ಮನುಜನಿಗಿಂತ ಮೃಗ

ಮನುಜನಿಗಿಂತ ಮೃಗಪ್ರಾಣಿಯೊಂದಿಲ್ಲ
ಕಾಡುಮೃಗ ಹೊಟ್ಟೆಪಾಡಿಗೆ ಭೇಟೆಯಾಡಿದರೆ|
ಮನುಜ ಅಹಂಕಾರ, ಸ್ವಾರ್ಥಕೆ
ಇನ್ನೊಬ್ಬರ ಜೀವದನದ ಜೊತೆ ಬೇಟೆಯಾಡುತ
ಮನುಕುಲಕೆ ಮೃತ್ಯುವಾಗಿಹನು||

ಮನುಜ ಮನುಜನಂತೆ ನಡೆದರೆ
ಬೇಕಿಲ್ಲ ಮಾನವನ ಶಿಕ್ಷೆ ರಕ್ಷಣೆಯ
ಕಾನೂನು, ಬಂದಿಖಾನೆ|
ಮನುಜ ಮಾನವೀಯತೆಯಲಿ ಮೆರೆದರೆ
ಬೇಕಿಲ್ಲ ಮನಶಾಂತಿಯ ಮಂತ್ರ, ಸೂತ್ರದ ಮೊರೆ||

ಮನುಜ ಆದರ್ಶಮಾರ್ಗದಿ ಮುನ್ನಡೆದರೆ
ಬೇಕಿಲ್ಲ ನೀತಿಸಂಹಿತೆಯ ಮಾನದಂಡ|
ಮನುಜ ತ್ಯಾಗ ಹಸ್ತವ ನೀಡಿದ್ದೇಯಾದರೆ
ಬರ ಕ್ಷಾಮಾದಿಗಳಿಂದ ಮುಕ್ತವೀಧರೆ||

ಮನುಜನೂ ಪ್ರಾಣಿ ನಿಜ, ಮೃಗವಾದರೆ ಹೇಗೆ?
ಸಹನೆ ಸಹಕಾರ ಶಾಂತಿ ಕರುಣೆ ಪ್ರೀತಿಯಿಲ್ಲದ
ಹೃದಯ, ಢಾಂಬಿಕತೆ, ಬರೀ ಸ್ವಾರ್ಥದಿ
ಜೀವಿಸಿದರೆ ಅದು ಮನು ಜನ್ಮವೇ?
ಬದಲಾಗು ಮಾನವ ಮೊದಲು ಮಾನವನಾಗು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿವರ್ತನೆ
Next post ಅಪನಂಬಿಕೆ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys