ಗಾಜಿನ ಮನೆಯವರು

ಮತ್ತೇರಿಸುವ ಗಾನದ
ನಶೆ ಏರಿಸುವ ಪಾನದ
ಕನಸಿನ ಲೋಕದಲ್ಲಿ
ಉನ್ಮತ್ತರಾಗಿ
ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
ನರ್ತಿಸದೆ
ಇನ್ನೇನು ಮಾಡಿಯಾರು ?
ಕಪ್ಪ ಕೊಡದೆ
ಬಾಚಿ ಗಳಿಸಿದ್ದಾರೆ
ಕಪ್ಪು ಹಣದ ಒಡೆಯರು.
ತಿಂದು ಕುಡಿದು
ಚೆಲ್ಲುತ್ತಿದ್ದಾರೆ
ಉತ್ತು ಬಿತ್ತದ ಧನಿಕರು
ಸತ್ತ ತಿರುಕರ ಕಂಡು
ಗಹಗಹಿಸಿ ನಗುತ್ತಿದ್ದಾರೆ
ಕಷ್ಟ ಅರಿಯದ ಮೂಢರು.
ಕಾಲ ಕೆಳಗೆ
ಸಿಕ್ಕವರ ತುಳಿಯುತ್ತಾ
ಮತ್ತು ಹೆಚ್ಚಾಗಿ
ನಗುತ್ತಾ ಹುಚ್ಚುಚ್ಚಾಗಿ
ನೊಂದವರ ಮೇಲೆ ಕೈಗೆ ಸಿಕ್ಕಿದ್ದನೆಲ್ಲಾ
ಎಸೆಯುತ್ತಿದ್ದಾರೆ ಜಾಣರು!
ಕಲ್ಲು ಒಡೆದು
ರಾಶಿ ಪೇರಿಸಿ
ಕೂಲಿ ಕಾಣದೆ ಹಸಿದು
ನೊಂದು ಕ್ರುದ್ಧರಾಗಿ
ಕುಳಿತವರ ಕೈಲಿ
ಕಲ್ಲಿದೆ ಎಂಬುದ
ಮರೆತು ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
*****
೧೮-೦೯-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ
Next post ನಮ್ಮ ದೇವರು

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…