ಅಜ್ಞಾನಿ

ನಾನು ಎನ್ನುವ ಅಹಂಕಾರವು
ನಿನ್ನೊಳಗೇ ಮನೆ ಮಾಡಿರಲು
ಮರೆತೆ ನೀ ನಿನ್ನವರನ್ನ
ಮರೆತೆ ನೀ ಎಲ್ಲವನ್ನ…

ಹುಸಿ ಕೋಪ ತರವಲ್ಲ ಮನದಿ
ನಿತ್ಯ ಮನತಾಪ ಸರಿಯಲ್ಲ
ಕೋಪದಾ ಮೂಲ ಕೊಲ್ಲುವುದು ನಿನ್ನ
ಅದನ್ನು ಅರಿತರೆ ನಿನ್ನ ಬಾಳು ಚೆನ್ನ.

ದ್ವೇಷದಿಂದ ದ್ವೇಷ ಹುಟ್ಟುವುದು
ಅದರಿಂದ ಸಾಧಿಸುವೆ ನೀ ಏನನ್ನ
ಯಾರಾದರೇನಂತೆ ಎಲ್ಲರೂ ನಮ್ಮವರೆ
ಎನ್ನುವ ಪ್ರೀತಿಯಲಿ ನೀ ನೋಡು ಜಗವನ್ನ.

ಬಂದವರು ಬಂದಿಹೆವು ಈ ಜಗಕೆ
ಕೊಂಡೊಯ್ಯುವುದು ಏನಿಲ್ಲ ಕೊನೆಗೆ
ಬಿಟ್ಟು ತೆರಳಬೇಕು ಬಾಳ ಬರಿಗೈಲಿ
ನಿನ್ನ ನೆನಪಾದರೂ ಉಳಿಯಲಿ ಈ ಭುವಿಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನೊಳಗೆ
Next post ಕನಸು

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys