ಮೌನವಾಗಿಯೇ ಏಕೆ?

ಮೌನವಾಗಿಯೇ ಏಕೆ?
ಮನದನ್ನೆ
ನಾ ತಡವಾಗಿ ಬಂದುದಕೆ|
ಓಡೋಡಿ ಬಂದಿಯೇ ನಾ, ಕೊಂಚ
ನಿನಗೆ ಬೇಸರವಾಗಿರುವುದಕೆ||

ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ
ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ|
ಸದಾನಿನ್ನ ಚಿತ್ರ ಮನದಲಿರಿಸಿ
ದುಡಿದು ದಣಿದು ಬಂದಿಹೆ ಬಳಿಗೆ
ಪ್ರೀತಿ ತೋರಿ ಬಳಿಬಾರೆ ನನ್ನೊಲವೇ||

ನಿನಗಾಗಿ ಏನನು ತರಲಿಲ್ಲ ಇಂದು
ನನ್ನನೇ ನಿನಗಾಗಿ ತಂದು|
ಪ್ರೇಮ ಭಿಕ್ಷೆಯ ಬೇಡುತ
ನಿನ್ನ ಬಳಿ ಸುಳಿದಾಡುತಿರುವೆನಿಂದು|
ಒಮ್ಮೆ ಒರೆಗಣ್ಣಲಿನೋಡೆನ್ನ
ಚೆಲುವೆ, ನಾ ಧನ್ಯನಾಗಿಬಿಡುವೆ||

ಇಂದಿನಿಂದಲೇ ಶಪಥ ಮಾಡಿಬಿಡುವೆ
ನಾನು ದಿನಾಲು ಇನ್ನೂ ಬೇಗನೇ ಬರುವೆ|
ಬರುವಾಗ ನೀ ಬಯಸಿದನೆಲ್ಲವ ತರುವೆ
ದಯೆ ತೋರು ಓ ನನ್ನ ಚೆಲುವೇ|
ಬಳಲಿ ಬಾಯಾರಿ ಬಂದಿರುವೆ
ಪ್ರೇಮ ಸುಧೆಯ ನೀಡೆಯಾ ಒಲವೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿ ಕಥೆ
Next post ಚೈತನ್ಯ ಧಾಮ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

cheap jordans|wholesale air max|wholesale jordans|wholesale jewelry|wholesale jerseys