ಕಣ್ಣು ಮುಚ್ಚಾಲೆ

ಎಷ್ಟೊತ್ತಿನ ವರೆಗೆ ನಿನ್ನ ಕಣ್ಣ ಮುಚ್ಚಾಲೆ
ನೀನು ಕಾಡಿದರೆ ನಾ ಸಹಿಸೆನು
ಎನ್ನ ಮನದ ಭಾವಗಳು ನಿನಗಾಗಿ ಸೋತಿವೆ
ನಿನ್ನ ರೂಪಕಾಣದೆ ನಾ ತಾಳೆನು

ಏಸು ಮನುಜರಿದ್ದರೂ ನಾನು ತಬ್ಬಲಿ
ಪ್ರಪಂಚ ಇದು ಕಾಣದ ಹೆಬ್ಬುಲಿ
ಎದುರಾಳಿಯಂತೆ ನಿತ್ಯ ಹೋರಾಟವು
ನನ್ನ ಬದುಕು ಸಾಗಿದೆ ಇದೇ ಮಬ್ಬಲಿ

ನಿನ್ನ ತಾಣದಿ ಬಂದೆ ನಿನ್ನ ಮರೆತೆ
ಎದೆಯ ಕರೆಯನ್ನು ಕೇಳದೆ ಹೋದೆ
ತನುವಿನ ಹಮ್ಮಿನಲಿ ನಿತ್ಯ ಮರೆದೆ
ಇನ್ನು ತಾಳೆನು ನಾನು ಈ ಭವದ ಭಾದೆ

ನಿನ್ನ ನೆನಪೇ ಅಮೃತವು ಮರೆವೆ ವಿಷ
ಇಂದ್ರಿಯ ಭೋಗವೆಲ್ಲ ಬಿಸಿಲು ಗುದರೆ!
ನನ್ನ ಅಸಹಾಯಕತೆ ಹರಿಯೆ ಅರಿಯಲಾರೆಯಾ
ಮಾಣಿಕ್ಯ ವಿಠಲನ ಮೊರೆ ಕೇಳದಾದರೆ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೊಯ್ಯದಿರು ಮನವೇ
Next post ಆದಿಮಾನವ ಭೋಗಮಾನವನಾದ ಕಥೆ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…