ನಮ್ಮ ದೇವರು

ಕರ ಮುಗಿದು ಬೇಡುವೆನು ನಿನಗೆ
ಹರಸು ಬಾರಮ್ಮ ಭೂಮಿ ತಾಯೇ
ಮುನಿಸಿಕೊಳ್ಳದಿರು ಅನವರತ
ನೀ ನಮ್ಮ ಜೀವದಾತೆ.

ಲೆಕ್ಕವಿಲ್ಲದ ದೇವರುಗಳೆಲ್ಲ
ನಿನ್ನ ತೆಕ್ಕೆಯಲ್ಲಿ ಬೆಳೆದವರು
ಯಾವ ದೇವರು ಕೊಡದಿರುವ
ಕಾಣಿಕೆಗಳನ್ನು ನಿನ್ನಿಂದಲೇ ಪಡೆದಿಹೆವು.

ಮುಕ್ಕೋಟಿ ದೇವರುಗಳು ಮುನಿಸಿಕೊಂಡರೂ
ನಾವು ಬದುಕಿ ಬಾಳ ಬಲ್ಲೆವು
ನೀನು ಮುನಿದು ಕೋಪಿಸಿಕೊಂಡರೆ
ಬದುಕಿ ಉಳಿಯಬಲ್ಲೆವೇ ನಾವು.

ಜೀವ ಜೀವಿಗಳೆಲ್ಲ ನಿನ್ನನ್ನೆ ನಂಬಿಹರು
ಹಿಡಿ ಬಿತ್ತಿದರೆ ಕುಡುಕೆ ಫಲವ ಕೊಡುವ
ಜೀವನದ ಅಕ್ಷಯ ಪಾತ್ರೆಯು ನೀನು
ಬದುಕಿಸಿ ಸಲುಹುತ್ತಿರುವೆ ನೀ ಎಲ್ಲರನ್ನು.

ಕಂದನ ಹೊಲಸಿಗೆ ಹೇಸದ ತಾಯಿಯಂತೆ
ಎಲ್ಲರ ಹೊಲಸ ಸಹಿಸಿ ಕ್ಷಮಿಸಿ ಪಾಪವ ಕಳೆವೆ
ಪಡೆದ ತೃಣವೆಲ್ಲವೂ ನಿನ್ನ ಒಡಲ ಕಾಣಿಕೆಯದು
ಮತ್ತೆ ಸೇರುವೆವು ಕೊನೆಗೆ ನಿನ್ನ ಒಡಲೊಳಗೇನೆ.

ನಿತ್ಯ ಸುಂದರ ಸುಮಂಗಲಿ ನೀನಾಗಿಹೆ
ಜೀವಗಳ ಜೀವದುಸಿರು ನೀನಾಗಿಹೆ
ಹಸಿರು ಸಿರಿಯ ಹೊತ್ತು ಭೂ ಮಾತೆ
ಜೀವಿಗಳೆಲ್ಲವ ಸಲಹಮ್ಮ ಲೋಕಮಾತೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಜಿನ ಮನೆಯವರು
Next post ಗರುಡ ಗಂಭ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

cheap jordans|wholesale air max|wholesale jordans|wholesale jewelry|wholesale jerseys