Home / ಕವನ / ಕವಿತೆ / ಸು(ಅ)ಮಂಗಲೆ

ಸು(ಅ)ಮಂಗಲೆ

ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು
ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು
ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ
ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ
ಗರತಿ ನಿನಗೇತಕೆ ಈ ದುಸ್ಥಿತಿ?

ಮೂಡಣದಿ ಸೂರ್ಯ ಮೂಡುವ ಮುನ್ನ ನೀ ಎದ್ದೆ
ಮನೆ ಮಲಗುವ ತನಕ ಬದುಕ ಸಾಗಿಸುತ ನೀ ಬಂದೆ
ಬಣ್ಣದ ಬದುಕಿನ ಜೊತೆ ಬವಣೆಗಳ ಸಹಿಸುತ
ಸಂಸಾರ ರಥ ಸಾಗಿಸುವ ಕಡೆಗೀಲು ನೀನಂತೆ
ಗರತಿ ನಿನಗೇತಕೆ ಈ ದುಸ್ಥಿತಿ?

ಮುಹೂರ್ತಗಳಿಗೆಲ್ಲ ಸುಮಂಗಲೆಯರೇ ಭೂಷಣ
ಮಹಿಳೆಯರಿಲ್ಲದೇ ಕಾರಣಗಳೆಲ್ಲ ಭಣ ಭಣ
ಪತಿ ಬದುಕಿದ್ದ ಮಹಿಳೆಯರಿಗಷ್ಟೇ ಆಮಂತ್ರಣ
ವಿಧವೆಯರಿಗೆ ಹಾಕಿರುವರಲ್ಲ ನಾನಾ ನಿಯಂತ್ರಣ
ಗರತಿ ನಿನಗೇತಕೆ ಈ ದುಸ್ಥಿತಿ?

ಮಂಗಳ ಕಾರ್ಯಗಳಿಗೆ ಸುಮಂಗಲಿಯರೆ ಮೀಸಲಂತೆ
ಮಾಂಗಲ್ಯ ಇಲ್ಲದ ಮಹಿಳೆಯರೆಲ್ಲ ಅಮಂಗಳವಂತೆ
ಪತಿ ಇಲ್ಲದಿರೆ ಆರತಿಯೂ ನೀ ಬೆಳಗ ಬಾರದಂತೆ
ಈ ಕಟ್ಟುಪಾಡುಗಳೆಲ್ಲ ನಿನ್ನ ಕೊರಳಿಗೆ ಮೀಸಲಂತೆ
ಗರತಿ ನಿನಗೇತಕೆ ಈ ದುಸ್ಥಿತಿ?

ಮಲ್ಲಿಗೆ ಮುಡಿಗಿಲ್ಲದಿರೆ ಕೋಮಲೆ ನೀನಲ್ಲವೇನು?
ಕುಂಕುಮವು ಹಣೆಗಿಲ್ಲದಿರೆ ಕರುಣೆಯು ಬಾರದೇನು?
ಮಾಂಗಲ್ಯವಿಲ್ಲ ಎಂದರೆ ಮಮತೆಯು ಇಲ್ಲವೇನು?
ಕೈ ಬಳೆಗಳಿಲ್ಲದಿರೆ ಕೈ ಹಿಡಿದು ನಡೆಸಲಾರಳೇನು?
ಕಾಲುಂಗುರಗಳಿಲ್ಲದಿರೆ ನಮ್ಮ ಕಾಯ ಲಾರಳೇನು?
ಸರಿ ಹೋಗಲಾರದೇ ಗರತಿ ನಿನ್ನಯ ಸ್ಥಿತಿ?
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...