ಮತ್ತೇರಿಸುವ ಗಾನದ
ನಶೆ ಏರಿಸುವ ಪಾನದ
ಕನಸಿನ ಲೋಕದಲ್ಲಿ
ಉನ್ಮತ್ತರಾಗಿ
ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
ನರ್ತಿಸದೆ
ಇನ್ನೇನು ಮಾಡಿಯಾರು ?
ಕಪ್ಪ ಕೊಡದೆ
ಬಾಚಿ ಗಳಿಸಿದ್ದಾರೆ
ಕಪ್ಪು ಹಣದ ಒಡೆಯರು.
ತಿಂದು ಕುಡಿದು
ಚೆಲ್ಲುತ್ತಿದ್ದಾರೆ
ಉತ್ತು ಬಿತ್ತದ ಧನಿಕರು
ಸತ್ತ ತಿರುಕರ ಕಂಡು
ಗಹಗಹಿಸಿ ನಗುತ್ತಿದ್ದಾರೆ
ಕಷ್ಟ ಅರಿಯದ ಮೂಢರು.
ಕಾಲ ಕೆಳಗೆ
ಸಿಕ್ಕವರ ತುಳಿಯುತ್ತಾ
ಮತ್ತು ಹೆಚ್ಚಾಗಿ
ನಗುತ್ತಾ ಹುಚ್ಚುಚ್ಚಾಗಿ
ನೊಂದವರ ಮೇಲೆ ಕೈಗೆ ಸಿಕ್ಕಿದ್ದನೆಲ್ಲಾ
ಎಸೆಯುತ್ತಿದ್ದಾರೆ ಜಾಣರು!
ಕಲ್ಲು ಒಡೆದು
ರಾಶಿ ಪೇರಿಸಿ
ಕೂಲಿ ಕಾಣದೆ ಹಸಿದು
ನೊಂದು ಕ್ರುದ್ಧರಾಗಿ
ಕುಳಿತವರ ಕೈಲಿ
ಕಲ್ಲಿದೆ ಎಂಬುದ
ಮರೆತು ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
*****
೧೮-೦೯-೧೯೯೨
Related Post
ಸಣ್ಣ ಕತೆ
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಮಂಜುಳ ಗಾನ
ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
-
ಮನೆಮನೆಯ ಸಮಾಚಾರ
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…