Home / ಕವನ / ಕವಿತೆ / ಆಚೆಗಿನ ಕೂಗು !

ಆಚೆಗಿನ ಕೂಗು !

ಸಾಗರದ ಆಚೆಗಿನ ಕೂಗೊಂದು ಕೇಳುತಿದೆ
ಆರದೋ ಏನೊ? ಯಾರಕರೆಯುತಿಹುದೇನೊ ?
ತೆರೆಯ ಮೇಲೇರಿ ಬೀಸುಗಾಳಿಯಲಿ ಈಸುತಿದೆ
ಬರುತಿದೆ; ಬಿಡದೆ ಬರುತಿದೆ; ಮುಗಿಯಲಿಲ್ಲವೇನೋ ?

ಆರಕೂಗಾರ ಕರೆಗಾಗಿರಬಹುದೀ ಕಾರಿರುಳಿನಲಿ ?
ಮುಗಿಲ ಮಾಳಿಗೆಯಲಿ ಮಿನುಗು ಚುಕ್ಕೆಗಳೂ ಇಲ್ಲ !
ನನಗಾಗಿಯೊ ಇನ್ನಾರಿಗೋ ಯಾರ ಇಚ್ಚೆಯಲಿ ?
ಈಗೇಕೆ ಈ ಮಧ್ಯ; ಮೌನವಾವರಿಸಿಹುದಲ್ಲ !

ಹಕ್ಕಿ ಹೊರಗಿಲ್ಲ; ನಿಶೆಯು ಹೆದರಿಲ್ಲ; ನಿಶ್ಯಬ್ದ !
ನೆಲದ ಮೇಲಲ್ಲಿ; ಬಾನಬಯಲಲ್ಲಿ; ಸಾಗರದ ಜಲದಲ್ಲಿ
ಮಸಣ ಶಾಂತಿಯ ಕುರುಡು ಕುರುಹಾದ ನಿಶ್ಯಬ್ದ !
ಧರೆ ಹಿರಿದು ಇರುವಾಗ ಕುರುಡಿನಲಿ ಕಿರಿದಾಗಿಹುದಿಲ್ಲಿ

ನನ್ನ ಕಂಡಿತೋ ಏನೊ ಕಾರಿರುಳ ಕತ್ತಲೆಯ ಕಣ್ಣು
ಅಲ್ಲ ನಿಜವಲ್ಲ; ಇರಬಹುದು ಆಂತರ್ಯ ಅವ್ಯಕ್ತ ಜ್ಯೋತಿ
ಸನಿಯದಲ್ಲಿಲ್ಲ; ಬಹುದೂರ. ಕಾಣದಾಗಿವೆ ಕಣ್ಣು
ಕರುಣೆ ಕರೆಯುವ ಅಕ್ಕರೆಯ ತಾಯಕರುಳ ಆತುರ ದ್ಯೋತಿ

ಎಲ್ಲಿಗೋ ಮುಳುಗಿಹೆನು; ಇರುವ ಅರುವಿಲ್ಲ
ಮನ ವಿಶ್ವದಲ್ಲಿ ಕಾರಿರುಳ ಸಾಗರದ ಆಳದಲಿ ಮುಳುಗಿಹೆನು
ಆ ಕೂಗು ಕೂಗಲ್ಲ; ಭಾಗ್ಯ ಕರೆ ಇರಬಹುದಲ್ಲ?
ದಾರಿ ತೋರುವ ಕೂಗು; ನನ್ನಿರವಿನ ಸತ್ಯ ಕೂಗು! ಓಗೊಡಲೇನು?

ನಂಬುವೆನು ನನಗಿರುವ ನನ್ನ ತಾಯ ಕರುಳು
ಅಜ್ಞಾತ; ಅರಿವಿಲ್ಲ! ಧ್ವನಿಯತ್ತ ನಡೆದು ಕೂಡುವೆ ಮೊದಲು
ಹಸಿದೊಡಲಿಗದೋ ಮೃಷ್ಟಾನ್ನ! ಮರೆದರೆ ಮರುಳು
ನಿಜಕು ಆ ಮಾತೆ ಜಗನ್ಮಾತೆ ದಿವ್ಯಮಾತೆ; ನಡೆ ಮೊದಲು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...