ಗಾಜಿನ ಮನೆಯವರು

ಮತ್ತೇರಿಸುವ ಗಾನದ
ನಶೆ ಏರಿಸುವ ಪಾನದ
ಕನಸಿನ ಲೋಕದಲ್ಲಿ
ಉನ್ಮತ್ತರಾಗಿ
ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
ನರ್ತಿಸದೆ
ಇನ್ನೇನು ಮಾಡಿಯಾರು ?
ಕಪ್ಪ ಕೊಡದೆ
ಬಾಚಿ ಗಳಿಸಿದ್ದಾರೆ
ಕಪ್ಪು ಹಣದ ಒಡೆಯರು.
ತಿಂದು ಕುಡಿದು
ಚೆಲ್ಲುತ್ತಿದ್ದಾರೆ
ಉತ್ತು ಬಿತ್ತದ ಧನಿಕರು
ಸತ್ತ ತಿರುಕರ ಕಂಡು
ಗಹಗಹಿಸಿ ನಗುತ್ತಿದ್ದಾರೆ
ಕಷ್ಟ ಅರಿಯದ ಮೂಢರು.
ಕಾಲ ಕೆಳಗೆ
ಸಿಕ್ಕವರ ತುಳಿಯುತ್ತಾ
ಮತ್ತು ಹೆಚ್ಚಾಗಿ
ನಗುತ್ತಾ ಹುಚ್ಚುಚ್ಚಾಗಿ
ನೊಂದವರ ಮೇಲೆ ಕೈಗೆ ಸಿಕ್ಕಿದ್ದನೆಲ್ಲಾ
ಎಸೆಯುತ್ತಿದ್ದಾರೆ ಜಾಣರು!
ಕಲ್ಲು ಒಡೆದು
ರಾಶಿ ಪೇರಿಸಿ
ಕೂಲಿ ಕಾಣದೆ ಹಸಿದು
ನೊಂದು ಕ್ರುದ್ಧರಾಗಿ
ಕುಳಿತವರ ಕೈಲಿ
ಕಲ್ಲಿದೆ ಎಂಬುದ
ಮರೆತು ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
*****
೧೮-೦೯-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ
Next post ನಮ್ಮ ದೇವರು

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…