ನನ್ನೊಳಗೆ

ಅನಿರೀಕ್ಷಿತವಾಗಿ ಮಾಡಿದ ಭಾಷಣ,
ವರ್ಷಗಳ ಅನಂತರ ಮಾಡಿದ ನಾಟಕ,
ಆಶು ಭಾಷಣ ಸ್ಪರ್ಧೆಯಲ್ಲಿ ಗಳಿಸಿದ ಬಹುಮಾನ
ಟ್ರೈನಿಂಗ್‌ಗೆ ಹೋಗಿದ್ದಾಗ ಮಾಡಿದ ಉಪನ್ಯಾಸ
ಇವೆಲ್ಲ ಕಂಡಾಗ ಕ್ಷಣ ಹೊತ್ತು ಅನಿಸಿತ್ತು
ನನ್ನೊಳಗಿನ ಕಲಾವಿದ ಇನ್ನೂ ಇದ್ದಾನೆ ಜೀವಂತ.
ಮನೆ ಕಟ್ಟಿಸುವಾಗ ಕಂಟ್ರಾಕ್ಟರ್‌ನೊಂದಿಗೆ ಮಾತುಕತೆ
ತಾಂತ್ರಿಕ, ಆರ್ಥಿಕ ವಿಷಯಗಳ ವಾದ-ವಿವಾದಗಳು
ಹಲವು ಹತ್ತು ಚರ್ಚೆಗಳು, ಚೌಕಾಸಿಗಳು.
ಆ ಸಮಯದಲ್ಲಿ ಅವನು ಹೇಳಿದ್ದ
‘ನೀವು ಸಿವಿಲ್ ಇಂಜಿನಿಯರ್ ಆಗಬೇಕಿತ್ತು’.
ಹಾಗೇನಿಲ್ಲ ಬಿಡಿ, ಆಯಾ ಸಂದರ್ಭಗಳಲ್ಲಿ
ನನ್ನೊಳಗಿನ ಇಂಜಿನಿಯರು, ಲಾಯರು, ಮಾರ್ವಾಡಿ
ಜಾಗೃತರಾಗಿ ತಮ್ಮ ಭೂಮಿಕೆ ನಿಭಾಯಿಸಿದರು.
ಒಮ್ಮೊಮ್ಮೆ ಕೆಲವು ನಯವಂಚಕರ ಕಂಡಾಗ
ವಿಪರೀತ ಸಿಟ್ಟು ನೆತ್ತಿಗೇರಿ, ಕತ್ತಿ ಹಿರಿದು,
ಕತ್ತು ಕತ್ತರಿಸಿ, ನೆತ್ತರು ಹರಿಸಿ…
ಇನ್ನೂ ಏನೇನೋ ಮಾಡಿ ಮುಗಿಸಬೇಕೆನಿಸುತ್ತದೆ.
ಮತ್ತೊಮ್ಮೆ ಶಾಂತವಾಗಿ, ಎಲ್ಲ ತೊರೆದು
ಸಂತನಾಗಿ, ದೂರ ಸಾಗಬೇಕೆನಿಸುತ್ತದೆ.
ನನ್ನೊಳಗೆ ಒಬ್ಬ ವೀರನೋ, ಕೊಲೆಗಾರನೋ,
ಸನ್ಯಾಸಿಯೋ, ಸಮಾಜ ಸುಧಾರಕನೋ,
ಎಷ್ಟೆಲ್ಲ ಮಂದಿ ಮನೆ ಮಾಡಿದ್ದಾರೆ
ಈ ನನ್ನ ಮನ ಮಂದಿರದಲ್ಲಿ!
ಕಾಲ ಕಾಲಕ್ಕೆ ಕಾಣಿಸಿಕೊಳ್ಳುತ್ತಾರೆ
ಕಾರ್ಯ ನಿರ್ವಹಿಸಿ ಕಾಣೆಯಾಗುತ್ತಾರೆ!
ಈ ಎಲ್ಲ ಗುಣ ಪುರುಷರ ಆಗರ,
ಆಗಲಿ ನನ್ನ ಮನ ಶಾಂತ ಸಾಗರ.
*****
೨೬-೧೧-೧೯೯೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಾಣಗೆರೆಯವರ ‘ಅವತಾರ ಪುರುಷ’
Next post ಅಜ್ಞಾನಿ

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…