ಪಾಪಿಯೂ – ಅರಿಕೆ

ಪಾಪಿಯೂ – ಅರಿಕೆ

“ಚಕ್ಖುಪಾಲ ಮಹಾತೇರ” ಮತ್ತು “ಪಾಪಿ”ಯ ಮೂಲ ಬುದ್ಧಘೋಷನ ಜಾತಕ ಕತೆಗಳು (ಬರ್‍ಮಿ ಭಾಷೆಯಿಂದ ಇಂಗ್ಲೀಷಿಗೆ ಕ್ಯಾಪ್ಟನ್ ಟಿ. ರೋಜರ್ಸ್), “ಜುಲೇಖ”, “ರುದಾಕಿ” ಮತ್ತು “ಫಿರ್ದೌಸಿ”ಯು ಹಿಂದೆ ಅರಬ್ಬಿ ಮತ್ತು ಪರ್ಶಿಯನ್ ಸಾಹಿತ್ಯದ ವಿವಿಧ ಕೃತಿಗಳಿವೆ. “ಸುಲೇಮಾನ”ದ ಹಲವು ವಿವರಗಳನ್ನು ಬೈಬಲಿನ ಹಳೆ ಒಡಂಬಡಿಕೆ, ಆಂದ್ರೆ ಮಾಲ್ರೋನ Anti-Memoirs ಮತ್ತು ಐಸಾಕ್ ರೋಸೆನ್ ಫೀಲ್ಡನ ಸಣ್ಣ ಕತೆಯೊಂದರಿಂದ ತೆಗೆದುಕೊಳ್ಳಲಾಗಿದೆ. ರಿಸರ್ಡ್ ಹ್ಯಾರಿಸ್‌ನ Death of a Revolutionary ಎಂಬ ಪುಸ್ತಕ “ಬೊಲೀವಿಯಾದಲ್ಲಿ ಚೆ”ಯ ರಚನೆಗೆ ಕಾರಣ. “ಇಮಾಂ ಬಾರಾ”ಕ್ಕೆ ವಿವರಗಳನ್ನೊದಗಿಸಿದ್ದು ಅಬ್ದುಲ್ ಹಲೀಮ್ ಶರಾರರ Lucknow : The Last phase of an Oriental Culture (ಇಂಗ್ಲೀಷಿಗೆ ಇ ಎಸ್. ಹಾರ್ಕೋರ್ಟ್ ಮತ್ತು ಫಕೀರ್ ಹುಸೇನ್) ಎಂಬ ಕೃತಿ. “ರುಗ್ಣ ಯಾಕುಬ”, “ದೇವರು ದೊಡ್ಡವ”, “ಅಲ್ಲಾ ನಿದ್ರಿಸುತಾನೆ ಇಲ್ಲಾ”, “ಖೂನಿ”, “ಬಾಲ್ತ ಸ್ಹಾರ್! ಬಾಲ್ತ ಸ್ಹಾರ್!” ಮತ್ತು “ಜೂಲಿಯಾನ” ಅರ್ಜೆಂಟೀನಾದ ಸಾಹಿತಿ ಜೋರ್ಜ್ ಲೂಯಿ ಬೋರ್‍ಹೆಸ್‌ನ ಕತೆಗಳನ್ನೋದಿ ಬರೆದುವು. ಈ ಕವಿತೆಗಳನ್ನು ಬರೆಯುವಾಗ ಆಗತ್ಯವೆನಿಸಿದ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. “ರುದಾಕಿ” ಕವಿತೆಯಲ್ಲಿ ಬರುವ ನಾವಿಕನ ಕತೆಗೆ ಆಧಾರ ನನ್ನದೇ ಕಿರುಕಾದಂಬರಿ ಅನೇಕ. ಇಲ್ಲಿಯೂ ಕತೆ ವ್ಯತ್ಯಾಸಗೊಂಡಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸು(ಅ)ಮಂಗಲೆ
Next post ಹೊಟ್ಟೆ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…