Home / ಲೇಖನ / ಇತರೆ / ಗೆಳೆತನ

ಗೆಳೆತನ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಪ್ರತಿಯೊಬ್ಬರ ಬಾಳಿನಲ್ಲೂ ಗೆಳೆತನವೆನ್ನುವುದು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಷ್ಟೋ ಬಾರಿ ಗೆಳೆತನವೇ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಅದಕ್ಕೆಂದೇ ಆಂಗ್ಲ ನಾಣ್ಣುಡಿಯೊಂದು “ನಿನ್ನ ಗೆಳೆಯನನ್ನು ತೋರಿಸು ನೀನು ಏನೆಂದು ಹೇಳುತ್ತೇನೆ” ಎನ್ನುತ್ತದೆ. ಮಾನವ ಸಂಘಜೀವಿ ಅವನಿಗೆ ಸ್ನೇಹಿತರು ಬೇಕೇಬೇಕು. ಆದರೆ ಜಾರ್ಜ್ ವಾಷಿಂಗ್ಟನ್ ಅವರ ಈ ಮಾತುಗಳನ್ನು ನೋಡು

associate yourself with
men of good quality
if you esteem your
own reputation,
for it is better to be
alone than in
bad company

ನಿನ್ನ ಗೌರವ, ಪ್ರತಿಷ್ಟೆಗೆ ಬೆಲೆ ಕೊಡುವುದಾದರೆ ಉತ್ತಮ ಗುಣಗಳಿರುವ ವ್ಯಕ್ತಿಗಳೊಂದಿಗೆ ಸೇರು. ಕೆಟ್ಟವರ ಸಹವಾಸಕ್ಕಿಂತ ಒಂಟಿಯಾಗಿರುವುದೇ ಲೇಸು ಎಂದು ಹಿತನುಡಿಗಳನ್ನಾಡಿದ್ದಾರೆ. ಉತ್ತಮ ಗುಣಗಳಿರುವ ವ್ಯಕ್ತಿ ನಮ್ಮ ಗೆಳೆಯನಾದರೆ ಅವನಿಂದ ನಾವೂ ಉತ್ತಮರಾಗಲು ಸಾಧ್ಯ. ಜೊತೆಗೆ ಅಂತಹ ವ್ಯಕ್ತಿಯ ಸಾಹಚರ್ಯದಿಂವ ನಮಗೆ ಗೌರವವೂ ಸಿಕ್ಕುತ್ತದೆ. ಅದೇ ಕೆಟ್ಟವರ ಸಹವಾಸದಿಂದ ಅವಮಾನ, ನೋವು, ಅಪಖ್ಯಾತಿಗಳು ಕಟ್ಟಿಟ್ಟ ಬುತ್ತಿ. ಜೊತೆಗೇ ಅಂತವರ ಒಡನಾಟದಿಂದ ನಮ್ಮ ಉತ್ತಮ ಗುಣಗಳೂ ಮಸುಕಾಗಿ ಹೋಗುತ್ತವೆ. ಆದ್ದರಿಂದಲೇ ಇಂತವರ ಒಡನಾಟ, ಗೆಳೆತನಕ್ಕಿಂತ ಒಂಟಿಯಾಗಿರುವುದೇ ಮೇಲೆನ್ನುತ್ತಾರೆ ವಾಷಿಂಗ್ಟನ್.

ಉತ್ತಮ ಗೆಳೆಯರನ್ನು ಹೊಂದಲು ಪೂರ್ವಜನ್ಮದ ಪುಣ್ಯವಿರಬೇಕು ಎನ್ನುತ್ತಾರೆ ಹಿರಿಯರು. ಇದು ನಿಜವೂ ಹೌದು. ಉತ್ತಮ ಗೆಳೆಯರು ದೊರಕುವುದು, ಉತ್ತಮ ಒಡನಾಡಿಗಳನ್ನು ಹುಡುಕುವುದು ಕಷ್ಟದ ಕೆಲಸವೇ. ಹಾಗೆಂದು ಸಿಕ್ಕ ಸಿಕ್ಕವರನ್ನೇ ನಮ್ಮ ಸ್ನೇಹಿತರನ್ನಾಗಿ ಮಾಡಿಕೊಂಡು, ನಂತರ ಪಶ್ಚಾತ್ತಾಪ ಪಡುವುದರ ಬದಲು, ಒಳ್ಳೆಯ ಸ್ನೇಹಿತ ಒಬ್ಬನಿದ್ದರೂ ಸಾಕು ಅಥವಾ ಯಾರೂ ಇಲ್ಲದಿದ್ದರೆ ಒಂಟಿಯಾಗಿಯೇ ಇದ್ದು ನಮ್ಮೆಲ್ಲ ಭಾವನೆಗಳನ್ನು ನಮ್ಮ ಮನಸ್ಸಿನೊಂದಿಗೇ ಹಂಚಿಕೊಂಡು, ಒಳಿತು-ಕೆಡುಕುಗಳ ಕುರಿತು ವಿವೇಚಿಸೋಣ. ಮನವನ್ನೇ ಆತ್ಮೀಯ ಗೆಳೆಯನನ್ನಾಗಿ ಮಾಡಿಕೊಳ್ಳೋಣ. ಇದಕ್ಕೆ ನೀನೇನನ್ನುತ್ತೀ ಸಖಿ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್ ಎನ್ ಎಸ್ ರಾವ್