ಚೈತನ್ಯ ಧಾಮ

ಹರಿಯೆ ನಿನ್ನ ನಂಬಿ ನಾನು ಬಾಳಿಹೆನು
ನನ್ನ ನೀನು ಕೈ ಹಿಡಿದು ನಡೆಸು ಬಾ
ನಿನ್ನ ತೊರೆದು ನಿನ್ನ ಮಾಯೆ ಬೇಡೆನಗೆ
ನಾನು ನಡೆದಲಿ ನೀನು ಜೊತೆಯಾಗಿ ಬಾ

ನೀನು ಕರುಣಾಸಿಂಧು ದಯಾಸಾಗರ
ನಿನ್ನೊಳಗೆ ಎಲ್ಲಿಹದು ಭೇದ ತಾರತಮ್ಯ
ಪಾಪಿಯಾಗಲಿ ದುರಾಚಾರಯಾಗಿರಲಿ
ಸಜ್ಜನರೆಲ್ಲರಿಗೂ ನಿನ್ನ ಕೃಪೆ ಅದಮ್ಯ

ನೀನು ರಚಿಸಿದೆ ಈ ಭವಸಾಗರ ಆಗರ
ನಿತ್ಯ ನಾನು ಇದರಲ್ಲಿ ಮುಳುಗಿ ತೇಲಿಹನು
ನಿನ್ನ ಪ್ರೀತಿಯೆಂಬ ನಾವೆ ನೀಡಿ ಎನ್ನ
ಬದುಕಿಸಬೇಕು ನೊಂದು ಬೆಂದಿಹನು

ಎನ್ನೆದೆಯಲಿ ಪುಟಿಯಲಿ ನಿನ್ನಪಡೆ ದಾಹ
ಅರೆಗಳಿಗೆ ನಿನ್ನ ಮರೆತು ನಾ ಬಾಳದಿರಲಿ
ನಿನ್ನ ರೂಪ ಎನ್ನ ಕಂಗಳಲ್ಲಿ ತುಂಬಿರಲಿ
ಮಾಣಿಕ್ಯ ವಿಠಲನಿಗೆ ಚೈತನ್ಯ ಧಾಮವಾಗಿರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನವಾಗಿಯೇ ಏಕೆ?
Next post ಧಾರವಾಡದ ಅಶ್ವರತ್ನ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…