ಮತ್ತೇರಿಸುವ ಗಾನದ
ನಶೆ ಏರಿಸುವ ಪಾನದ
ಕನಸಿನ ಲೋಕದಲ್ಲಿ
ಉನ್ಮತ್ತರಾಗಿ
ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
ನರ್ತಿಸದೆ
ಇನ್ನೇನು ಮಾಡಿಯಾರು ?
ಕಪ್ಪ ಕೊಡದೆ
ಬಾಚಿ ಗಳಿಸಿದ್ದಾರೆ
ಕಪ್ಪು ಹಣದ ಒಡೆಯರು.
ತಿಂದು ಕುಡಿದು
ಚೆಲ್ಲುತ್ತಿದ್ದಾರೆ
ಉತ್ತು ಬಿತ್ತದ ಧನಿಕರು
ಸತ್ತ ತಿರುಕರ ಕಂಡು
ಗಹಗಹಿಸಿ ನಗುತ್ತಿದ್ದಾರೆ
ಕಷ್ಟ ಅರಿಯದ ಮೂಢರು.
ಕಾಲ ಕೆಳಗೆ
ಸಿಕ್ಕವರ ತುಳಿಯುತ್ತಾ
ಮತ್ತು ಹೆಚ್ಚಾಗಿ
ನಗುತ್ತಾ ಹುಚ್ಚುಚ್ಚಾಗಿ
ನೊಂದವರ ಮೇಲೆ ಕೈಗೆ ಸಿಕ್ಕಿದ್ದನೆಲ್ಲಾ
ಎಸೆಯುತ್ತಿದ್ದಾರೆ ಜಾಣರು!
ಕಲ್ಲು ಒಡೆದು
ರಾಶಿ ಪೇರಿಸಿ
ಕೂಲಿ ಕಾಣದೆ ಹಸಿದು
ನೊಂದು ಕ್ರುದ್ಧರಾಗಿ
ಕುಳಿತವರ ಕೈಲಿ
ಕಲ್ಲಿದೆ ಎಂಬುದ
ಮರೆತು ನರ್ತಿಸುತ್ತಿದ್ದಾರೆ
ಗಾಜಿನ ಮನೆಯವರು.
*****
೧೮-೦೯-೧೯೯೨
Related Post
ಸಣ್ಣ ಕತೆ
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
-
ಎರಡು ಪರಿವಾರಗಳು
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…