ಮೌನವಾಗಿಯೇ ಏಕೆ?

ಮೌನವಾಗಿಯೇ ಏಕೆ?
ಮನದನ್ನೆ
ನಾ ತಡವಾಗಿ ಬಂದುದಕೆ|
ಓಡೋಡಿ ಬಂದಿಯೇ ನಾ, ಕೊಂಚ
ನಿನಗೆ ಬೇಸರವಾಗಿರುವುದಕೆ||

ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ
ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ|
ಸದಾನಿನ್ನ ಚಿತ್ರ ಮನದಲಿರಿಸಿ
ದುಡಿದು ದಣಿದು ಬಂದಿಹೆ ಬಳಿಗೆ
ಪ್ರೀತಿ ತೋರಿ ಬಳಿಬಾರೆ ನನ್ನೊಲವೇ||

ನಿನಗಾಗಿ ಏನನು ತರಲಿಲ್ಲ ಇಂದು
ನನ್ನನೇ ನಿನಗಾಗಿ ತಂದು|
ಪ್ರೇಮ ಭಿಕ್ಷೆಯ ಬೇಡುತ
ನಿನ್ನ ಬಳಿ ಸುಳಿದಾಡುತಿರುವೆನಿಂದು|
ಒಮ್ಮೆ ಒರೆಗಣ್ಣಲಿನೋಡೆನ್ನ
ಚೆಲುವೆ, ನಾ ಧನ್ಯನಾಗಿಬಿಡುವೆ||

ಇಂದಿನಿಂದಲೇ ಶಪಥ ಮಾಡಿಬಿಡುವೆ
ನಾನು ದಿನಾಲು ಇನ್ನೂ ಬೇಗನೇ ಬರುವೆ|
ಬರುವಾಗ ನೀ ಬಯಸಿದನೆಲ್ಲವ ತರುವೆ
ದಯೆ ತೋರು ಓ ನನ್ನ ಚೆಲುವೇ|
ಬಳಲಿ ಬಾಯಾರಿ ಬಂದಿರುವೆ
ಪ್ರೇಮ ಸುಧೆಯ ನೀಡೆಯಾ ಒಲವೇ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿರಿ ಕಥೆ
Next post ಚೈತನ್ಯ ಧಾಮ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…