ಈ ನನ್ನ ದೇಹದ
ಎಲ್ಲ ಅವಯವಗಳು
ಒಂದೇ ಆದರೂ
ನಾ ದುಡಿಯುವುದು
ಹೊಟ್ಟೆ-ನಿನ್ನ ತುಂಬಿಸಲು
ಈ ನನ್ನ ಕಾರ್ಯದಲ್ಲಿ
ಮರೆತೆ ಬುದ್ಧಿ ಬೆಳೆಸಲು.
ಬೆನ್ನಿಗಂಟಿದ ಹೊಟ್ಟೆ
ನಿನ್ನ ಮುಂದೆ ತರಲು
ನಾ ಪಟ್ಟ ಪಾಡೇನು?
ಅದಕ್ಕಾಗಿ ನಾನೇನು
ಬೇಕಾದರೂ ಮಾಡೇನು.
ನಿನ್ನ ತುಂಬಿಸಲು
ದುಡಿದ ಫಲದಿಂದ
ತುಂಬಿತು ಮನೆ
ಸಿರಿ ಸಂಪದದಿಂದ!
ಸಿಕ್ಕಿದ್ದನೆಲ್ಲಾ ತಿಂದು
ಹೊಟ್ಟೆ ನಿನ್ನ ತುಂಬಿಸಿದೆ
ಗುಡಾಣದಂತೆ ಬೆಳೆಸಿದೆ
ಈಗದನ್ನು ಕರಗಿಸುವುದೇ
ನನಗೆ ದೊಡ್ಡ ಸಮಸ್ಯೆಯಾಗಿದೆ!
ಆಹಾರ, ಪಾನೀಯ ಮಾತ್ರವಲ್ಲ,
ಇತರರು ಮಾಡಿದ ತಪ್ಪನ್ನೆಲ್ಲಾ
ಹೊಟ್ಟೆಗೆ ಹಾಕಿಕೊಂಡೆ
ಕ್ಷಮಾಗುಣ ಸಂಪನ್ನ
ಎಂಬ ಗೌರವ ಪಡೆದುಕೊಂಡೆ.
ಹೊಟ್ಟೆ, ನನ್ನ-ನಿನ್ನ ಸಂಬಂಧ
ಜನುಮ ಜನುಮಗಳ ಅನುಬಂಧ
ಹುಟ್ಟುವುದಕ್ಕೆ ಮುಂಚೆ
ನಾನಿದ್ದುದೇ ಹೊಟ್ಟೆಯಲ್ಲಿ
ಮರಣಾನಂತರ ಮತ್ತೆ
ನಾ ಹೋಗಿ ಸೇರುವುದು
ಭೂ ತಾಯ ಹೊಟ್ಟೆಯಲ್ಲಿ.
*****
೧೬-೦೬-೧೯೯೨
Related Post
ಸಣ್ಣ ಕತೆ
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…