ಅದರ ಮಾತಿನ್ನೇಕೆ

ಅದರ ಮಾತಿನ್ನೇಕೆ?  ಆದುದಾಗಿಯೆ ಹೋಯ್ತು!
ಬಯಸಿದುದು ದೊರೆತಿಲ್ಲ-ದೊರೆತಿಹುದು ಬೇಕಿಲ್ಲ!
ಆಸೆಗಳೂ ಮೋಸಗಳೂ-ಬಯಕೆ ಬಾಡಿಯೆಹೋಯ್ತು!
ಇದುವೆ ಜೀವನದಾಟ-ಮಂಜು ನಂಜಿನದೆಲ್ಲ!
ನಾಬೆಳೆಸಿ, ನಿನ್ನೊಲವನೊಲಿಸಲಿಕೆ ದಿನದಿನವು
ಹೂಗಳನು ಪೇರಿಸಿದೆ ರಾಸಿಯಲಿ!-ಅದರೆದೆಯ
ಕಂಪಿನಲಿ ಹುಚ್ಚಾಗಿ ಹಾಡುತಿದೆ ಎನ್ನೆದೆಯು
‘ನಿನಗಾಗಿ ನನ್ನೆಲ್ಲ’-ಎನ್ನೊಲವ ಕೊಳ್ಳೆನುತ!
ನೀ ಬಯಸಿದುದೆ ಬೇರೆ! ನನ್ನ ಸಾವನು ಬಯಸಿ
ಹೂಗಳನು ಹೊರಗೆಸೆದೆ-ಅದನಿಂದು ದಾರಿಗರು
ಎತ್ತಿ ಮುಡಿಯುತಲಿಹರು! ನಿನ್ನ ದ್ವೇಷಾಗ್ನಿಯಲಿ
ಬಾಡಿದಾ ಹೂವುಗಳು ಒಲವಿನಲಿ ಅರಳಿಹುವು!
ಇದುವೆ ಬಾಳಿನ ಹುಚ್ಚು-ಇದಕೆ ಮದ್ದೇ ಇಲ್ಲ!
ಅದಕಾಗಿಯೇ ಇಂದು ಮರೆಯುತಿಹೆ ಅದನೆಲ್ಲ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

ಚಿತ್ರ: ಅಪೂರ್ವ ಅಪರಿಮಿತ Previous post ಗೆಳೆತನ
Next post ಲಂಚ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…