ಸು(ಅ)ಮಂಗಲೆ

ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು
ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು
ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ
ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ
ಗರತಿ ನಿನಗೇತಕೆ ಈ ದುಸ್ಥಿತಿ?

ಮೂಡಣದಿ ಸೂರ್ಯ ಮೂಡುವ ಮುನ್ನ ನೀ ಎದ್ದೆ
ಮನೆ ಮಲಗುವ ತನಕ ಬದುಕ ಸಾಗಿಸುತ ನೀ ಬಂದೆ
ಬಣ್ಣದ ಬದುಕಿನ ಜೊತೆ ಬವಣೆಗಳ ಸಹಿಸುತ
ಸಂಸಾರ ರಥ ಸಾಗಿಸುವ ಕಡೆಗೀಲು ನೀನಂತೆ
ಗರತಿ ನಿನಗೇತಕೆ ಈ ದುಸ್ಥಿತಿ?

ಮುಹೂರ್ತಗಳಿಗೆಲ್ಲ ಸುಮಂಗಲೆಯರೇ ಭೂಷಣ
ಮಹಿಳೆಯರಿಲ್ಲದೇ ಕಾರಣಗಳೆಲ್ಲ ಭಣ ಭಣ
ಪತಿ ಬದುಕಿದ್ದ ಮಹಿಳೆಯರಿಗಷ್ಟೇ ಆಮಂತ್ರಣ
ವಿಧವೆಯರಿಗೆ ಹಾಕಿರುವರಲ್ಲ ನಾನಾ ನಿಯಂತ್ರಣ
ಗರತಿ ನಿನಗೇತಕೆ ಈ ದುಸ್ಥಿತಿ?

ಮಂಗಳ ಕಾರ್ಯಗಳಿಗೆ ಸುಮಂಗಲಿಯರೆ ಮೀಸಲಂತೆ
ಮಾಂಗಲ್ಯ ಇಲ್ಲದ ಮಹಿಳೆಯರೆಲ್ಲ ಅಮಂಗಳವಂತೆ
ಪತಿ ಇಲ್ಲದಿರೆ ಆರತಿಯೂ ನೀ ಬೆಳಗ ಬಾರದಂತೆ
ಈ ಕಟ್ಟುಪಾಡುಗಳೆಲ್ಲ ನಿನ್ನ ಕೊರಳಿಗೆ ಮೀಸಲಂತೆ
ಗರತಿ ನಿನಗೇತಕೆ ಈ ದುಸ್ಥಿತಿ?

ಮಲ್ಲಿಗೆ ಮುಡಿಗಿಲ್ಲದಿರೆ ಕೋಮಲೆ ನೀನಲ್ಲವೇನು?
ಕುಂಕುಮವು ಹಣೆಗಿಲ್ಲದಿರೆ ಕರುಣೆಯು ಬಾರದೇನು?
ಮಾಂಗಲ್ಯವಿಲ್ಲ ಎಂದರೆ ಮಮತೆಯು ಇಲ್ಲವೇನು?
ಕೈ ಬಳೆಗಳಿಲ್ಲದಿರೆ ಕೈ ಹಿಡಿದು ನಡೆಸಲಾರಳೇನು?
ಕಾಲುಂಗುರಗಳಿಲ್ಲದಿರೆ ನಮ್ಮ ಕಾಯ ಲಾರಳೇನು?
ಸರಿ ಹೋಗಲಾರದೇ ಗರತಿ ನಿನ್ನಯ ಸ್ಥಿತಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೫
Next post ಪಾಪಿಯೂ – ಅರಿಕೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys