Home / ಕವನ / ಕವಿತೆ / ಆಚೆಗಿನ ಕೂಗು !

ಆಚೆಗಿನ ಕೂಗು !

ಸಾಗರದ ಆಚೆಗಿನ ಕೂಗೊಂದು ಕೇಳುತಿದೆ
ಆರದೋ ಏನೊ? ಯಾರಕರೆಯುತಿಹುದೇನೊ ?
ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ
ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ?

ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ?
ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳೂ ಇಲ್ಲ !
ನನಗಾಗಿಯೊ ಇನ್ನಾರಿಗೋ ಯಾರ ಇಚ್ಚೆಯಲಿ ?
ಈಗೇಕೆ ಈ ಮಧ್ಯ; ಮೌನವಾವರಿಸಿಹುದಲ್ಲ !

ಹಕ್ಕಿ ಹೊರಗಿಲ್ಲ; ನಿಶೆಯು ಹೆದರಿಲ್ಲ; ನಿಶ್ಯಬ್ದ !
ನೆಲದ ಮೇಲಲ್ಲಿ; ಬಾನಬಯಲಲ್ಲಿ; ಸಾಗರದ ಜಲದಲ್ಲಿ
ಮಸಣ ಶಾಂತಿಯ ಕುರುಡು ಕುರುಹಾದ ನಿಶ್ಯಬ್ದ !
ಧರೆ ಹಿರಿದು ಇರುವಾಗ ಕುರುಡಿನಲಿ ಕಿರಿದಾಗಿಹುದಿಲ್ಲಿ

ನನ್ನ ಕಂಡಿತೋ ಏನೊ ಕಾರಿರುಳ ಕತ್ತಲೆಯ ಕಣ್ಣು
ಅಲ್ಲ ನಿಜವಲ್ಲ; ಇರಬಹುದು ಆಂತರ್ಯ ಅವ್ಯಕ್ತ ಜ್ಯೋತಿ
ಸನಿಯದಲ್ಲಿಲ್ಲ; ಬಹುದೂರ. ಕಾಣದಾಗಿವೆ ಕಣ್ಣು
ಕರುಣೆ ಕರೆಯುವ ಅಕ್ಕರೆಯ ತಾಯಕರುಳ ಆತುರ ದ್ಯೋತಿ

ಎಲ್ಲಿಗೋ ಮುಳುಗಿಹೆನು; ಇರುವ ಅರುವಿಲ್ಲ
ಮನ ವಿಶ್ವದಲ್ಲಿ ಕಾರಿರುಳ ಸಾಗರದ ಆಳದಲಿ ಮುಳುಗಿಹೆನು
ಆ ಕೂಗು ಕೂಗಲ್ಲ; ಭಾಗ್ಯ ಕರೆ ಇರಬಹುದಲ್ಲ?
ದಾರಿ ತೋರುವ ಕೂಗು; ನನ್ನಿರವಿನ ಸತ್ಯ ಕೂಗು! ಓಗೊಡಲೇನು?

ನಂಬುವೆನು ನನಗಿರುವ ನನ್ನ ತಾಯ ಕರುಳು
ಅಜ್ಞಾತ; ಅರಿವಿಲ್ಲ! ಧ್ವನಿಯತ್ತ ನಡೆದು ಕೂಡುವೆ ಮೊದಲು
ಹಸಿದೊಡಲಿಗದೋ ಮೃಷ್ಟಾನ್ನ! ಮರೆದರೆ ಮರುಳು
ನಿಜಕು ಆ ಮಾತೆ ಜಗನ್ಮಾತೆ ದಿವ್ಯಮಾತೆ; ನಡೆ ಮೊದಲು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...