಂಬ ಗಾದೆ ಮಾತಿನಂತೆ
ಸಹಿಸಿಕೋ ಎಲ್ಲವನೂ|
ಕಾಲ ಬರುವುದು ನಿನಗೆ,
ಅವರಂತೆ ನೀನೂ ನಡೆದರೆ
ವ್ಯತ್ಯಾಸವೇನಿಬ್ಬರಿಗೆ||

ಶಿಲ್ಪಿ ಉಳಿಯಿಂದ ಕಡೆದಷ್ಟು
ಬಲು ಸುಂದರ ಮೂರ್ತಿಯಾಗಿ
ಪೂಜೆಗೆ ರೂಪಗೂಳ್ಳುವೆ|
ಎಲ್ಲರಿಂದ ಗೌರವ ಸ್ವೀಕರಿಸುವೆ
ಸಹಿಸಿಕೊ ಜೀವವೇ ನೀ ಅಲ್ಲಿಯವರೆಗೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೂ ಬಿಡಲು ಕಾರಣ
Next post ಕಣ್ಣು ಮುಚ್ಚಾಲೆ

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys